ETV Bharat / state

ಕೊಡಗು ಭೂಕುಸಿತದಲ್ಲಿ ತಾಯಿ-ತಂಗಿ ಸಾವು... ನೋವಲ್ಲೂ ಪ್ರಾಣ ಸ್ನೇಹಿತನ ರಕ್ಷಿಸಿದ ಯುವಕ

author img

By

Published : Aug 25, 2019, 2:58 AM IST

ಗೆಳೆಯನನ್ನ ರಕ್ಷಿಸಿದ ‘ಪ್ರಾಣ’ ಸ್ನೇಹಿತ

ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ತಾಯಿ-ತಂಗಿಯನ್ನು ಕಳೆದುಕೊಂಡರೂ ಪ್ರಾಣ ಸ್ನೇಹಿತನನ್ನು ರಕ್ಷಿಸಿದ ಸುದೀಪ್.

ಕೊಡಗು: ಭೂ ಕುಸಿತದಿಂದ ಮಂಜಿನ ನಗರಿ ಅಕ್ಷರಶಃ ನಲುಗಿ ಹೋಗಿದೆ. ಮಹಾಮಳೆಯಿಂದಾದ ಪ್ರವಾಹ ಹಾಗೂ ಭೂ ಕುಸಿತಕ್ಕೆ ಸಿಲುಕಿ ಮೃತಪಟ್ಟವರ ಪಟ್ಟಿ ಬೆಳೆಯುತ್ತಲೇ ಇದೆ. ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಸಂಭವಿಸಿದ ಭಯಾನಕ ಭೂಕುಸಿತದಲ್ಲಿ ಪ್ರಾಣ ಸ್ನೇಹಿತನೊಬ್ಬ ತನ್ನ ತಾಯಿ-ತಂಗಿಯನ್ನು ಕಳೆದುಕೊಂಡರೂ ಅಳುಕದೇ ಗೆಳೆಯನ ಜೀವ ಉಳಿಸಿದ್ದಾನೆ.

ಹೌದು, ಜಿಲ್ಲೆಯ ವಿರಾಜಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಆಗಸ್ಟ್‌ 2 ನೇ ವಾರದಿಂದ ನಿರಂತರವಾಗಿ ಸುರಿದ ಮಳೆಗೆ ಸಡಿಲಗೊಂಡ ಬೃಹತ್ ಬೆಟ್ಟ ಕುಸಿದು ತೋರಾ ಗ್ರಾಮವನ್ನೇ ಆವರಿಸಿತ್ತು. ಈ ವೇಳೆ ನವೀನ್​ ಎಂಬುವವರ ತಾಯಿ ಮತ್ತು ತಂಗಿ ಮೇಲೆ ಬೀರು ಬಿದ್ದಿತ್ತು. ಆದರೆ ಕಾಲು ಮಣ್ಣಿನಲ್ಲಿ ಸಿಲುಕಿಕೊಂಡಿದ್ದರಿಂದ ತಾಯಿ-ತಂಗಿಯ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಣ್ಣ ಮುಂದೆಯೇ ಹೆತ್ತ ತಾಯಿ, ಒಡಹುಟ್ಟಿದ ತಂಗಿಯನ್ನು ಕಳೆದುಕೊಂಡ ನವೀನ ಎದೆಗುಂದದೇ​, ಇತ್ತ ಮಣ್ಣಿನಡಿ ಸಿಲುಕಿ ನರಳುತಿದ್ದ ಸ್ನೇಹಿತನ ಪ್ರಾಣ ಉಳಿಸಿದ್ದರು.

ಗೆಳೆಯನನ್ನ ರಕ್ಷಿಸಿದ ‘ಪ್ರಾಣ’ ಸ್ನೇಹಿತ

ಕರಾಳ ನೆನೆಪು :

ರೇಷನ್ ಹಾಗೂ ಆಧಾರ್ ಕಾರ್ಡ್ ತೆಗೆದುಕೊಂಡು ನಿರಾಶ್ರಿತ ಕೇಂದ್ರಕ್ಕೆ ಹೊರಟಿದ್ದೆವು. ಅಷ್ಟೊತ್ತಿಗಾಗಲೇ ಬೆಟ್ಟ ಜರಿದ ಭಯಾನಕ ಸದ್ದು ಕೇಳಿಸಿತು. ಮನೆಯಿಂದ ಹೊರಗೆ ಬರುವಷ್ಟರಲ್ಲಿ ಗುಡ್ಡದ ಮಣ್ಣು ನನ್ನ ಸ್ನೇಹಿತ ನವೀನ್​ನ ತಾಯಿ ಮತ್ತು ತಂಗಿ ಮೇಲೆರಗಿತ್ತು. ಅಲ್ಲಿ ಎಲ್ಲವೂ ಸರ್ವನಾಶವಾಗಿತ್ತು. ನನ್ನ ಕಾಲು ಕೆಸರಿನಲ್ಲಿ ಹೂತಿತ್ತು, ಮೇಲೆ ಏಳಲೂ ಆಗದ ಸ್ಥಿತಿಯಲ್ಲಿ ನಾನಿದ್ದೆ. ಕೆಸರು ನೀರನ್ನೇ ಕುಡಿದು ದಾಹ ನೀಗಿಸಿಕೊಂಡೆ. ಆಗ ನನ್ನ ಸ್ನೇಹಿತ ನನ್ನಮ್ಮ ಮತ್ತು ತಂಗಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ನಿನ್ನನ್ನಾದರೂ ಉಳಿಸಿಕೊಳ್ಳುವೆ ಅಂತಾ ನನ್ನನ್ನು ರಕ್ಷಿಸಿದ ಎಂದು ಕರಾಳ ನೆನೆಪನ್ನು ಮೆಲಕು ಹಾಕುತ್ತಾರೆ ಸತೀಶ್.

Intro:ಕೊಡಗು ಭೂ ಕುಸಿತ: ತನ್ನವರನ್ನು ಕಳೆದುಕೊಂಡರೂ ಗೆಳೆಯನನ್ನು ರಕ್ಷಿಸಿದ ಪ್ರಾಣ ಸ್ನೇಹಿತ

ಕೊಡಗು: ಪ್ರಕೃತಿ ವಿಕೋಪ ಒಂದು ನೈಸರ್ಗಿಕ ಪ್ರಕ್ರಿಯೆ. ಆದರೆ ಮಂಜಿನ ನಗರಿ ಮಡಿಕೇರಿಯಲ್ಲಿ ಆಗಸ್ಟ್‌ನಲ್ಲಿ ಸುರಿದ ಮಹಾಮಳೆಗೆ ಪ್ರವಾಹ ಹಾಗೂ ಭೂ ಕುಸಿತಕ್ಕೆ ಸಿಲುಕಿ ಮೃತಪಟ್ಟವರ ಪಟ್ಟಿ ಬೆಳೆಯುತ್ತಿದೆ.ಅದರಲ್ಲೂ ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಸಂಭವಿಸಿದ ಭಯಾನಕ ಭೂ ಕುಸಿತದ ನಂತರದ ದೃಶ್ಯಗಳ ಕರಾಳವನ್ನು ಮಾಸುವುದಿಲ್ಲ..!

ಹೌದು...ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಆಗಸ್ಟ್‌ 2 ನೇ ವಾರದಿಂದ ನಿರಂತರವಾಗಿ ಸುರಿದ ಮಳೆಗೆ ಸಡಿಲಗೊಂಡ ಬೃಹತ್ ಬೆಟ್ಟವೇ ತೋರಾ ಗ್ರಾಮವನ್ನೇ ಆವರಿಸಿತ್ತು. ಸುಮಾರು 40 ಅಡಿಗಳಷ್ಟು ಮಣ್ಣಿನ ರಾಶಿಯೇ ಬಿದ್ದಿತ್ತು.ಪ್ರಾಣ ಉಳಿಸಿಕೊಳ್ಳಲು ಅಂದು ಹಲವರು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾಗಿದ್ದವು.

ಗುಡ್ಡ ಕುಸಿದ ಪರಿಣಾಮ ತನ್ನ ತಾಯಿ ಮತ್ತು ತಂಗಿ ಮೇಲೆಯೇ ಗಾಡ್ರೇಜ್ ಬೀರು ಬಿದ್ದಿತ್ತು.ನನ್ನ ಕಾಲು ಸಿಕ್ಕಿ ಹಾಕಿಕೊಂಡಿದ್ದರಿಂದ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅವರನ್ನೆಂತು ಕಳೆದುಕೊಂಡೆ ಆದರೆ ಮಣ್ಣಿನಡಿ ಸಿಲುಕಿ ನರಳುತಿದ್ದ ನನ್ನ ಸ್ನೇಹಿತನನ್ನು ಉಳಿಸಲು ಮುಂದಾದೆ.
ಅವತ್ತಿನ ದೃಶ್ಯಗಳನ್ನು ನೆನಪಿಸಿಕೊಂಡ್ರೆ ಭಯ-ಭಯ ಅಂತಾರೆ ತೋರಾ ನಿವಾಸಿ ನವೀನ್.

ಬೈಟ್-1 ನವೀನ್, ತೋರಾ ನಿವಾಸಿ

ರೇಷನ್ ಹಾಗೂ ಆಧಾರ್ ಕಾರ್ಡ್ ತೆಗೆದುಕೊಂಡು ನಿರಾಶ್ರಿತ ಕೇಂದ್ರಕ್ಕೆ ಹೊರಟಿದ್ದೆವು.ಅಷ್ಟೊತ್ತಿಗಾಗಲೆ ಬರೆ (ಬೆಟ್ಟ) ಜರಿದ ಭಯಾನಕ ಸದ್ದು ಕೇಳಿಸಿತು.ಮನೆಯಿಂದ ಹೊರಗೆ ಬರುವಷ್ಟರಲ್ಲಿ ಗುಡ್ಡದ ಮಣ್ಣು ನನ್ನ ಸ್ನೇಹಿತನ ತಾಯಿ ಮತ್ತು ಮಗಳ ಮೇಲೆರಗಿತ್ತು.ಅಲ್ಲಿ ಎಲ್ಲವೂ ಸರ್ವನಾಶವಾಗಿತ್ತು.ನನ್ನ ಕಾಲು ಕೆಸರಿನಲ್ಲಿ ಹೂತಿತ್ತು.ಮೇಲೆ ಏಳಲೂ ಆಗದ ಸ್ಥಿತಿಯಲ್ಲಿ ನಾನಿದ್ದೆ.ಕೆಸರು ನೀರನ್ನೇ ಕುಡಿದು ದಾಹ ನೀಗಿಸಿಕೊಂಡೆ.ಆಗ ನನ್ನ ಸ್ನೇಹಿತ ನನ್ನಮ್ಮ ಮತ್ತು ತಂಗಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ.ನಿನ್ನನ್ನಾದರೂ ಉಳಿಸಿಕೊಳ್ಳುವೆ ಎಂದು ನನ್ನನ್ನು ರಕ್ಷಿಸಿದ ನನ್ನ ಸ್ನೇಹಿತ ಎಂದು ಅವತ್ತಿನ ಸನ್ನಿವೇಶವನ್ನು ಆತಂಕದಿಂಲೇ ವಿವರಿಸುತ್ತಾರೆ ಗ್ರಾಮದ ಯುವಕ ಸತೀಶ್.

ಬೈಟ್-2 ಸತೀಶ್, ಗಾಯಗೊಂಡ ತೋರಾ ನಿವಾಸಿ.

ಜಿಲ್ಲೆಯಲ್ಲಿ ಒಟ್ಟಾರೆ ಸಂಭವಿಸಿದ ಪ್ರವಾಹ ಹಾಗೂ ಭೂ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 13 ಕ್ಕೆ ಏರಿದೆ. ತೋರಾ ಗ್ರಾಮದಲ್ಲಿ ಕಣ್ಮರೆ ಆಗಿರುವ 4 ಜನರಿಗೆ ಜಿಲ್ಲಾಡಳಿತ ತೀವ್ರ ಶೋಧ ಮುಂದುವರೆಸಿದೆ.ಹಾಗೆಯೇ ಕಣ್ಮರೆಯಾಗಿರುವ ಸಂಬಂಧಿಕರ ಆಕ್ರಂದನ ಮುಂದುವರೆದಿದೆ. ಹಲವರು ಇಂದಾದರೂ ನಮ್ಮವರು ಸಿಗಬಹುದಾ..? ಎನ್ನುವ ನಂಬಿಕೆಯಲ್ಲೇ ಘಟನಾ ಸ್ಥಳದಲ್ಲೇ ಕಾಯುತ್ತಿದ್ದಾರೆ.

- ಕೆ.ಸಿ.ಮಣಿಕಂಠ,ಈಟಿವಿ ಭಾರತ, ಕೊಡಗು.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.