ETV Bharat / state

ವಾಲ್ಮೀಕಿ ಜಯಂತಿ ದಿನ ರಾಹುಲ್ ಗಾಂಧಿಯಿಂದ  ವಾಲ್ಮೀಕಿಗೆ ಅಪಮಾನ: ಬಿ ಸಿ ನಾಗೇಶ್

author img

By

Published : Oct 10, 2022, 3:14 PM IST

ಬಿ ಸಿ ನಾಗೇಶ್
ಬಿ ಸಿ ನಾಗೇಶ್

ಬಿಜೆಪಿ‌ ಪಕ್ಷ ಕಟ್ಟಿದೆ. ಪಾದಯಾತ್ರೆ ಮೂಲಕ ಬಿಜೆಪಿ ಸ್ಥಾಪನೆಯಾಗಿದೆ. ಜನರ ಸಮಸ್ಯೆ ಬಗೆಹರಿಸುವ ಮೂಲಕ ಬಿಜೆಪಿ ಈ ರೀತಿಯ ಸಾಕಷ್ಟು ಅಭಿಯಾನಗಳನ್ನ ಮಾಡಿದೆ ಎಂದು ಕೊಡಗು ಉಸ್ತುವಾರಿ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.

ಕೊಡಗು: ಕಾಂಗ್ರೆಸ್​ನ ಬಿ. ಕೆ ಹರಿಪ್ರಸಾದ್ ಗೆ ಹೆಚ್ಚಿನ ಒತ್ತು ಕೊಡುವ ಅವಶ್ಯಕತೆ ಇಲ್ಲ. ಅವರೇನು ಚುನಾವಣೆ ಎದುರಿಸಿ ನಾಯಕರಾದವರಲ್ಲ. ಕಾಂಗ್ರೆಸ್​ಗೆ ಈ ರೀತಿಯ ಪಾದಯಾತ್ರೆ ಹೊಸತು. ಬಿಜೆಪಿಗೆ ಅಲ್ಲ. ಭಾರತ್ ಜೋಡೊ ಬಿ‌ಜೆಪಿಗೆ ಭಯ ಹುಟ್ಟಿದೆ ಎಂಬ ಹರಿಪ್ರಸಾದ್ ಹೇಳಿಕೆ ವಿಚಾರ ಸಂಬಂಧಿಸಿದಂತೆ ಕೊಡಗು ಉಸ್ತುವಾರಿ ಸಚಿವ ಬಿ ಸಿ ನಾಗೇಶ್​ ಪ್ರತಿಕ್ರಿಯೆ ನೀಡಿದ್ದಾರೆ.

ಕೊಡಗು ಉಸ್ತುವಾರಿ ಸಚಿವ ಬಿ ಸಿ ನಾಗೇಶ್ ಅವರು ಮಾತನಾಡಿದರು

ಬಿಜೆಪಿ‌ ಪಕ್ಷ ಕಟ್ಟಿದೆ. ಪಾದಯಾತ್ರೆ ಮೂಲಕ ಬಿಜೆಪಿ ಸ್ಥಾಪನೆಯಾಗಿದೆ. ಜನರ ಸಮಸ್ಯೆ ಬಗೆಹರಿಸುವ ಮೂಲಕ ಬಿಜೆಪಿ ಈ ರೀತಿಯ ಸಾಕಷ್ಟು ಅಭಿಯಾನಗಳನ್ನ ಮಾಡಿದೆ. ಮಾಜಿ‌ ಸಿಎಂ ಯಡಿಯೂರಪ್ಪ ಕೂಡ ಹಿಂದೆ ಸಾಕಷ್ಟು ಪಾದಯಾತ್ರೆ ಮಾಡುವ ಮೂಲಕ ಗಮನ ಸೆಳೆದಿದ್ರು. ಸಂಘಟನೆಯನ್ನು ಮಾಡಿದ್ದಾರೆ.

ಬಿಜೆಪಿ ಪಕ್ಷದಿಂದ ಸಮಸ್ಯೆಗಳನ್ನು ಕೇಳುವ ಪಾದಯಾತ್ರೆ ಮಾಡುತ್ತೇವೆ. ಕಾಂಗ್ರೆಸ್​ ಈಗ ಭಾರತ್ ಜೋಡೊ ಯಾತ್ರೆ ಮಾಡುತ್ತಿದೆ ಅಂತ ನಾವು ಪಾದಯಾತ್ರೆ ಮಾಡೋದಿಲ್ಲ. ಕಾಂಗ್ರೆಸ್​ಗೆ ಹೆದರಿ ನಾವು ಪಾದಯಾತ್ರೆ ಮಾಡ್ತಾ ಇಲ್ಲ. ಕಾಂಗ್ರೆಸ್​ನವರೇ ನಮ್ಮನ್ನ ಕಾಫಿ ಮಾಡಿರೋದು. ಅವರು ಈ ಪಾದಯಾತ್ರೆ ಮಾಡುತ್ತಿದ್ದಾರೆ. ಅವರಿಗೆ ಜನ ಹೇಗಿದ್ದಾರೆ‌ ಟೀ ಅಂಗಡಿ ಹೇಗಿದೆ? ಎಂಬುದನ್ನ ಈಗ ನೋಡ್ತಾ ಇದ್ದಾರೆ ಎಂದು ಮಡಿಕೇರಿಯಲ್ಲಿ ಬಿ.ಸಿ ನಾಗೇಶ್ ಅವರು ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್​ನದು ಬಾಸ್ ಇಸ್ ಆಲ್ ವೇಸ್ ರೈಟ್ ಎಂಬ ಸಂಸ್ಕೃತಿ: ಬಾಸ್ ಎಂಬುದು ಇಲ್ಲಿ‌ ಒಂದು ಕುಟುಂಬ ಅಷ್ಟೇ. ಕಾಂಗ್ರೆಸ್​ ಒಡೆದು‌ ಆಳುವ ನೀತಿಯಲ್ಲೆ ಬೆಳೆದು ಬಂದಿರೋದು ಇವರು, ಬರೀ ಕಾಂಗ್ರೆಸ್​ ಒಡೆಯಲ್ಲಿಲ್ಲ, ದೇಶವನ್ನೂ ಕೂಡ ಒಡೆದಿದ್ದಾರೆ. ಬ್ರಿಟೀಷರು ಯಾವ ರೀತಿ ಭಾರತವನ್ನ ಒಡೆದರೋ ಕಾಂಗ್ರೆಸ್​​ ಕೂಡ ಅದೇ ಹಾದಿ ಹಿಡಿದಿದೆ.

ಕಾಂಗ್ರೆಸ್​ ದೇಶವನ್ನ ಜೋಡಿಸುವ ಕೆಲಸ ಎಂದೂ ಮಾಡಿಲ್ಲ. ಹಿರಿಯ ಮುಸಲ್ಮಾನ ನಾಯಕರು ಕಾಂಗ್ರೆಸ್ ಬಿಡುವ ಭಯದಿಂದ ಭಾರತ್ ಜೋಡೊ ಆರಂಭವಾಗಿರೋದು. ಭಾರತ್ ಜೋಡೊ ಮೂಲಕ ಕಾಂಗ್ರೆಸ್​ ನಾಟಕವಾಡುತ್ತಿದೆ ಎಂದು ಮಡಿಕೇರಿಯಲ್ಲಿ ಕೊಡಗು ಉಸ್ತುವಾರಿ ಸಚಿವ ಬಿ.ಸಿ ನಾಗೇಶ್ ಹೇಳಿಕೆ ನೀಡಿದ್ದಾರೆ.

ಭಾರತ್ ಜೋಡೊ ಮೂಲಕ‌ ನಾಟಕ: ಕಾಂಗ್ರೆಸ್ ನವರು ತುಮಕೂರಿನಲ್ಲಿ ನಡೆದ ಭಾರತ್ ಜೋಡೊದಲ್ಲಿ 5 ಕಿ ಮೀ ಕೂಡ ನಡೆಯಲು ಆಗಲಿಲ್ಲ‌. ವಾಲ್ಮೀಕಿ ಜಯಂತಿಯಂದು ರಾಹುಲ್ ಗಾಂಧಿ ವಾಲ್ಮೀಕಿಗೆ ಅಪಮಾನ ಮಾಡಿದ್ದಾರೆ‌. ವಾಲ್ಮೀಕಿಯ ಫೋಟೋ ಇದ್ದ ಸ್ಟೇಜ್ ಕಡೆಗೂ ಕಾಂಗ್ರೆಸ್​ ನಾಯಕರು ಸುಳಿಯದಿರೋದು ದುರಾದೃಷ್ಟ. ಓಟಿಗಾಗಿ ಇವರು ಭಾರತ್ ಜೋಡೊ ಮೂಲಕ‌ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೇಶದ ಸಂಸ್ಕೃತಿಗೆ ಮರ್ಯಾದೆ ಕೊಡುವ ಕೆಲಸವನ್ನ ಅವರು ಕಲಿತೇ ಇಲ್ಲ. ಭಾರತ್ ಜೋಡೊದಲ್ಲಿ RSS ಬಗ್ಗೆ ಸಾರ್ವಕರ್ ಬಗ್ಗೆ ಮಾತನಾಡೋದು ಏನಿದೆ. ಮುಸಲ್ಮಾನ ಓಟಿಗಾಗಿ‌ ಕಾಂಗ್ರೆಸ್ಸಿಗರು ಈ ರೀತಿ ಮಾಡುತ್ತಿದ್ದಾರೆ. ನನ್ನ ಮಗ ಮತ್ತೆ ಒಬ್ಬಂಟಿಯಾಗುತ್ತಾನೆ ಎಂಬ ಕಾರಣಕ್ಕೆ ಈ ರೀತಿಯ ನಾಟಕ ವಾಡುತ್ತಿದ್ದಾರೆ. ಇದು ಭಾರತ್ ಜೋಡೊ ಅಲ್ಲ, ಕಾಂಗ್ರೇಸ್ ಜೋಡೊ. ಜನರು ಕೊನೆಯದಾಗಿ ಭಾರತ್ ಚೋಡೊ ದಿನವನ್ನ ನೀಡುತ್ತಾರೆ ಎಂದು ಮಡಿಕೇರಿಯಲ್ಲಿ ಕೊಡಗು ಉಸ್ತುವಾರಿ ಸಚಿವ ಬಿ. ಸಿ‌ ನಾಗೇಶ್ ಲೇವಡಿ ಮಾಡಿದ್ದಾರೆ.

ಓದಿ: ಜ್ಞಾನಭಾರತಿ ವಿವಿಯಲ್ಲಿ ವಿದ್ಯಾರ್ಥಿನಿ ಮೇಲೆ ಹರಿದ ಬಿಎಂಟಿಸಿ ಬಸ್.. ವಿದ್ಯಾರ್ಥಿಗಳಿಂದ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.