ETV Bharat / state

ಸ್ಪೃಶ್ಯ ಜಾತಿಗಳನ್ನು ಎಸ್​ಸಿ ಮೀಸಲು ಪಟ್ಟಿಯಿಂದ ಬೇರ್ಪಡಿಸಬೇಕು.. ರಾಜ್ಯಸಭೆ ಮಾಜಿ ಸದಸ್ಯ ಒತ್ತಾಯ

author img

By

Published : Jul 31, 2020, 6:20 PM IST

Untouchables must be separated from the SC reserve
ಸ್ಪೃಶ್ಯ ಜಾತಿಗಳನ್ನು ಎಸ್​ಸಿ ಮೀಸಲು ಪಟ್ಟಿಯಿಂದ ಬೇರ್ಪಡಿಸಬೇಕು: ರಾಜ್ಯಸಭೆ ಮಾಜಿ ಸದಸ್ಯ ಒತ್ತಾಯ

ಲಮಾಣಿ, ಬೋವಿ, ಕೊರಮ ಹಾಗೂ ಕೊರಚ ಜಾತಿಗಳು ಸ್ಪೃಶ್ಯ ಜಾತಿಗಳಾಗಿವೆ. ದೇಶದಲ್ಲಿ ಎಲ್ಲಿಯೂ ಈ ಜಾತಿಗಳು ಎಸ್​ಸಿ ಪಟ್ಟಿಯಲ್ಲಿಲ್ಲ. ಆದರೆ, ಕರ್ನಾಟಕದಲ್ಲಿ ಮಾತ್ರ ಈ ನಾಲ್ಕು ಜಾತಿಗಳನ್ನು ಎಸ್​ಸಿ ಪಟ್ಟಿಯಲ್ಲಿ ಸೇರಿಸಿದ್ದು, ಅಸ್ಪೃಶ್ಯ ಜಾತಿಗಳಿಗೆ ಇದರಿಂದ ತೀವ್ರ ಅನ್ಯಾಯವಾಗುತ್ತಿದೆ..

ಕಲಬುರಗಿ : ಸ್ಪೃಶ್ಯ ಜಾತಿಗಳನ್ನು ಎಸ್​ಸಿ ಮೀಸಲು ಪಟ್ಟಿಯಿಂದ ಹೊರಗಿಡಬೇಕೆಂದು ರಾಜ್ಯಸಭೆ ಮಾಜಿ ಸದಸ್ಯ ಕೆ ಬಿ ಶಾಣಪ್ಪ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸ್ಪೃಶ್ಯ ಜಾತಿಗಳನ್ನು ಎಸ್​ಸಿ ಮೀಸಲು ಪಟ್ಟಿಯಿಂದ ಬೇರ್ಪಡಿಸಬೇಕು.. ರಾಜ್ಯಸಭೆ ಮಾಜಿ ಸದಸ್ಯ ಒತ್ತಾಯ

ಕಲಬುರಗಿಯಲ್ಲಿ ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ಮಹಾಸಭಾದ ವತಿಯಿಂದ ಮಾತನಾಡಿದ ಅವರು, ಲಮಾಣಿ, ಬೋವಿ, ಕೊರಮ ಹಾಗೂ ಕೊರಚ ಜಾತಿಗಳು ಸ್ಪೃಶ್ಯ ಜಾತಿಗಳಾಗಿವೆ. ದೇಶದಲ್ಲಿ ಎಲ್ಲಿಯೂ ಈ ಜಾತಿಗಳು ಎಸ್​ಸಿ ಪಟ್ಟಿಯಲ್ಲಿಲ್ಲ. ಆದರೆ, ಕರ್ನಾಟಕದಲ್ಲಿ ಮಾತ್ರ ಈ ನಾಲ್ಕು ಜಾತಿಗಳನ್ನು ಎಸ್​ಸಿ ಪಟ್ಟಿಯಲ್ಲಿ ಸೇರಿಸಿದ್ದು, ಅಸ್ಪೃಶ್ಯ ಜಾತಿಗಳಿಗೆ ಇದರಿಂದ ತೀವ್ರ ಅನ್ಯಾಯವಾಗುತ್ತಿದೆ.

ಈ ಕುರಿತು ಅಭಿಪ್ರಾಯ ತಿಳಿಸಲು ಈಗಾಗಲೇ ಸುಪ್ರೀಂಕೋರ್ಟ್ ಸೂಚಿಸಿದೆ. ಆದರೂ, ರಾಜ್ಯ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ. ಕೂಡಲೇ ಸುಪ್ರಿಂಕೋರ್ಟ್‌ಗೆ ಅಭಿಪ್ರಾಯ ತಿಳಿಸಬೇಕು ಎಂದು ಒತ್ತಾಯಿಸಿದರು. ಆದಷ್ಟು ಬೇಗ ಎಸ್​ಸಿ ಮೀಸಲಾತಿಗೆ ಅರ್ಹರಾಗಿರೋ ಅಸ್ಪೃಶ್ಯ ಜಾತಿಗಳಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಕೆ ಬಿ ಶಾಣಪ್ಪ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.