ETV Bharat / state

ಚುನಾವಣೆ ಬಜೆಟ್ಟೂ ಅಲ್ಲ, ಜನಸಾಮಾನ್ಯರ ಬಜೆಟ್ಟೂ ಅಲ್ಲ ಇದು ಫ್ಲಾಪ್ ಬಜೆಟ್: ಪ್ರಿಯಾಂಕ್ ಖರ್ಗೆ

author img

By

Published : Feb 1, 2023, 8:35 PM IST

ಬಡತನ ರೇಖೆಯಿಂದ ಕೆಳಗಿರುವ ಜನರನ್ನು ಬಜೆಟ್‌ ಕಡೆಗಣಿಸಿದೆ. ಕರ್ನಾಟಕದ ಋಣ ತೀರಿಸುವಲ್ಲಿಯೂ ವಿತ್ತ ಸಚಿವೆ ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಟೀಕಿಸಿದರು.

KPCC spokesperson Priyank Kharge
ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ

ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ

ಕಲಬುರಗಿ: "ನಿರ್ಮಲಾ ಸೀತಾರಾಮನ್ ಅವರಿಂದು ಮಂಡಿಸಿದ ಬಜೆಟ್ ಫ್ಲಾಪ್ ಆಗಿದೆ. ಇತ್ತ ಚುನಾವಣೆ ಬಜೆಟ್ಟೂ ಅಲ್ಲ, ಅತ್ತ ಜನಸಾಮಾನ್ಯರ ಬಜೆಟ್ಟೂ ಅಲ್ಲ. ಹಳೆಯ ಬಜೆಟ್ ಅನ್ನೇ ಪುನರಾವರ್ತನೆ ಮಾಡಿದ್ದಾರೆ" ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದರು.

ಎಂಟು ವರ್ಷದಿಂದ ಬಿಜೆಪಿಯವರು ಏನೂ ಹೇಳಿದ್ದರೋ ಅದನ್ನೇ ಈ ಬಾರಿಯೂ ಹೇಳಿದ್ದಾರೆ. 2ನೇ ಬಾರಿ ಕರ್ನಾಟಕದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್​ ಕರ್ನಾಟಕಕ್ಕೆ ಕೊಟ್ಟಿದ್ದೇನು?, ಕರ್ನಾಟಕದ ಋಣ ತೀರಿಸುವ ಕೆಲಸ ಕೂಡಾ ಅವರು ಮಾಡಿಲ್ಲ ಎಂದರು.

ಬಜೆಟ್‌ನಲ್ಲಿ ಬಡತನ ರೇಖೆಯಿಂದ ಕೆಳಗಿರುವ ಜನರನ್ನೂ ಮೇಲಕ್ಕೆ ತರಲು ಯಾವ ಯೋಜನೆಯನ್ನೂ ರೂಪಿಸಿಲ್ಲ. ದೇಶದ ಆರ್ಥಿಕ ವ್ಯವಸ್ಥೆ (ಜಿಡಿಪಿ) ಕುಸಿತ ಕಾಣುತ್ತಿದೆ. ದೇಶದಲ್ಲಿ ಗಳಿಕೆಯಿಲ್ಲದೇ ಜನರ ಆದಾಯ ಕಡಿಮೆ ಆಗಿದೆ. ಅನೇಕರಿಗೆ ಆದಾಯವೇ ಇಲ್ಲ. ಹೀಗಿರುವಾಗ ಇನ್ಕಮ್ ಟ್ಯಾಕ್ಸ್ ವಿನಾಯತಿ‌ ಹೆಚ್ಚಿಸಿದ್ದಾರೆ ಎಂದು ದೂರಿದರು.

75 ವರ್ಷದಲ್ಲಿ ಇಲ್ಲದ ನಿರುದ್ಯೋಗ ಸಮಸ್ಯೆ ಈಗ ಸೃಷ್ಟಿಯಾಗಿದೆ. ಉದ್ಯೋಗ ಸೃಷ್ಟಿಗೆ ಇವರು ಏನು ಮಾಡ್ತಿದ್ದಾರೆ ಹೇಳ್ತಿಲ್ಲ. ಅವರೇ ಹೇಳಿದ ಹಾಗೆ ಇಲ್ಲಿವರೆಗೆ ದೇಶದಲ್ಲಿ ನೂರಾರು ಸ್ಮಾರ್ಟ್ ಸಿಟಿಗಳು ತಲೆ ಎತ್ತಬೇಕಿತ್ತು. ಒಂದೇ ಒಂದು ಸ್ಮಾರ್ಟ್ ಸಿಟಿಯಾದ್ರೂ ತೋರಿಸಲಿ ಬಿಜೆಪಿಯವರು. ಬರೀ ಘೋಷಣೆ ಮಾಡುವ ಮೂಲಕ ಸರ್ಕಾರ ತಮ್ಮಷ್ಟಕ್ಕೆ ತಾವೇ ಬೆನ್ನು ಚಪ್ಪರಿಸಿಕೊಳ್ಳುವ ಸರ್ಕಾರವಾಗಿದೆ ಎಂದು ಟೀಕಿಸದರು.

ಜನರು ಬಡತನ ರೇಖೆಗಿಂತ ಕೆಳಗಡೆ ಹೋಗ್ತಿದ್ದಾರೆ. ಆರ್ಥಿಕ ಅಸಮಾನತೆ ತಲೆದೋರಿದೆ. ಮಾತೆತ್ತಿದ್ರೆ ಭ್ರಷ್ಟಾಚಾರ ಮುಕ್ತವಾಗಿಸುವ ಭರವಸೆ ಕೊಡ್ತಾರೆ. ನಿನ್ನೆ ರಾಷ್ಟ್ರಪತಿ ಭಾಷಣದಲ್ಲೂ ಇದೇ ನಡೀತು. ಆದರೆ ಎಂಟು ವರ್ಷದಿಂದ ಇವರಿಗೆ ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಆಗಲಿಲ್ಲ ಎಂದರು.

ಕರ್ನಾಟಕದ 28 ಎಂಪಿಗಳಿದ್ರೂ ಕನ್ನಡಿಗರ ಪರ ಮಾತಾಡೋರು ಯಾರೂ ಇಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಮೇಲೆ ಕಲಬುರಗಿಗೆ ನೀಡಿದ್ದ ರೈಲ್ವೆ ವಿಭಾಗ, ರೈಲ್ವೆ ಡಿವಿಜನ್, ಐಐಟಿ, ಟೆಕ್ಸಟೈಲ್ ಪಾರ್ಕ್ ಎಲ್ಲವೂ ಕ್ಯಾನ್ಸಲ್ ಆಗಿದೆ. ಜನರ ಪರ ಧ್ವನಿ ಎತ್ತಲೂ ಅವರಿಗೆ ಆಗುತ್ತಿಲ್ಲ. ಹಾಜರಿ ಹಾಕಲು ಟಿಎ, ಡಿಎಗಾಗಿ ಎಂಪಿಗಳು ಅಲ್ಲಿಗೆ ಹೋಗ್ತಿದ್ದಾರಾ? ತಮಿಳನಾಡಿನಿಂದ ಕರ್ನಾಟಕಕ್ಕೆ ಬಂದು ಎರಡು ಬಾರಿ ಗೆದ್ದು ಹೋಗಿರುವ ನಿರ್ಮಲಾ ಸಿತಾರಾಮನ್ ರಾಜ್ಯದ ಋಣ ತೀರಿಸುವ ಕೆಲಸ ಕೂಡಾ ಮಾಡ್ಲಿಲ್ಲ ಎಂದು ಆಕ್ಷೇಪಿಸಿದರು.

ಇದನ್ನೂಓದಿ:

ಬಜೆಟ್‌ನ ಒಟ್ಟು ಗಾತ್ರ ಗೊತ್ತೇ?: ದೇಶದ ವಿತ್ತೀಯ ಕೊರತೆಯೇನು? ಯಾವುದಕ್ಕೆ ಎಷ್ಟು ಖರ್ಚು?

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅಂತ್ಯೋದಯ ಯೋಜನೆ; ಮುಂದಿನ ಬಜೆಟ್​ವರೆಗೂ ಮುಂದುವರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.