ETV Bharat / state

ಚುನಾವಣೆಯಲ್ಲಿ ಗೆಲ್ಲಬೇಕೆಂಬ ಚಿಂತೆಯಿಂದಾಗಿ ಮೋದಿ ಭೇಟಿ: ಬಿಜೆಪಿ ವಿರುದ್ಧ ಪ್ರಿಯಾಂಕ್​ ಖರ್ಗೆ ವಾಗ್ದಾಳಿ

author img

By

Published : Nov 10, 2022, 2:47 PM IST

MLA Priyank Kharge outrage against BJP  Kharge outrage against BJP over PM Modi visits  MLA Priyank Kharge  ಚುನಾವಣೆಯಲ್ಲಿ ಗೆಲ್ಲಬೇಕೆಂಬ ಚಿಂತೆಯಿಂದಾಗಿ ಮೋದಿ ಭೇಟಿ  ಬಿಜೆಪಿ ವಿರುದ್ಧ ಪ್ರಿಯಾಂಕ್​ ಖರ್ಗೆ ವಾಗ್ದಾಳಿ  ಕಾಂಗ್ರೆಸ್​ ನಾಯಕ ಪ್ರಿಯಾಂಕ್​ ಖರ್ಗೆ  ಬಿಜೆಪಿಯವರಿಗೆ ದೇಶದ ಅಭಿವೃದ್ಧಿ ಬಗ್ಗೆ ಚಿಂತೆಯಿಲ್ಲ  ಶಾಸಕ ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ವಾಗ್ದಾಳಿ  ಬ್ರ್ಯಾಂಡ್ ಬೆಂಗಳೂರು ಎಂಬ ಹೆಸರು ಅಳಿಸಿಹೋಗ್ತಿದೆ
ಬಿಜೆಪಿ ವಿರುದ್ಧ ಪ್ರಿಯಾಂಕ್​ ಖರ್ಗೆ ವಾಗ್ದಾಳಿ

ಬಿಜೆಪಿಗೆ ಬರೀ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಚಿಂತೆ ಹೆಚ್ಚಾಗ್ತಿದೆ. ಹೀಗಾಗಿ ಮೋದಿ ರಾಜ್ಯಕ್ಕೆ ಬರ್ತಿದ್ದಾರೆ ಎಂದು ಕಾಂಗ್ರೆಸ್​ ನಾಯಕ ಪ್ರಿಯಾಂಕ್​ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿ : ಬಿಜೆಪಿಯವರಿಗೆ ದೇಶದ ಅಭಿವೃದ್ಧಿ ಬಗ್ಗೆ ಚಿಂತೆಯಿಲ್ಲ. ದಿನದ 24 ಗಂಟೆ ಚುನಾವಣೆ ಗೆಲ್ಲುವುದರ ಬಗ್ಗೆಯೇ ಚಿಂತನೆ ಮಾಡುತ್ತಿರುತ್ತಾರೆ. ಕರ್ನಾಟಕದಲ್ಲಿ ಚುನಾವಣೆ ಸಮೀಪಿಸಿದೆ ಅಂತಾನೇ ಮೋದಿ ರಾಜ್ಯಕ್ಕೆ ಬರುತ್ತಿರುವುದು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿಯವರ ಕಾರ್ಯವೈಖರಿ ನೋಡಿದ್ರೆ ಗೊತ್ತಾಗುತ್ತೆ ಇದೊಂದು ಮಿನಿಮಮ್ ಗೌರ್ನಮೆಂಟ್‌ನೂ ಅಲ್ಲ ಅನ್ನೋದು. ಗುಜರಾತ್‌ನಲ್ಲಿ ಎರಡು ಹಂತದ ಚುನಾವಣೆ ನಡೆಸುತ್ತಿದ್ದಾರೆ. ಚುನಾವಣೆ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಾರೆ‌. ರಾಜ್ಯವನ್ನ ಆರ್‌ಎಸ್‌ಎಸ್ ಪ್ರಯೋಗಾಲಯ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ, ಅದು ವರ್ಕೌಟ್ ಆಗಲಿಲ್ಲ. ಪ್ಲಾನ್ ವಿಫಲವಾಗಿದೆ ಎಂದರು.

ಇದೇ ವೇಳೆ, ಇದು ಡಬಲ್ ಇಂಜಿನ್ ಸರ್ಕಾರ ಅಲ್ಲ. ಟ್ರಬಲ್ ಇಂಜಿನ್ ಸರ್ಕಾರ ಎಂದು ವ್ಯಂಗ್ಯವಾಡಿದ ಪ್ರೀಯಾಂಕ್ ಖರ್ಗೆ, ಪಿಎಸ್ಐ ಹಗರಣ, ಗಂಗಾ ಕಲ್ಯಾಣ ಸ್ಕ್ಯಾಮ್ ಬಗ್ಗೆ ಚರ್ಚೆಗೆ ಬರ್ತಾರಾ? ಅಥವಾ ಸಿಎಂ ಖುರ್ಚಿ ಮಾರಾಟವಾಗ್ತಿದೆ ಎಂದು ಯತ್ನಾಳ ಹೇಳಿಕೆ ವಿಚಾರವಾಗಿ ಚರ್ಚೆಗೆ ಬರ್ತಾರಾ ಎಂದು ಸವಾಲು ಹಾಕಿದರು.

ಬ್ರ್ಯಾಂಡ್​ ಬೆಂಗಳೂರು ಹೆಸರು ಮಾಯ: ಸರ್ಕಾರಗಳ ಕಾರ್ಯವೈಖರಿಯಿಂದ ಬ್ರ್ಯಾಂಡ್ ಬೆಂಗಳೂರು ಎಂಬ ಹೆಸರು ಅಳಿಸಿಹೋಗ್ತಿದೆ. ರಾಜಕ್ಕೆ ಬಂದು ಕೇವಲ‌ ಉದ್ದೂದ್ದ ಭಾಷಣ ಕೊಟ್ಟು ಹೋದ್ರೆ ಕನ್ನಡಿಗರಿಗೆ ಉದ್ಯೋಗ ಸಿಗಲ್ಲ ಎಂದು ಮೋದಿ ಬರುವಿಕೆಗೆ ಟಾಂಗ್ ನೀಡಿದರು. ಕೋಲಿ ಸಮಾಜವನ್ನ ಎಸ್ಟಿಗೆ ಸೇರಿಸ್ತಿವಿ ಅಂತಾ ಹೇಳಿದ್ರು ಇದುವರೆಗೆ ಆಗಿಲ್ಲ. ಕೋಲಿ ಸಮಾಜವನ್ನ ಎಸ್ಟಿಗೆ ಸೇರಿಸುವ ಸಲುವಾಗಿ ಕೇಂದ್ರ ಸಚಿವರನ್ನ ಭೇಟಿ ಮಾಡಿದ್ದೇನೆ. ಆದರೆ ಈ ಬಗ್ಗೆ ಕೇಂದ್ರ/ರಾಜ್ಯ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ಆರೋಪಿಸಿದರು.

ಇನ್ನು ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆಂಬ ಅಭಿಯಾನಕ್ಕೆ ತಿರುಗೇಟು ನೀಡಿದ ಪ್ರೀಯಾಂಕ್, ಪೇ ಸಿಎಂನಿಂದ ಸರ್ಕಾರಕ್ಕೆ ಹೊರಬರಲು ಆಗುತ್ತಿಲ್ಲ. ಕಲಬುರಗಿಯ ಬಿಜೆಪಿಯವರಿಗೆ ಕನಸ್ಸಿನಲ್ಲಿಯೂ ಕಾಂಗ್ರೆಸ್ ಅಂದ್ರೆ ಬೆವರು ಇಳಿಯುತ್ತಿದೆ. ಇನ್ನೂ ಎಲ್ಲೆಲ್ಲಿ ಪೋಸ್ಟರ್ ಅಂಟಿಸ್ತೀರಾ ಹೇಳಿ ನಾನೇ ಪ್ರಿಂಟ್ ಹಾಕಿಸಿಕೊಡ್ತಿನಿ.

ಕೊರೊನಾ‌ ಸಂದರ್ಭದಲ್ಲಿ ಬಿಜೆಪಿ ಸಂಸದರು/ಉಸ್ತುವಾರಿ ಸಚಿವರು ಎಲ್ಲಿದ್ದರು. ಕಲಬುರಗಿ ಜಿಲ್ಲೆಯಲ್ಲಿ ಯಾವ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆಗೆ ಬನ್ನಿ ಅಂದ್ರೆ ಬರೋದಿಲ್ಲ. ಇಂತಹ ಕೃತ್ಯಗಳಿಂದ ಜನರ ದಿಕ್ಕೂ ತಪ್ಪಿಸುವ ಕೆಲಸ ಮಾಡ್ತಾರೆ ಎಂದು ಹೇಳಿದರು.

ನಮಗೆ ಜನರ ಬೆಂಬಲ ಇದೆ. ಇದನ್ನ ಸಹಿಸಿಕೊಳ್ಳಲು ಬಿಜೆಪಿ ಅವರಿಗೆ ಆಗುತ್ತಿಲ್ಲ. ಭಾರತ್ ಜೋಡೋ ಯಾತ್ರೆ, ಎಐಸಿಸಿ ಅಧ್ಯಕ್ಷ ಚುನಾವಣೆ ಹಾಗೂ ಅಭಿವೃದ್ಧಿ ಕಾರ್ಯದ ಹಿನ್ನೆಲೆ‌ ಕೇಂದ್ರ ಸಚಿವರನ್ನ ಭೇಟಿ ಮಾಡಿದ್ದೇನೆ. ಹೀಗಾಗಿ ತಿಂಗಳು ಕಾಲ ನನಗೆ ಕಲಬುರಗಿಗೆ ಬರಲು ಆಗಿಲ್ಲ ಎಂದು ಸ್ಪಷ್ಟಣೆ ನೀಡಿದರು.

ಓದಿ: ಖುರ್ಚಿಗಾಗಿ ಬಸವರಾಜ ಬೊಮ್ಮಾಯಿ ಆರ್​ಎಸ್ಎಸ್ ಕೈಗೊಂಬೆಯಾಗಿದ್ದಾರೆ: ಪ್ರಿಯಾಂಕ ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.