ಕಲಬುರಗಿ: ಕಂಟ್ರಿಮೇಡ್ ಪಿಸ್ತೂಲ್ ಖರೀದಿ ಆರೋಪದ ಮೇಲೆ ಶಾಸಕ ಪ್ರಿಯಾಂಕ್ ಖರ್ಗೆ ಆಪ್ತ, ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜು ಕಪನೂರನ್ನು ಇಲ್ಲಿನ ಯಡ್ರಾಮಿ ಪೊಲೀಸರು ಶನಿವಾರ ಸಾಯಂಕಾಲ ಬಂಧಿಸಿದ್ದಾರೆ.
ರಾಜು ಕಪನೂರ ಯಡ್ರಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಗುರಲಿಂಗಪ್ಪ ಎಂಬಾತನಿಂದ ಎರಡು ಕಂಟ್ರಿಮೇಡ್ ಪಿಸ್ತೂಲ್, 30 ಜೀವಂತ ಗುಂಡು ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಗುರುಲಿಂಗಪ್ಪ ಪೊಲೀಸರ ಮುಂದೆ ನೀಡಿದ್ದ ವಿಡಿಯೋ ಸ್ಟೇಟ್ಮೆಂಟ್ನಲ್ಲಿ ಕಪನೂರ್ ಹೆಸರು ಉಲ್ಲೇಖಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎರಡು ಬಾರಿ ರಾಜು ಕಪನೂರಗೆ ನೋಟಿಸ್ ನೀಡಿದ್ದರು. ಆದರೆ ಇದಕ್ಕೆ ಕಪನೂರ ಉತ್ತರ ನೀಡಿರಲಿಲ್ಲ, ಹೀಗಾಗಿ ಶನಿವಾರ ಪೊಲೀಸರು ಬಂಧಿಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ರಾಜು ಕಪನೂರ ನನ್ನನ್ನು ಕೊಲೆ ಮಾಡಲು ಪಿಸ್ತೂಲ್ ಖರೀದಿ ಮಾಡಿದ್ದಾರೆ ಎಂದು ಶನಿವಾರ ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸುದ್ದಿಗೋಷ್ಟಿ ನಡೆಸಿ ಆರೋಪಿಸಿದ್ದರು. ಅಲ್ಲದೆ ಈ ಬಗ್ಗೆ ವಿಡಿಯೋ ರಿಲೀಸ್ ಮಾಡಿದ್ದರು.
ಇದನ್ನೂ ಓದಿ: ಹಾಸನದಲ್ಲಿ ಚಿರತೆಗಳ ಕೊಂದು ಉಗುರು, ಮೂಳೆ ಮಾರಾಟ: 8 ಮಂದಿ ಆರೋಪಿಗಳ ಬಂಧನ