ETV Bharat / state

ಗುಡಿಸಲಿಗೆ ಬೆಂಕಿ: ಹಸು ಸಜೀವ ದಹನ

author img

By

Published : Mar 13, 2021, 11:29 AM IST

Cow Burnt Alive in Kalburgi
ಗುಡಿಸಲಿಗೆ ಬೆಂಕಿ: ಹಸು ಸಜೀವ ದಹನ

ಗುಡಿಸಲಿಗೆ ಬೆಂಕಿ ವ್ಯಾಪಿಸಿದ ಪರಿಣಾಮ ಹಸುವೊಂದು ಸಜೀವ ದಹನವಾಗಿರುವ ದಾರುಣ ಘಟನೆ ಶಹಬಾದ್ ತಾಲೂಕಿನ ಮರತೂರ ಗ್ರಾಮದಲ್ಲಿ ನಡೆದಿದೆ.

ಕಲಬುರಗಿ: ಹೊಲದ ಬದುವಿಗೆ ಹಚ್ಚಿದ ಬೆಂಕಿ ಕಿಡಿಯಿಂದ ಗುಡಿಸಲಿಗೆ ಬೆಂಕಿ ವ್ಯಾಪಿಸಿದ ಪರಿಣಾಮ ಹಸುವೊಂದು ಸಜೀವ ದಹನಗೊಂಡ ದಾರುಣ ಘಟನೆ ಶಹಬಾದ್ ತಾಲೂಕಿನ ಮರತೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದೇವಾನಂದ ಮರತೂರ ಅವರಿಗೆ ಸೇರಿದ ಹಸು ಸಜೀವ ದಹನವಾಗಿದೆ. ಇನ್ನೊಂದು ಹಸುವಿನ ದೇಹ ಕೂಡಾ ಬಹುತೇಕ ಸುಟ್ಟಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ. ಕೊಟ್ಟಿಗೆಯಲ್ಲಿ ಆಕಳು, ಎತ್ತು ಮತ್ತು ಕರುವನ್ನ ಕಟ್ಟಲಾಗಿತ್ತು. ಬೆಂಕಿ ತಗುಲಿದ ಪರಿಣಾಮ ಆಕಳಿಗೆ ಬೆಂಕಿ ಆವರಿಸಿದೆ. ಇನ್ನೂ ಬೆಂಕಿ ತಗುಲಿದ್ದರೂ, ಜೀವ ರಕ್ಷಣೆಗಾಗಿ ಬೆಂಕಿಯಿಂದ ಹಸು ಹೊರ ಬಂದಿದ್ದು, ತೀವ್ರ ಸುಟ್ಟ ಗಾಯಗಳಿಂದ ನರಳಿ ಸಾವನ್ನಪ್ಪಿದೆ.

ಮೊಬೈಲ್​ನಲ್ಲಿ ದೃಶ್ಯ ಸೆರೆಯಾಗಿದ್ದು, ಮನಕಲುಕುವಂತಿವೆ. ಉಳಿದಂತೆ ಎತ್ತು, ಕರುಗಳಿಗೂ ಸುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಗುಡುಸಿಲಿನಲ್ಲಿದ್ದ ಆಹಾರ ಧಾನ್ಯ ಸಹ ಸುಟ್ಟು ಭಸ್ಮವಾಗಿದ್ದು, ರೈತನ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಈ ಸಂಬಂಧ ಶಹಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.