ETV Bharat / state

ನಾಗಪ್ಪನ ಕೈ ಹಿಡಿದ 'ಹಣ್ಣುಗಳ ರಾಜ' : ಸಾವಯವ ಮಾವಿಗೀಗ ಎಲ್ಲಿಲ್ಲದ ಬೇಡಿಕೆ

author img

By

Published : Apr 13, 2021, 8:10 AM IST

organic mango
ಸಾವಯುವ ಮಾವು ಬೆಳೆದ ರೈತ ನಾಗಪ್ಪ

ಹಾವೇರಿ ತಾಲೂಕಿನ ಬಸಾಪುರದ ನಾಗಪ್ಪ ಮುದ್ದಿ ಎಂಬುವರು ಸಾವಯವ ಮಾವು ಬೆಳೆದು ಅದರಲ್ಲಿ ಯಶಸ್ಸು ಕಂಡಿದ್ದಾರೆ. 7 ಎಕರೆಯಿಂದ ಆರಂಭಿಸಿದ ಮಾವು ಬೆಳೆಯನ್ನು ಇದೀಗ 30 ಎಕರೆಗೆ ವಿಸ್ತರಿಸಿದ್ದಾರೆ.

ಹಾವೇರಿ: ಕುರಿಗಾಹಿ ಆಗಿದ್ದ ರೈತನೋರ್ವ ಮೂಲ ಕಸುಬಿನಿಂದ ನಷ್ಟ ಅನುಭವಿಸಿದ ಕಾರಣ ಮಾವು ಬೆಳೆಗಾರರಾದರು. ಮಾವು ಬೆಳೆ ಇದೀಗ ಈ ರೈತನ ಕೈ ಹಿಡಿದಿದ್ದು, ಯಶಸ್ವಿ ಮಾವು ಬೆಳೆಗಾರ ಎನಿಸಿಕೊಂಡಿದ್ದಾರೆ.

ಸಾವಯವ ಮಾವು ಬೆಳೆದ ರೈತ ನಾಗಪ್ಪ

ಹಾವೇರಿ ತಾಲೂಕಿನ ಬಸಾಪುರದ ನಾಗಪ್ಪ ಮುದ್ದಿ ಮೂಲತಃ ಕುರಿಗಾಹಿ. ಕುರಿಸಾಕಾಣಿಕೆ ಕಸುಬು ಮಾಡಿಕೊಂಡಿದ್ದ ನಾಗಪ್ಪನಿಗೆ ಕುರಿಗಳಿಗೆ ಕಾಣಿಸಿಕೊಂಡ ರೋಗ ಇನ್ನಿಲ್ಲದ ಆರ್ಥಿಕ ನಷ್ಟ ಉಂಟು ಮಾಡಿತ್ತು. ಇದರಿಂದ ಕುರಿಕಾಯುವ ಕಸುಬು ಬಿಟ್ಟ ನಾಗಪ್ಪ, ಮುಖಮಾಡಿದ್ದು ಸಾವಯವ ಕೃಷಿಯತ್ತ. ಅದರಲ್ಲೂ ತೋಟಗಾರಿಕೆ ಬೆಳೆಯಾದ ಮಾವು ಬೆಳೆಯನ್ನು ಆಯ್ಕೆ ಮಾಡಿಕೊಂಡ್ರು. ನಾಗಪ್ಪ ಆರಂಭದಲ್ಲಿ ಏಳು ಎಕರೆಯಲ್ಲಿ ಮಾವು ಬೆಳೆದರು. ಸಾವಯವ ಬೆಳೆ ನೈಸರ್ಗಿಕವಾಗಿ ಹಣ್ಣು ಮಾಡುವಿಕೆ ಕಾರ್ಯ ನಾಗಪ್ಪನ ಕೈಹಿಡಿಯಿತು. ನಾಗಪ್ಪ ಇದೀಗ 30 ಎಕರೆ ಜಮೀನಿನಲ್ಲಿ ಮಾವು ಬೆಳೆಯುತ್ತಿದ್ದಾರೆ. ಇವರು ಬೆಳೆದ ಈ ಸಾವಯುವ ಮಾವು ಬೆಂಗಳೂರಿನಿಂದ ರಾಜಸ್ಥಾನದವರೆಗೆ ರಫ್ತಾಗುತ್ತದೆ.

ಸಾವಯವವಾಗಿ ಮಾವು ಬೆಳೆಯುವ ನಾಗಪ್ಪ ಮೊದ ಮೊದಲು ಮಧ್ಯವರ್ತಿಗಳಿಗೆ ಗುತ್ತಿಗೆ ನೀಡುತ್ತಿದ್ದರು. ಅನಂತರ ತಾನೇ ನೈಸರ್ಗಿಕವಾಗಿ ಹಣ್ಣು ಮಾಡಿ ಮಾರಲು ಆರಂಭಿಸಿದ್ರು. ಇದರಿಂದಾಗಿ ಜಿಲ್ಲೆಯಲ್ಲಿ ಪ್ರಸಿದ್ಧಿಯಾದ ನಾಗಪ್ಪ ಗ್ರಾಹಕನಿಗೆ ಹಣ್ಣುಗಳನ್ನ ನೇರವಾಗಿ ಮಾರಾಟ ಮಾಡುತ್ತಾನೆ. ರಾಸಾಯನಿಕ ಬಳಸದೇ ಸಾವಯವವಾಗಿ ಬೆಳೆದ ಮಾವು ನೈಸರ್ಗಿಕವಾಗಿ ಹಣ್ಣು ಮಾಡುವುದರಿಂದ ಗ್ರಾಹಕರು ಸಹ ನಾಗಪ್ಪನ ಬಳಿ ಹಣ್ಣು ಖರೀದಿಸುತ್ತಾರೆ.

ನಾಗಪ್ಪನಿಗೆ ಮತೋಟಗಾರಿಕೆ ಬೆಳೆ ಮಾವು ನಾಗಪ್ಪಗೆ ವರದಾನವಾಗಿ ಪರಿಣಮಿಸಿದೆ. ಇದೀಗ 30 ಎಕರೆಯಲ್ಲಿ ಸಾವಯುವ ಮಾವು ಬೆಳೆಯುವ ನಾಗಪ್ಪ ಜಿಲ್ಲೆಯ ಪ್ರಮುಖ ಮಾವು ಬೆಳೆಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.