ETV Bharat / state

ಫಸಲು ನೀಡದ ಮಾವು: ನೂರಾರು ಗಿಡಗಳನ್ನು ಕಡಿದು ಹಾಕಿದ ರೈತ!

author img

By

Published : Apr 9, 2020, 5:58 PM IST

Farmer who steals mango plants in haveri
ಫಸಲು ನೀಡದ ಮಾವು

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದ ರೈತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾವಿನ ಸಸಿಗಳನ್ನು ಎಂಟು ವರ್ಷಗಳಿಂದ ಬೆಳೆಸಿದ್ದರು. ಇದರಿಂದ ಫಸಲು ಬಾರದ ಕಾರಣ ಗಿಡಗಳನ್ನು ಕಡಿದು ಹಾಕಿದ್ದಾರೆ.

ಹಾನಗಲ್: ಫಸಲು ಬಾರದ ಹಿನ್ನೆಲೆ ಎಂಟು ಎಕರೆ ಜಮೀನಿನಲ್ಲಿ ಬೆಳೆದ ಮಾವಿನ ಗಿಡಗಳನ್ನು ರೈತ ಕಡಿದು ಹಾಕಿದ್ದಾನೆ.

Farmer who steals mango plants in haveri
ಫಸಲು ನೀಡದ ಮಾವು

ಜಿಲ್ಲೆಯ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದ ಗುಡ್ಡನಗೌಡ ಹೊಸಗೌಡ್ರ ಎಂಬ ರೈತ ಎಳೆಂಟು ವರ್ಷಗಳಿಂದ ಬೆಳೆಸಿದ್ದ ಮಾವಿನ ಗಿಡಗಳು ಫಸಲು ನೀಡಿರಲಿಲ್ಲ. ಇದರಿಂದ ಬೇಸತ್ತ ರೈತ ಎಲ್ಲಾ ಗಿಡಗಳನ್ನು ಕಡಿದು ಹಾಕಿದ್ದಾನೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿದ್ದ ಗಿಡಗಳು ಈಗ ನೆಲಕಚ್ಚಿವೆ. ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ಮನವಿ ಮಾಡಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.