ಹಾಸನ : ಆಲೂಗಡ್ಡೆ ಬೀಜ ಖರೀದಿ ಮಾಡಿದ ಎರಡು ವಾರಗಳ ನಂತರ ಮಳೆಯನ್ನು ನೋಡಿಕೊಂಡು ಬಿತ್ತನೆ ಮಾಡಬೇಕು ಎಂದು ರೈತರಿಗೆ ಹೆಚ್ ಡಿ ರೇವಣ್ಣ ಸಲಹೆ ನೀಡಿದರು.
ಮಾಜಿ ಸಚಿವ ರೇವಣ್ಣ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ರೌಂಡ್ಸ್ ಹಾಕಿ ಆಲೂಗಡ್ಡೆ ಬಿತ್ತನೆ ಬೀಜ ಖರೀದಿ ರೈತರ ಹಾಗೂ ವರ್ತಕರ ಸಮಸ್ಯೆ ಆಲಿಸಿದರು. ನಿನ್ನೆಯಿಂದ ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಮತ್ತು ಖರೀದಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಜಿಲ್ಲೆಯಲ್ಲಿ ಹಿಂದೆ 1.6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಕೇವಲ 16 ಸಾವಿರ ಪ್ರದೇಶದಲ್ಲಿ ಮಾತ್ರ ಆಲೂಗಡ್ಡೆ ಬೆಳೆಯಲಾಗುತ್ತಿದೆ. ಸದ್ಯ ನಮ್ಮಲ್ಲಿ 1.3 ಲಕ್ಷ ಕ್ವಿಂಟಲ್ ಆಲೂಗಡ್ಡೆ ಬಿತ್ತನೆ ಬೀಜ ದಾಸ್ತಾನು ಇದೆ. ಇನ್ನೂ 5 ಲಕ್ಷ ಆಲೂಗಡ್ಡೆ ಬಿತ್ತನೆ ಬೀಜ ಪಂಜಾಬಿನಿಂದ ಬರಬೇಕಿದೆ ಎಂದ್ರು.
ಎಪಿಎಂಸಿ ಮಾರುಕಟ್ಟೆಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಭೇಟಿ.. ಆಲೂಗಡ್ಡೆ ಬಿತ್ತನೆ ಬೀಜ ಪರಿಶೀಲನೆ!!
ಹಾಸನ : ಆಲೂಗಡ್ಡೆ ಬೀಜ ಖರೀದಿ ಮಾಡಿದ ಎರಡು ವಾರಗಳ ನಂತರ ಮಳೆಯನ್ನು ನೋಡಿಕೊಂಡು ಬಿತ್ತನೆ ಮಾಡಬೇಕು ಎಂದು ರೈತರಿಗೆ ಹೆಚ್ ಡಿ ರೇವಣ್ಣ ಸಲಹೆ ನೀಡಿದರು.
ಮಾಜಿ ಸಚಿವ ರೇವಣ್ಣ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ರೌಂಡ್ಸ್ ಹಾಕಿ ಆಲೂಗಡ್ಡೆ ಬಿತ್ತನೆ ಬೀಜ ಖರೀದಿ ರೈತರ ಹಾಗೂ ವರ್ತಕರ ಸಮಸ್ಯೆ ಆಲಿಸಿದರು. ನಿನ್ನೆಯಿಂದ ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಮತ್ತು ಖರೀದಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಜಿಲ್ಲೆಯಲ್ಲಿ ಹಿಂದೆ 1.6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಕೇವಲ 16 ಸಾವಿರ ಪ್ರದೇಶದಲ್ಲಿ ಮಾತ್ರ ಆಲೂಗಡ್ಡೆ ಬೆಳೆಯಲಾಗುತ್ತಿದೆ. ಸದ್ಯ ನಮ್ಮಲ್ಲಿ 1.3 ಲಕ್ಷ ಕ್ವಿಂಟಲ್ ಆಲೂಗಡ್ಡೆ ಬಿತ್ತನೆ ಬೀಜ ದಾಸ್ತಾನು ಇದೆ. ಇನ್ನೂ 5 ಲಕ್ಷ ಆಲೂಗಡ್ಡೆ ಬಿತ್ತನೆ ಬೀಜ ಪಂಜಾಬಿನಿಂದ ಬರಬೇಕಿದೆ ಎಂದ್ರು.
TAGGED:
hassan potato lates news