ETV Bharat / state

ಅಕ್ಕಸಾಲಿಗರಿಗೆ ಅಪಮಾನ ಆರೋಪ: ಗುರುರಾಜ ಕರಜರಗಿಗೆ ಸಂದಿರುವ ಡಾಕ್ಟರೇಟ್ ರದ್ದಿಗೆ ಆಗ್ರಹ

author img

By

Published : Jan 16, 2020, 7:25 PM IST

Protest demanding cancellation of Doctorate to Dr. Gururaj Karajagi
ಡಾ. ಗುರುರಾಜ ಕರಜರಗಿಗೆ ಸಂದಿರುವ ಡಾಕ್ಟರೇಟ್ ಪದವಿ ರದ್ದಿಗೆ ಆಗ್ರಹಿಸಿ ಪ್ರತಿಭಟನೆ

ಡಾ. ಗುರುರಾಜ ಕರಜರಗಿಗೆ ನೀಡಲಾಗಿರುವ ಡಾಕ್ಟರೇಟ್ ಪದವಿ ರದ್ದು ಪಡಿಸುವಂತೆ ಸರಕಾರವನ್ನು ಆಗ್ರಹಿಸಿ ಜಿಲ್ಲಾ ವಿಶ್ವಕರ್ಮ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಹಾಸನ: ಡಾ. ಗುರುರಾಜ ಕರಜರಗಿಗೆ ನೀಡಲಾಗಿರುವ ಡಾಕ್ಟರೇಟ್ ಪದವಿ ರದ್ದು ಪಡಿಸುವಂತೆ ಸರಕಾರವನ್ನು ಆಗ್ರಹಿಸಿ ಜಿಲ್ಲಾ ವಿಶ್ವಕರ್ಮ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಡಾ. ಗುರುರಾಜ ಕರಜರಗಿಗೆ ಸಂದಿರುವ ಡಾಕ್ಟರೇಟ್ ಪದವಿ ರದ್ದಿಗೆ ಆಗ್ರಹಿಸಿ ಪ್ರತಿಭಟನೆ

2020 ಜನವರಿ 1ರ ಶುಕ್ರವಾರ ಬೆಳಗ್ಗೆ 6:45 ರಿಂದ 7ಗಂಟೆಗೆ ಪ್ರಸಾರವಾದ ಹಾಸನ ಆಕಾಶವಾಣಿಯಲ್ಲಿ ಕರುಣಾಳು ಬಾ ಬೆಳಕೆ ಎಂಬ ಕಾರ್ಯಕ್ರಮದಲ್ಲಿ ಅಕ್ಕ ಸಾಲಿಗರು ಕಳ್ಳರೆಂದು ಬಿಂಬಿಸಿ ಪ್ರಸಾರ ಮಾಡಲಾಗಿದೆ. ಅವರು ನಮ್ಮನ್ನು ಮತ್ತು ನಮ್ಮ ವಿಶ್ವ ಕರ್ಮ ಸಮಾಜವನ್ನು ಹಿಂದಿನಿಂದಲೂ ನಿಂದನೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.

ನಮ್ಮ ಸಮಾಜವು ಬಹು ಪ್ರಾಚೀನ ಕಾಲದಿಂದಲು ಇಡೀ ಮನುಕುಲಕ್ಕೆ ಉಪಯುಕ್ತವಾದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ನಾವು ಮಾಂಗಲ್ಯ, ಕಾಲುಂಗುರ ಹಾಗೂ ಇತರೆ ಸ್ತ್ರೀಯರ ಒಡವೆಯನ್ನು ಅಗತ್ಯಕ್ಕೆ ತಕ್ಕಂತೆ ಮಾಡಿಕೊಡಯತ್ತಿದ್ದೇವೆ. ಅಷ್ಟೇ ಅಲ್ಲ ನಮ್ಮ ಸಮಾಜದವರು ರೈತಾಪಿವರ್ಗದವರಿಗೆ ಕೃಷಿ ಉಪಯೋಗ ಸಾಧನಗಳು, ಗೃಹ ನಿರ್ಮಾಣ ಮಾಡುವವರಿಗೆ ಬೇಕಾದ ಸಾಮಾಗ್ರಿಗಳು ಮಾತ್ರವಲ್ಲದೇ ಸೂಜಿ ದಬ್ಬಳಗಳನ್ನು ತಯಾರಿಸಿ ಕೊಡುತ್ತಾರೆ. ಪ್ರಾಚೀನ ಕಾಲದಿಂದಲೂ ರಾಜ ಮಹಾರಾಜರುಗಳಿಗೆ ಕತ್ತಿ, ಗುರಾಣಿ, ಮದ್ದು, ಗುಂಡು ಫಿರಂಗಿಗಳನ್ನು ನೀಡುತ್ತಾ ಬಂದಿದೆ ಎಂದು ಜಿಲ್ಲಾ ವಿಶ್ವಕರ್ಮ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಜಿ.ವಿ. ಜಗನ್ನಾಥ್ ಹೇಳಿದರು.

ಡಾ. ಗುರುರಾಜು ಕರಜರಗಿರವರು ಬರೆದಿರುವ ಕರುಣಾಳು ಬಾ ಬೆಳಕೆ ಎಂಬ ಪುಸ್ತಕದಲ್ಲಿ ಭಾಗ (6) 553 ಬುದ್ದಿವಂತಿಕೆ ಎಂಬ ಶೀರ್ಷಕೆಯಲ್ಲಿ 'ತನ್ನ ತಂಗಿಯ ಮಾಂಗಲ್ಯವಾದರು ಸರಿಯೇ ಬಂಗಾರವನ್ನು ಕದಿಯದೇ ಬಿಡುವವನಲ್ಲ. ಯಾವುದೇ ಕೆಲಸ ಕೊಟ್ಟರು ಚಿನ್ನದಲ್ಲಿ ಬಂದಷ್ಟನ್ನು ಕದ್ದೇ ತೀರುತ್ತಾನೆ' ಎಂದು ಉಲ್ಲೇಖಿಸುವ ಮೂಲಕ ನಮ್ಮ ಅಕ್ಕಸಾಲಿಗರ ಸಮಾಜವನ್ನು ಕಳ್ಳರೆಂಬಂತೆ ಬಿಂಬಿಸಲಾಗಿದೆ ಎಂದು ದೂರಿದರು. ಆದರೆ, ಇಂತಹ ವ್ಯಕ್ತಿಗೆ ಹೇಗೆ ಡಾಕ್ಟರೇಟ್ ಪದವಿಯನ್ನ ನೀಡಿದರೆಂದು ನಮಗೆ ಅರ್ಥವಾಗುತ್ತಿಲ್ಲ. ಕೂಡಲೇ ಸರ್ಕಾರವು ಈ ವ್ಯಕ್ತಿಗೆ ನೀಡಿದ ಡಾಕ್ಟರೇಟ್ ಪದವಿಯನ್ನು ಈ ಕೂಡಲೆ ರದ್ದುಪಡಿಸಬೇಕು ಮತ್ತು ಈ ಪುಸ್ತಕನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದರು.

ಅಷ್ಟೇಅಲ್ಲ, ಈ ವ್ಯಕ್ತಿಯು ದೂರದರ್ಶನ ಮತ್ತು ಆಕಾಶವಾಣಿ, ಪತ್ರಿಕೋಧ್ಯಮಗಳ ಮೂಲಕ ಅಕ್ಕ ಸಾಲಿಗರ ಸಮಾಜಕ್ಕೆ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ಅವರ ವಿರುದ್ಧ ಉಗ್ರ ಪ್ರತಿಭಟನೆಯನ್ನು ಮತ್ತು ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಎಚ್ಚರಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Intro:ಹಾಸನ: ಡಾ|| ಗುರುರಾಜು ಕರಜರಗಿಗೆ ನೀಡಲಾಗಿರುವ ಡಾಕ್ಟರೇಟ್ ಪದವಿ ರದ್ದು ಪಡಿಸುವಂತೆ ಸರಕಾರವನ್ನು ಆಗ್ರಹಿಸಿ ಜಿಲ್ಲಾ ವಿಶ್ವಕರ್ಮ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
    ೨೦೨೦ ಜನವರಿ ೧ರ ಶುಕ್ರವಾರ ಬೆಳಿಗ್ಗೆ ೬:೪೫ ರಿಂದ ೭ ಗಂಟೆಗೆ ಪ್ರಸಾರವಾದ ಹಾಸನ ಆಕಾಶವಾಣಿಯಲ್ಲಿ ಕರುಣಾಳು ಬಾ ಬೆಳಕೆ ಎಂಬ ಕಾರ್ಯಕ್ರಮದಲ್ಲಿ ಅಕ್ಕ ಸಾಲಿಗರು ಕಳ್ಳರೆಂದು ಬಿಂಬಿಸಿ ಪಸಾರ ಮಾಡಲಾಗಿದೆ. ನಮ್ಮ ಸಮಾಜವು ಬಹು ಪ್ರಾಚೀನ ಕಾಲದಿಂದಲು ಇಡೀ ಮನುಕುಲಕ್ಕೆ ತುಂಬಾ ಹೆಚ್ಚು ಉಪಯುಕ್ತವಾದ ಕೊಡುಗೆಗಳನ್ನು ನೀಡುತ್ತಾ ಬಂದಿದೆ ಎಂದರು.
ದೇಶ-ವಿದೇಶಗಳಿಂದ ಪ್ರವಾಸಕ್ಕೆಂದು ಭಾರತಕ್ಕೆ ಬರುತ್ತಾರೆ. ನಾವು ಕೊಟ್ಟಂತ ಶಿಲ್ಪ ಕಲಾ ವೈಭವ ಕಲೆಯನ್ನು ನೋಡಲಿಕ್ಕೆ ಬರುತ್ತಾರೆ. ಆದರೆ ನಾವು ಯಾವ ಸಮಾಜದವರೆಂದು ಇದುವರೆಗೂ ಏನನ್ನು ಕೇಳದೆ ಮಾಂಗಲ್ಯ, ಕಾಲುಂಗುರವನ್ನು ನಾವು ಕೂಡ ಕೇಳದೇ ಅಗತ್ಯಕ್ಕೆ ತಕ್ಕಂತೆ ಸ್ತ್ರೀಯರ ಒಡವೆಯನ್ನು ಮಾಡಿಕೊಡಯತ್ತಿದ್ದೇವೆ ಎಂದು ತಿಳಿಸಿದರು.
ಹೆಣ್ಣು ಸೌಂದರ್ಯವಾಗಿ ಕಾಣಬೇಕೆಂದರೆ ಚಿನ್ನಭರಣಗಳೇ ಬಹುಮುಖ್ಯವಾಗಿದೆ. ನಮ್ಮ ಸಮಾಜದವರು ರೈತಾಪಿವರ್ಗದವರಿಗು, ಕೃಷಿ ಉಪಯೋಗ ಸಾಧನಗಳು, ಗೃಹ ನಿರ್ಮಾಣ ಹಾಗೂ ಗೃಹೋಪಯೋಗಿ ಸಾಮಾಗ್ರಿಗಳು ಸುಜಿ ದಬ್ಬುಳಗಳನ್ನು, ರಾಜ ಮಹಾರಾಜರುಗಳಿಗೆ ಕತ್ತಿ, ಗುರಣಿ, ಮದ್ದು, ಗುಂಡು ಫಿರಂಗಿಗಳನ್ನು ಮತ್ತು ತಾಯಿ ಗರ್ಭದಿಂದ ಬಂದ ಕೂಸುವಿನ ಹೆಸರು ಇಡುವುದರಿಂದ ಹಿಡಿದು ಪಂಚಾಂಗ ಸೃಷ್ಣ ಕರ್ತರು ನಾವೇಯಾಗಿರುತ್ತೇವೆ. ಯಾವುದೆ ಅಪೇಕ್ಷೆಗಳನ್ನು ಇಟ್ಟು ಕೊಳ್ಳದೆ ಇದ್ದರೂ ಸಹ ನಮ್ಮನ್ನು ಮತ್ತು ನಮ್ಮ ವಿಶ್ವ ಕರ್ಮ ಸಮಾಜವನ್ನು ಹಿಂದಿನಿಂದಲೂ ನಿಂದನೆ ಮಾಡಿಕೊಂಡು ಬಂದಿರುತ್ತಾರೆ ಬರುತ್ತಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.
     ಡಾ|| ಗುರುರಾಜು ಕರಜರಗಿರವರು ಬರೆದಿರುವ ಕರುಣಾಳು ಬಾ ಬೆಳಕೆ ಎಂಬ ಪುಸ್ತಕದಲ್ಲಿ ಭಾಗ (೬) ೫೫೩ ಬುದ್ದಿವಂತಿಕೆ ಎಂಬ ಶೀರ್ಷಕೆಯಲ್ಲಿ ತನ್ನ ತಂಗಿಯ ಮಾಂಗಲ್ಯವಾದರು ಸರಿಯೇ ಬಂಗಾರವನ್ನು ಕದಿಯದೇ ಬಿಡುವವನಲ್ಲ ಎಂಬ ಯಾವುದೇ ಕೆಲಸ ಕೊಟ್ಟರು ಚಿನ್ನದಲ್ಲಿ ಬಂದಷ್ಟನ್ನು ಕದೇ ತೀರುತ್ತೇನೆ ಎಂದು ನಮ್ಮ ಅಕ್ಕ ಸಾಲಿಗರ ಸಮಾಜವನ್ನು ಕಳ್ಳರೆಂಬ ಮನೋಭಾವದಿಂದ ಲೇಖನ ಬರೆದಿರುತ್ತಾನೆ ಎಂದು ದೂರಿದರು. ಇಂತಹ ವ್ಯಕ್ತಿಗೆ ಹೇಗೆ ಡಾಕ್ಟರೇಟ್ ಪದವಿಯನ್ನ ನೀಡಿದರೆಂದು ನಮಗೆ ಅರ್ಥವಾಗುತ್ತಿಲ್ಲ. ಕೂಡಲೇ ಸರಕಾರವು ಈ ವ್ಯಕ್ತಿಗೆ ನೀಡಿದ ಡಾಕ್ಟರೇಟ್ ಪದವಿಯನ್ನು ಈ ಕೂಡಲೆ ರದ್ದು ಪಡಿಸಿ ಮತ್ತು ಈ ಪುಸ್ತಕನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದರು.
ಈ ವ್ಯಕ್ತಿಯು ನಮ್ಮ ಅಕ್ಕ ಸಾಲಿಗರ ಸಮಾಜಕ್ಕೆ ದೂರದರ್ಶನ ಮತ್ತು ಆಕಾಶವಾಣಿ, ಪತ್ರಿಕೋಧ್ಯಮದಲ್ಲಿ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ಈ ವ್ಯಕ್ತಿಯ ವಿರುದ್ಧ ಉಗ್ರವಾಗಿ ಪ್ರತಿಭಟನೆಯನ್ನು ಮತ್ತು ಮಾನನಷ್ಟ ಹೂಡಬೇಕಾಗುತ್ತದೆ ಎಂದು ಎಚ್ಚರಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬೈಟ್ : ಜಿ.ವಿ. ಜಗನ್ನಾಥ್, ಜಿಲ್ಲಾ ವಿಶ್ವಕರ್ಮ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.


Body:0


Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.