ETV Bharat / state

ಪತ್ನಿಗೆ ಪದೇ ಪದೇ ಮೆಸೇಜ್​ ಮಾಡುತ್ತಿದ್ದ ಟೈಲರ್​... ಬರ್ಬರವಾಗಿ ಕೊಂದ ಗಂಡ

author img

By

Published : Oct 14, 2022, 7:21 AM IST

man murder over message  murder over message issue in Hassan  Hassan crime news  Man message send to woman  woman husband killed to man  ಆರೋಪಿಯ ಪತ್ನಿಗೆ ಕೊಲೆಯಾದ ಗಂಗಾಧರ್ ಪದೇ ಪದೇ ಮೇಸೇಜ್  ಪತ್ನಿಗೆ ಪದೇ ಪದೇ ಮೆಸೇಜ್​ ಮಾಡುತ್ತಿದ್ದ ಟೈಲರ್  ಮನಸ್ಸೋ ಇಚ್ಛೆ ಹಲ್ಲೆ  ದಶಕಗಳಿಂದ ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದ ಗಂಗಾಧರ್  ಯಾರೊಟ್ಟಿಗೂ ಜಗಳವಾಡದ ವ್ಯಕ್ತಿ ಹೀಗೆ ಏಕಾಏಕಿ ಹತ್ಯೆ  ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ತನಿಖೆ
ಪತ್ನಿಗೆ ಪದೇ ಪದೇ ಮೆಸೇಜ್​ ಮಾಡುತ್ತಿದ್ದ ಟೈಲರ್​ನ ಹತ್ಯೆ ಮಾಡಿದ ಗಂಡ

ಪತ್ನಿಗೆ ಪದೇ ಪದೇ ಮೆಸೇಜ್​ ಮಾಡುತ್ತಿದ್ದ ಟೈಲರ್​ನ್ನು ಪತಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹಾಸನ: ಪತ್ನಿಗೆ ಮೆಸೇಜ್ ಮಾಡಿದ ಸಂಬಂಧ ಪತಿಯೊಬ್ಬ ಟೈಲರ್‌ನ್ನು ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಮೃತ ವ್ಯಕ್ತಿ ಊಪಿನಹಳ್ಳಿ ಗ್ರಾಮದ ಗಂಗಾಧರ್ (40) ಎಂದು ಗುರುತಿಸಲಾಗಿದೆ. ಭರತ್ ಕೊಲೆ ಮಾಡಿದ ಆರೋಪಿ.

ಭರತ್ ಪತ್ನಿಗೆ ಗಂಗಾಧರ್ ಪದೇ ಪದೇ ಮೆಸೇಜ್ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದೇ ವಿಷಯವಾಗಿ ಭರತ್, ಸೋಮು, ಚಿರು, ಅಭಿ ಎಂಬ ನಾಲ್ವರು ಗಂಗಾಧರ್​ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಗಂಗಾಧರ್​ನನ್ನು ಕಿಡ್ನ್ಯಾಪ್​ ಮಾಡಿದ ಬಳಿಕ ಶ್ರವಣಬೆಳಗೊಳ ರಸ್ತೆಯ ಜನಿವಾರ ಸಮೀಪದ ಬಯಲು ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಗಂಗಾಧರ್ ಸ್ನೇಹಿತ ಇದನ್ನ ಗಮನಿಸಿ ಹತ್ತಿರ ಹೋದಾಗ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕೂಡಲೇ ಗಂಗಾಧರ್​ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಮುಂದಾಗುವಷ್ಟರಲ್ಲಿ ಆತ ಅಲ್ಲಿಯೇ ಉಸಿರು ಚಲ್ಲಿದ್ದಾನೆ.

man murder over message  murder over message issue in Hassan  Hassan crime news  Man message send to woman  woman husband killed to man  ಆರೋಪಿಯ ಪತ್ನಿಗೆ ಕೊಲೆಯಾದ ಗಂಗಾಧರ್ ಪದೇ ಪದೇ ಮೇಸೇಜ್  ಪತ್ನಿಗೆ ಪದೇ ಪದೇ ಮೆಸೇಜ್​ ಮಾಡುತ್ತಿದ್ದ ಟೈಲರ್  ಮನಸ್ಸೋ ಇಚ್ಛೆ ಹಲ್ಲೆ  ದಶಕಗಳಿಂದ ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದ ಗಂಗಾಧರ್  ಯಾರೊಟ್ಟಿಗೂ ಜಗಳವಾಡದ ವ್ಯಕ್ತಿ ಹೀಗೆ ಏಕಾಏಕಿ ಹತ್ಯೆ  ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ತನಿಖೆ
ಪೊಲೀಸ್​ ಠಾಣೆ ಮುಂದೆ ಜಮಾಯಿಸಿರುವ ಜನ

ದಶಕಗಳಿಂದ ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದ ಗಂಗಾಧರ್ ನಾಲ್ಕೈದು ಮಂದಿಗೆ ಕೆಲಸಕೊಟ್ಟು ಜೀವನ ನಡೆಸುತ್ತಿದ್ದ. ಯಾರೊಟ್ಟಿಗೂ ಜಗಳವಾಡದ ವ್ಯಕ್ತಿ ಹೀಗೆ ಏಕಾಏಕಿ ಹತ್ಯೆಯಾಗಿರುವುದು ಊರಿಗೆ ಊರೇ ಬೆಚ್ಚಿ ಬೀಳುವಂತೆ ಮಾಡಿದೆ.

ಸದ್ಯ ಗಂಗಾಧರ್ ಪತ್ನಿ ಸೌಮ್ಯ ನೀಡಿದ ದೂರಿನ ಆಧಾರದಲ್ಲಿ ಕೇಸ್ ದಾಖಲಿಸಿಕೊಂಡಿರುವ ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೊಲೆ ಆರೋಪಿ ಭರತ್ ಅನುಮಾನಿಸಿದಂತೆ ಗಂಗಾಧರ್ ಮೆಸೇಜ್ ಮಾಡಿದ್ದಾನೆ. ಪ್ರಾಣ ತೆಗೆದ ಆ ಮೆಸೇಜ್​ನಲ್ಲಿ ಏನಿತ್ತು?.. ಟೈಲರ್ ಸಾವಿನ ಹಿಂದಿನ ಅಸಲಿಯತ್ತೇನು?.. ಎನ್ನುವುದು ಹಂತಕರ ಬಂಧನದ ಬಳಿಕ ಸತ್ಯ ಹೊರ ಬರಲಿದೆ.

ಓದಿ: ಮಂಗಳೂರು: ಸಲಿಂಗಕಾಮಕ್ಕೆ ಕರೆದೊಯ್ದು ದುಡ್ಡು ಕೊಡದ ವೃದ್ಧ.. ಕತ್ತು ಹಿಸುಕಿ ಕೊಂದ ಯುವಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.