ETV Bharat / state

ಯೋಗೇಶ್​​ ಗೌಡ ಹತ್ಯೆ ಪ್ರಕರಣ: ಸಾಕ್ಷ್ಯ ನಾಶ ಕೇಸ್ ವಿಚಾರಣೆ ನಾಳೆಗೆ ಮುಂದೂಡಿಕೆ

author img

By

Published : Feb 10, 2021, 5:02 PM IST

Yogesh Gowda murder case
ಯೋಗೇಶ್​​ ಗೌಡ ಹತ್ಯೆ ಪ್ರಕರಣ: ಸಾಕ್ಷಿ ನಾಶ ಕೇಸ್ ವಿಚಾರಣೆ ನಾಳೆಗೆ ಮುಂದೂಡಿಕೆ

ಸಿಬಿಐ ಕೇಸ್ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆಯಾದ ಹಿನ್ನೆಲೆ ಈ ಕೇಸ್ ಸಹ ಅದೇ ಕೋರ್ಟ್‌ಗೆ ವರ್ಗಾಯಿಸುವಂತೆ ವಿನಯ್​ ಕುಲಕರ್ಣಿ ಪರ ವಕೀಲರು ನ್ಯಾಯಾಲಯಕ್ಕೆ ಕೋರಿದ ಮೇಲೆ ನ್ಯಾಯಾಧೀಶರು ನಾಳೆಗೆ ವಿಚಾರಣೆ ಮುಂದೂಡಿದರು.

ಧಾರವಾಡ: ಜಿಲ್ಲಾ ಪಂಚಾಯತ್​ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣ ಸಂಬಂಧ ವಿನಯ್​ ಕುಲಕರ್ಣಿ ಮೇಲಿನ ಸಾಕ್ಷ್ಯ ನಾಶ ಕೇಸ್ ವಿಚಾರವಾಗಿ ಧಾರವಾಡದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

ಸಿಬಿಐ ಕೇಸ್ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗವಣೆಯಾದ ಹಿನ್ನೆಲೆ ಈ ಕೇಸ್ ಸಹ ಅದೇ ಕೋರ್ಟ್‌ಗೆ ವರ್ಗಾಯಿಸುವಂತೆ ವಿನಯ್​ ಕುಲಕರ್ಣಿ ಪರ ವಕೀಲರು ನ್ಯಾಯಾಲಯಕ್ಕೆ ಕೋರಿದ ಮೇಲೆ ನ್ಯಾಯಾಧೀಶರು ನಾಳೆಗೆ ವಿಚಾರಣೆ ಮುಂದೂಡಿದರು.

ಓದಿ: ಯೋಗೇಶ್​ ಗೌಡ ಹತ್ಯೆ ಪ್ರಕರಣ: ಕೊಲೆ ಕೇಸ್​ನ ಸಂಪೂರ್ಣ ಮಾಹಿತಿವುಳ್ಳ ಚಾರ್ಜ್ ಶೀಟ್ ಲಭ್ಯ!

ಸಿಬಿಐನಿಂದ ಸಾಕ್ಷ್ಯ ನಾಶದ ಪ್ರತ್ಯೇಕ ದೂರು ಸಲ್ಲಿಕೆಯಾಗಿತ್ತು. ಸಿಬಿಐ ದೂರು ಆಧರಿಸಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ವಿನಯ್​ ಸೇರಿ 8 ಜನರನ್ನು ಆರೋಪಿಗಳೆಂದು ಪರಿಗಣಿಸಲಾಗಿತ್ತು.

ವಿನಯ್​ ಕುಲಕರ್ಣಿ ಪ್ರಕರಣದ ಮೊದಲ ಆರೋಪಿಯಾಗಿದ್ದು, ಯೋಗೇಶ್​ ಗೌಡ ಕೊಲೆ ಬಳಿಕ ಸಾಕ್ಷ್ಯನಾಶ ಮಾಡುವ ಯತ್ನ ನಡೆದಿತ್ತು ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.