ETV Bharat / state

ಕನ್ಯಾಕುಮಾರಿ ಟು ಕಾಶ್ಮೀರ ಬೈಕ್ ರೈಡ್​: ಕೊರೊನಾ ಜಾಗೃತಿ ಮೂಡಿಸುತ್ತಿರುವ ಧಾರವಾಡ ಯುವಕ

author img

By

Published : Oct 16, 2021, 11:02 AM IST

Dharwad Youth ride to Kashmir with 100 cc bike
ವಿಜೇತಕುಮಾರ್​ ಹೊಸಮಠ

ಧಾರವಾಡದ ವಿಜೇತಕುಮಾರ್​ ಹೊಸಮಠ ಎಂಬ ಯುವಕ ಕಾಶ್ಮೀರವರೆಗೆ 100 ಸಿಸಿ ಬೈಕ್​ನಲ್ಲಿ ಅಭಿಯಾನ ಕೈಗೊಂಡಿದ್ದು, ಕೊರೊನಾ ಜಾಗೃತಿ ಮೂಡಿಸುತ್ತಿದ್ದಾನೆ.

ಧಾರವಾಡ: ಕೊರೊನಾ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು, ಧಾರವಾಡದ ಯುವಕನೋರ್ವ ತನ್ನದೇ ಶೈಲಿಯಲ್ಲಿ ಕೋವಿಡ್ ಜಾಗೃತಿ ಅಭಿಯಾನವನ್ನು ಆರಂಭಿಸಿದ್ದಾರೆ.

ಧಾರವಾಡದ ವಿಜೇತಕುಮಾರ್​ ಹೊಸಮಠ ಎಂಬ ಯುವಕ ಬೈಕ್ ಜಾಗೃತಿ ಅಭಿಯಾನ ಕೈಗೊಂಡಿದ್ದಾರೆ. ಹುಬ್ಬಳ್ಳಿಯ ಕೆಎಲ್ಇ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿರುವ ವಿಜೇತ, ಕೊರೊನಾ ಜಾಗೃತಿ ಮೂಡಿಸಲು 100 ಸಿಸಿ ಬೈಕ್​ನಲ್ಲಿ ಕಾಶ್ಮೀರದವರೆಗೆ ಪ್ರಯಾಣ ಕೈಗೊಂಡಿದ್ದಾರೆ.

ಧಾರವಾಡದ ವಿಜೇತಕುಮಾರ್​ ಹೊಸಮಠ ಎಂಬ ಯುವಕನಿಂದ ಜಾಗೃತಿ

20 ದಿನಗಳ ಕಾಲ ಈ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದ್ದು, ಸುಮಾರು 6000 ಕಿಲೋಮೀಟರ್ ಬೈಕ್​ನಲ್ಲಿ ಸಂಚರಿಸಲಿದ್ದಾರೆ. ಅಕ್ಟೋಬರ್ 8 ರಂದು ಆರಂಭವಾಗಿರುವ ವಿಜೇತಕುಮಾರ್ ಪ್ರಯಾಣ ಇದೇ ತಿಂಗಳ 24 ಕ್ಕೆ ಅಂತ್ಯಗೊಳ್ಳಲಿದೆ. ನಿತ್ಯವೂ ದಾರಿಯುದ್ದಕ್ಕೂ ಹಳ್ಳಿ ಮತ್ತು ನಗರದ ಜನರಿಗೆ ಧಾರವಾಡದ ಈ ಯುವಕ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ.

ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ವಿಜೇತಕುಮಾರ್​, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಈ ಬೈಕ್ ಜಾಗೃತಿ ಅಭಿಯಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.