ETV Bharat / state

ಪುಷ್ಪಾ ಪಟದಾರಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​: ಡೆತ್​ನೋಟ್​​ನಲ್ಲಿ ಕಾರಣ ಬಹಿರಂಗ

author img

By

Published : Oct 1, 2022, 5:48 PM IST

deepak-patadari-wife-pushpa-death-note-found
ಪುಷ್ಪಾ ಪಟದಾರಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​ : ಡೆತ್​ನೋಟ್​​ನಲ್ಲಿ ಕಾರಣ ಬಹಿರಂಗ

ರಾಯನಾಳ ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ ಪತ್ನಿ ಪುಷ್ಪಾ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್​ನೋಟ್ ಲಭ್ಯವಾಗಿದೆ.

ಹುಬ್ಬಳ್ಳಿ: ರಾಯನಾಳ ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ ಪತ್ನಿ ಪುಷ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಭಾರಿ ತಿರುವು ಸಿಕ್ಕಿದೆ. ಪುಷ್ಪಾ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್​ನೋಟ್ ಲಭ್ಯವಾಗಿದ್ದು, ಸಾವಿನ ದಾರಿ ಹಿಡಿಯಲು ಕಾರಣ ಏನೆಂಬುದು ಬಯಲಾಗಿದೆ.

ಪುಷ್ಪಾ ಸಾವಿಗೂ ಮುನ್ನ ನವನಗರದ ತಮ್ಮ ಸಂಬಂಧಿಯ ಮನೆಯಲ್ಲಿ ಡೆತ್​ನೋಟ್ ಬರೆದಿಟ್ಟಿದ್ದರು. ನನ್ನ ಸಾವಿಗೆ ಮೇಟಿ ಕುಟುಂಬದವರು ಕಾರಣ. ಪ್ರಮುಖವಾಗಿ ಯಲ್ಲಪ್ಪ ಶಂಕ್ರಪ್ಪ ಮೇಟಿ, ರುದ್ರಪ್ಪ ಶಂಕ್ರಪ್ಪ ಮೇಟಿ, ಕುಮಾರ್ ಮಹದೇವಪ್ಪ ಮೇಟಿ, ನವೀನ್, ಬಸಪ್ಪ ಮದ್ಲಿಂಗಣ್ಣನವರ ಸೇರಿ ಬಂಧಿತ ಏಳು ಮಂದಿ ಆರೋಪಿಗಳು ಕಾರಣರಾಗಿದ್ದಾರೆ. ನನ್ನ ಗಂಡನನ್ನು ರಾಜಕೀಯ ವೈಷಮ್ಯಕ್ಕೆ ಬಹಳ ಹೀನಾಯವಾಗಿ ಹತ್ಯೆ ಮಾಡಿದ್ದಾರೆ. ಪ್ರಮುಖ ಆರೋಪಿಗಳನ್ನು ಬಂಧಿಸಲು ಎಷ್ಟೇ ಮನವಿ ಮಾಡಿದರೂ ಪೊಲೀಸರು ನಮಗೆ ಸರಿಯಾಗಿ ಸ್ಪಂದಿಸಿಲ್ಲ. ನನ್ನ ಗಂಡನ ಸಾವಿಗೆ ನ್ಯಾಯ ಕೊಡಿಸಲು ಆಗಲಿಲ್ಲ ಎಂದು ನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್​ನೋಟ್ ಬರೆದಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಸಿಐಡಿ ತನಿಖೆ ನಡುವೆಯೇ ಗ್ರಾಪಂ ಸದಸ್ಯ ದೀಪಕ್​ ಪಟದಾರಿ‌ ಪತ್ನಿ ಆತ್ಮಹತ್ಯೆ

ಇಂತಹ ದುಷ್ಟ ಸರ್ಕಾರದಲ್ಲಿ ಬದುಕಲು ಇಷ್ಟ ಇಲ್ಲ ಎಂದು ಡೆತ್​ನೋಟ್​ನಲ್ಲಿ ಬರೆದಿರುವ ಪುಷ್ಪಾ, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಬೇಕು. ಜೀವಾವಧಿ ಶಿಕ್ಷೆ ಆಗದಿದ್ದಲ್ಲಿ ನನ್ನ ಕೊನೆಯ ವಿಧಿವಿಧಾನ ಮಾಡುವಂತಿಲ್ಲ ಎಂದು ಬರೆದಿದ್ದಾರೆ.

ಸೆ. 28ರ ರಾತ್ರಿ ನವನಗರ ತಮ್ಮ ಸಂಬಂಧಿಯೊಬ್ಬರ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನನ್ನ ಮಗಳಿಗೆ ಮಾನಸಿಕ ಒತ್ತಡ ಹಾಕಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಪುಷ್ಪಾ ತಂದೆ ಎಂದು ದೂರು ನೀಡಿದ್ದರು. ಹೀಗಾಗಿ ಶವವನ್ನು ಗಂಡನ ಮನೆಯವರಿಗೆ ನೀಡದೆ ತಂದೆಯ ಮನೆಯವರಿಗೆ ಅಂತ್ಯಸಂಸ್ಕಾರಕ್ಕೆ ಪೊಲೀಸರು ನೀಡಿದ್ದರು.

ಇದನ್ನೂ ಓದಿ: ದ್ವೇಷಕ್ಕೆ ಎರಡು ಜೀವಗಳು ಬಲಿ: ಅನಾಥವಾದ ಮುದ್ದು ಕಂದಮ್ಮಗಳು, ಶವಕ್ಕಾಗಿ ಪೈಪೋಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.