ETV Bharat / state

ಯೋಗೇಶ್ ​ಗೌಡ ಕೊಲೆ ಪ್ರಕರಣ: ಜಿಪಂ ಉಪಾಧ್ಯಕ್ಷನ ವಿಚಾರಣೆ

author img

By

Published : Jan 22, 2021, 7:47 PM IST

CBI probe into Vice President of zilla panchayath Shivananda Karikara
ಜಿ ಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ

ಯೋಗೇಶ್​ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರನ್ನು ಸಿಬಿಐ ವಿಚಾರಣೆಗೊಳಪಡಿಸಿ ಮಾಹಿತಿ ಕಲೆಹಾಕಿದೆ.

ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ​ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರನ್ನು ಸಿಬಿಐ ವಿಚಾರಣೆಗೊಳಪಡಿಸಿತು.

ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ

ಧಾರವಾಡ ಉಪನಗರ ಠಾಣೆಯಲ್ಲಿ ಕೆಲಹೊತ್ತು ಸಿಬಿಐ ಅಧಿಕಾರಿಗಳು ಕರಿಗಾರ ಅವರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿದರು. ವಿಚಾರಣೆ ಬಳಿಕ ಹೊರಬಂದ ಕರಿಗಾರ ಸುದ್ದಿಗಾರರೊಂದಿಗೆ ಮಾತನಾಡಿ, 2016ರಲ್ಲಿ ಯೋಗೇಶ್​ ಗೌಡ ಇದ್ದಾಗ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆ ನಡೆದಿತ್ತು.‌ ಅಂದಿನ ಆ ಸಭೆಯ ವಿಚಾರವಾಗಿಯೇ ಕೇಳಲು ನನ್ನನ್ನು ಕರೆಯಿಸಿದ್ದರು ಎಂದು ಹೇಳಿದರು.

ಓದಿ: ಆಹಾರ ಅರಸಿ ಬಂದ ಗಜರಾಜನಿಗೆ ಬೆಂಕಿ ಹಚ್ಚಿದ ಮನುಜ; ನೋವಿನ ಘೀಳು ಕಲ್ಲು ಹೃದಯವ ಕರಗಿಸದಿರದು!

ಅಂದಿನ ಸಭೆಯಲ್ಲಿ ಏನೇನಾಗಿತ್ತು ಅಂತಾ ಮಾಹಿತಿ ಕೇಳಿದ್ರು. ಆದರೆ ಅವತ್ತು ನಾನು ಸಭೆಗೆ ಹಾಜರಾಗಿರಲಿಲ್ಲ. ಹೀಗಾಗಿ ನನಗೆ ಅಂದಿನ ಸಭೆಯಲ್ಲಿ ನಡೆದ ವಿಚಾರಗಳ ಬಗ್ಗೆ ಗೊತ್ತಿಲ್ಲ. ಇದನ್ನೇ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.