ETV Bharat / state

ಟಿಕೆಟ್​ಗಾಗಿ ಪ್ರಹ್ಲಾದ್ ಜೋಶಿಗೆ ದುಂಬಾಲು ಬಿದ್ದ ಬಿಜೆಪಿ ನಾಯಕರು

author img

By

Published : Dec 11, 2022, 5:11 PM IST

Updated : Dec 11, 2022, 5:19 PM IST

Gangavati MLA Paranna Mannavali
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ

ಹುಬ್ಬಳ್ಳಿಯ ಮಯೂರ ಎಸ್ಟೇಟ್‌ನಲ್ಲಿರುವ ಜೋಶಿ ಮನೆಗೆ ಕಮಲ ಪಡೆಯ ನಾಯಕರು ಭೇಟಿ ನೀಡುತ್ತಿದ್ದು, ಟಿಕೆಟ್​ಗಾಗಿ ದುಂಬಾಲು ಬಿದ್ದಿದ್ದಾರೆ. ಉತ್ತರ ಕರ್ನಾಟಕದ ಸಾಕಷ್ಟು ಕ್ಷೇತ್ರಗಳಿಂದ ಆಕಾಂಕ್ಷಿಗಳು ಕಾರ್ಯಕರ್ತರನ್ನು ಜೊತೆಗೂಡಿ ಟಿಕೆಟ್‌ಗಾಗಿ ಮನವಿ ಮಾಡುತ್ತಿದ್ದಾರೆ. ಯಾದಗಿರಿ, ಗುರುಮಠಕಲ್, ಗಂಗಾವತಿ, ರೋಣ ಸೇರಿದಂತೆ ಅನೇಕ ಕ್ಷೇತ್ರಗಳಿಂದ ಆಗಮಿಸುತ್ತಿರುವ ನಾಯಕರು ಟಿಕೆಟ್​ಗಾಗಿ ಮನವೊಲಿಸುತ್ತಿದ್ದಾರೆ.

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ

ಹುಬ್ಬಳ್ಳಿ: 2023 ರ ವಿಧಾನಸಭೆ ಚುನಾವಣೆಗೆ ‌ಇನ್ನೂ ನಾಲ್ಕೈದು ತಿಂಗಳು ಬಾಕಿ ಇರುವಾಗಲೇ ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಈಗಿನಿಂದಲೇ ಕಸರತ್ತು ಶುರುವಾಗಿದೆ.‌ ಹೌದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆಗೆ ಟಿಕೆಟ್ ಆಕಾಂಕ್ಷಿಗಳ ದಂಡು ಆಗಮಿಸುತ್ತಿದೆ.

ಹುಬ್ಬಳ್ಳಿಯ ಮಯೂರ ಎಸ್ಟೇಟ್‌ನಲ್ಲಿರುವ ಜೋಶಿ ಅವರ ಮನೆಗೆ ಕಮಲ ಪಡೆಯ ನಾಯಕರು ಭೇಟಿ ನೀಡುತ್ತಿದ್ದು, ಟಿಕೆಟ್​ಗಾಗಿ ದುಂಬಾಲು ಬಿದ್ದಿದ್ದಾರೆ. ಉತ್ತರ ಕರ್ನಾಟಕದ ಸಾಕಷ್ಟು ಕ್ಷೇತ್ರಗಳಿಂದ ಆಕಾಂಕ್ಷಿಗಳು ಕಾರ್ಯಕರ್ತರನ್ನು ಜೊತೆಗೂಡಿ ಟಿಕೆಟ್‌ಗಾಗಿ ಮನವಿ ಮಾಡುತ್ತಿದ್ದಾರೆ. ಯಾದಗಿರಿ, ಗುರುಮಠಕಲ್, ಗಂಗಾವತಿ, ರೋಣ ಸೇರಿದಂತೆ ಅನೇಕ ಕ್ಷೇತ್ರಗಳಿಂದ ಆಗಮಿಸುತ್ತಿರುವ ನಾಯಕರು ಟಿಕೆಟ್​ಗಾಗಿ ಜೋಶಿಯವರ ಮನವೊಲಿಸುತ್ತಿದ್ದಾರೆ.

ಇಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಕೂಡ ಜೋಶಿಯವರನ್ನು ಭೇಟಿಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಗಂಗಾವತಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮನೆ ಮಾಡಿದ್ದರಿಂದ ಎಲ್ಲಿ ಗಂಗಾವತಿ ಟಿಕೆಟ್ ಕೈ ತಪ್ಪಲಿದೆ ಎಂಬ ಆತಂಕದಲ್ಲಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುನವಳ್ಳಿ ಅವರು ಹುಬ್ಬಳ್ಳಿಗೆ ಆಗಮಿಸಿದ್ದರಿಂದ ನಮ್ಮ ನಾಯಕರನ್ನು ಭೇಟಿಯಾಗಿದ್ದೇನೆ. ಇದರಲ್ಲಿ ಅಂತ ಬೆಳವಣಿಗೆ ಏನು ಇಲ್ಲ ಎಂದರು.

ಇದನ್ನೂ ಓದಿ:ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ದಿಢೀರ್ ಬುಲಾವ್

Last Updated :Dec 11, 2022, 5:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.