ETV Bharat / state

ರಾಹುಲ್ ಗಾಂಧಿ ಅನರ್ಹತೆ ವಿಚಾರ: ಸತ್ಯ ಹೇಳಿದವರಿಗೆ ಬಿಜೆಪಿ ಶಿಕ್ಷೆ ಕೊಡಲು ಹೊರಟಿದೆ ಎಂದ ಸಿದ್ಧರಾಮಯ್ಯ

author img

By

Published : Mar 24, 2023, 9:33 PM IST

Updated : Mar 24, 2023, 9:45 PM IST

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಸತ್ಯ ಹೇಳಿದರೆ ಬಿಜೆಪಿಯವರು ತಡೆದುಕೊಳ್ಳುವುದಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಹುಬ್ಬಳ್ಳಿ: ಹೈಕಮಾಂಡ್ ಎಲ್ಲಿ ಹೇಳುತ್ತಾರೆ ಅಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ. ಸುಮಾರು 20 ರಿಂದ 25 ಕ್ಷೇತ್ರದಲ್ಲಿ ಕರೆಯುತ್ತಿದ್ದಾರೆ. ಎಲ್ಲ ಕಡೆ ನಿಲ್ಲುವುದಕ್ಕೆ ಆಗಲ್ಲ. ಅದಕ್ಕೆ ಕ್ಷೇತ್ರದ ತೀರ್ಮಾನವನ್ನು ನಾನು ಹೈಕಮಾಂಡ್​ಗೆ ಬಿಟ್ಟಿದೀನಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಾದಾಮಿಗೆ ಆಗಾಗ ಬರುತ್ತಾ ಇರುತ್ತೇನೆ. ಸಿದ್ದರಾಮಯ್ಯಗೆ ಕ್ಷೇತ್ರ ಸಿಗುತ್ತಿಲ್ಲ ಎನ್ನುವ ಬಿಜೆಪಿ ನಾಯಕರ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಗದೆ ಇರುವ ತರಹ ಇದ್ದರೆ 20 ಕಡೆ ಯಾಕೆ ಕರೀತಾರೆ ಎಂದು ಅವರು ಮರು ಪ್ರಶ್ನೆ ಮಾಡಿದರು. ನನಗೆ ಯಾವುದೇ ಕ್ಷೇತ್ರ ಇಲ್ಲದೆ ಇದ್ದರೆ ಯಾಕೆ ಕರೀತಾರೆ. ಸೋಲುವವರನ್ನು ಕರೀತಾರಾ?. ಗೆಲ್ಲುವವರನ್ನು ಕರೀತಾರಾ? ಅಭಿಮಾನ ಪ್ರೀತಿಯಿಂದ ಕರೀತಾರೆ. ಮತ್ತೆ ಕ್ಷೇತ್ರ ಇಲ್ಲ ಹೇಗೆ ಅಂತಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ : ನಾಳೆ ಸಿಲಿಕಾನ್ ಸಿಟಿಗೆ ಮೋದಿ ಆಗಮನ: ಈ ಮಾರ್ಗದ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ರಾಹುಲ್ ಗಾಂಧಿ ಅನರ್ಹತೆ ವಿಚಾರವಾಗಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಇದು ಕರಾಳ ದಿನ. ಬಿಜೆಪಿಯವರು ಬೇಕು ಅಂತಾ ಬೇರೆ ನಾಯಕರನ್ನು ಎದುರಿಸಲಾಗದೆ ಮಾಡಿರುವ ಷಡ್ಯಂತ್ರ. ಬಹಳ ಜನ ಕೊಳ್ಳೆ ಹೊಡೆದು ವಿದೇಶಕ್ಕೆ ಹೋದರು. ವಿಜಯ ಮಲ್ಯ, ನೀರವ್ ಮೋದಿ ಇವರೆಲ್ಲ ಹೋದರು. ಇವರನ್ನು ಏನಂತ ಕರಿಬೇಕು. ಸಾರ್ವಜನಿಕರ ದುಡ್ಡು ಕೊಳ್ಳೆ ಹೊಡೆದವರನ್ನು ಏನಂತ ಕರೀಬೇಕು. ರಾಹುಲ್ ಗಾಂಧಿ ಕರೆದರೆ ತಪ್ಪಾ? ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯ ಇಲ್ವಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ಟಿಕೆಟ್ ಬೇಡಿಕೆ ವೇಳೆ ತಳ್ಳಾಟ... ಕಾರ್ಯಕರ್ತನಿಗೆ ಸಿದ್ದರಾಮಯ್ಯರಿಂದ ಕಪಾಳಮೋಕ್ಷ

ಸತ್ಯ ಹೇಳಿದ್ರೆ ಬಿಜೆಪಿಯವರು ತಡೆದುಕೊಳ್ಳಲ್ಲ-ಸಿದ್ದರಾಮಯ್ಯ: ಸತ್ಯ ಹೇಳಬೇಕಾದ ಅಗತ್ಯ ಇಲ್ವಾ..? ಸತ್ಯ ಹೇಳಿದರೆ ಬಿಜೆಪಿಯವರು ತಡೆದುಕೋಳೋದಿಲ್ಲ. ಸತ್ಯ ಹೇಳಬಾರದು ಅದಕ್ಕೋಸ್ಕರ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಿದ್ದಾರೆ. ಇದು ನೀಚ ಹೇಡಿತನದ ಕೆಲಸ. ಎರಡು ವರ್ಷ ಶಿಕ್ಷೆ ಆದ ನಿದರ್ಶನ ಇದೆನಾ..? ಕೋರ್ಟ್ ಆದೇಶ ಮಾಡಿದೆ. ಆ ತೀರ್ಪಿನ ಮೇಲೆ ಅಪೀಲ್​ ಹಾಕಬಹುದು ಅಲ್ವಾ? ಸುಪ್ರೀಂ ಕೋರ್ಟ್​ ಡಿಶಿಷನ್​ ಇವೆ. ಯಾವ ಕೋರ್ಟ್​ ಶಿಕ್ಷೆ ಕೊಟ್ಟಿದ್ದೆಯೋ ಅದೇ ಕೋರ್ಟ್​ ಬೇಲು ಕೊಟ್ಟಿದೆ. ನೀವು ಅಪೀಲು ಹಾಕಿ ಹೋಗಿ ಅಂತ. ಇವರು ಹೇಳಿರುವ ತಪ್ಪಾದ್ರೂ ಏನು? ಮಹಾ ಅಪರಾಧವನ್ನು ಏನು ಮಾಡಿದ್ದಾರೆ. ಲೂಟಿ ಹೊಡೆದವರಿಗೆ ಶಿಕ್ಷೆ ಕೊಡುವುದು ಬಿಟ್ಟು, ಸತ್ಯ ಮಾತನಾಡಿದವರಿಗೆ ಶಿಕ್ಷೆ ಕೊಡುವುದು ಯಾವ ನ್ಯಾಯ? ಎಂದರು.

ಇದನ್ನೂ ಓದಿ : ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಮೋದಿ ಸರ್ಕಾರ ಹೇಡಿತನ ಪ್ರದರ್ಶಿಸಿದೆ: ಸಿದ್ದರಾಮಯ್ಯ

ಲೂಟಿ ಹೊಡೆದವರನ್ನು ಬಿಜೆಪಿ ರಕ್ಷಣೆ ಮಾಡೋ ಕೆಲಸ ಮಾಡುತ್ತಿದೆ. ಅದನ್ನು ಮಾತಾಡಿದ್ರೆ ಇವರಿಗೆ ಶಿಕ್ಷೆ. ಸತ್ಯ ಹೇಳಿದವರಿಗೆ ಶಿಕ್ಷೆ ಕೊಡೋಕೆ ಹೊರಟಿರೋದು ಪ್ರಜಾಪ್ರಭುತ್ವಕ್ಕೆ ಮಾರಕ. ಇದು ವಿಪರ್ಯಾಸ. ಇದನ್ನು ಬ್ಲಾಕ್ ಡೇ ಎಂದು ಕರಿಬೇಕು ಎಂದರು.

ಇದನ್ನೂ ಓದಿ : ಬಾದಾಮಿ ಕ್ಷೇತ್ರದಲ್ಲಿ ನಾಳೆ ಸಿದ್ದರಾಮಯ್ಯ ಪ್ರವಾಸ.. ಕುತೂಹಲ ಮೂಡಿಸಿದ ಮಾಜಿ ಸಿಎಂ ನಡೆ

Last Updated :Mar 24, 2023, 9:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.