ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯಿಂದ ಮುತ್ತಗಿ ಹತ್ಯೆಗೆ ಸುಪಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಆರೋಪಿ ಬಸವರಾಜ ಮುತ್ತಗಿ, ಆ ವಿಷಯ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಕೆಲವರಿಗೆ ಕೆಲವು ವಿಕನೆಸ್ ಇರ್ತಾವೆ. ನಾವು ಭಾವನೆಗಳಲ್ಲಿ ಬದುಕುವವರು, ಕೆಲವರಿಗೆ ಛಾಡಿ ಕೇಳುವ ವೀಕ್ನೆಸ್ ಇರುತ್ತದೆ ಎಂದು ಹೇಳಿದರು.
ಮಧ್ಯಾಹ್ನ ಮತ್ತೆ ಸಿಬಿಐ ವಿಚಾರಣೆಗೆ ಆಗಮಿಸಿದ ಯೋಗೇಶ್ ಗೌಡ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಸುದ್ದಿಗಾರರೊಂದಿಗೆ ಮಾತನಾಡಿ, ಆ ವಿಷಯ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ನಾವು ಭಾವನೆಗಳಲ್ಲಿ ಬದುಕುವವರು, ಕೆಲವರಿಗೆ ಛಾಡಿ ಕೇಳುವ ವೀಕನೆಸ್ ಇರುತ್ತದೆ. ಆ ಛಾಡಿ ಕೇಳಿದ್ದರಿಂದಲೇ ಹೀಗೆ ಆಗಿರಬಹುದು. ವಿನಯ ಅವರ ಜೊತೆಯೇ ನಾವು ಇರುತ್ತಿದ್ದೆವು. ಜೊತೆಗೆ ಕುಳಿತು ಸಾಕಷ್ಟು ಸಲ ಊಟ ಮಾಡಿದ್ದೇವೆ. ಎರಡು ಸ್ಪೂನ್ ವಿಷ ಹಾಕಿ ಕೊಟ್ಟಿದ್ದರೆ ತಿಂದು ಬಿಡುತಿದ್ವಿ ಎಂದು ಬೇಸರ ವ್ಯಕ್ತಪಡಿಸಿದರು.
ಓದಿ: ಗ್ರಾಮ ಪಂಚಾಯಿತಿ ಚುನಾವಣೆ: ಅಖಾಡಕ್ಕಿಳಿದ ಮಾವ - ಸೊಸೆ
ಅವರಿಗೆ ಇದು ಶೋಭೆ ಅಲ್ಲ. ಮಹಭಾರತದ ಶಕುನಿಯಂತೆ ಚಂದು ಮಾಮಾ ಪಾತ್ರ. ಚಂದ್ರಶೇಖರ ಇಂಡಿ ಎಂಬ ಕ್ಯಾರೆಕ್ಟರ್ ಎಂಟ್ರಿ ಆಗಿ ಎಲ್ಲರ ಬದುಕೇ ಹಾಳು ಮಾಡಿದೆ. ಈ ಸಂಬಂಧ ದೂರು ಕೊಡುವ ಬಗ್ಗೆ ನಮ್ಮ ವಕೀಲರ ಜೊತೆ ಮಾತನಾಡುವೆ ಎಂದು ತಿಳಿಸಿದರು.