ETV Bharat / state

ಅಪರ ಜಿಲ್ಲಾಧಿಕಾರಿ ಮನೆಯಲ್ಲಿ ಕಳ್ಳತನ: ಒಂದೂವರೆ ಕೆ.ಜಿ ಬೆಳ್ಳಿ ದೋಚಿ ಪರಾರಿ

author img

By

Published : Dec 17, 2020, 3:25 PM IST

silver-stolen-in-davanagere-superintendents-house
ಅಪರ ಜಿಲ್ಲಾಧಿಕಾರಿ ಮನೆಯಲ್ಲಿ ಕಳ್ಳತನ

ದಾವಣಗೆರೆ ನಗರದ ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಮನೆಗೆ ನುಗ್ಗಿರುವ ಖದೀಮರು ಸುಮಾರು ಒಂದೂವರೆ ಕೆ.ಜಿ ಬೆಳ್ಳಿಯ ವಸ್ತುಗಳನ್ನು ಕದ್ದಿದ್ದಾರೆ.

ದಾವಣಗೆರೆ: ನಗರದ ಎಸ್‌ಎಸ್‌ ಲೇಔಟ್ 6ನೇ ಕ್ರಾಸ್ ಇಂಡೋರ್ ಸ್ಟೇಡಿಯಂ ಬಳಿ ಇರುವ ಅಪರ ಜಿಲ್ಲಾಧಿಕಾರಿ ಮನೆಗೆ ನುಗ್ಗಿರುವ ಕಳ್ಳರು ಬೆಳ್ಳಿಯ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಅಪರ ಜಿಲ್ಲಾಧಿಕಾರಿ ಮನೆಯಲ್ಲಿ ಕಳ್ಳತನ

ನಿನ್ನೆ ತಮ್ಮ ಹೊಸ ಮನೆಗೆಂದು ಕೆಲ ಸಾಮಗ್ರಿ ಹಾಗು ವಸ್ತುಗಳನ್ನು ಸಾಗಿಸಿ ಕುಟುಂಬಸ್ಥರು ಪೂಜಾಕಾರ್ಯಗಳನ್ನು ನಡೆಸಿದ್ದಾರೆ. ಈ ಪೂಜೆಗೆ ಬಳಸಿದ್ದ ಬೆಳ್ಳಿ ದೀಪ, ಇನ್ನಿತರೆ ಸಾಮಾನುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ಓದಿ: ಬೆಂಗಳೂರಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ: ಮಗ ಸಾವು, ತಾಯಿ ಸ್ಥಿತಿ ಗಂಭೀರ

ಹೊಸ ಮನೆಗೆ ತೆರಳದೆ ನಿನ್ನೆ ಹಳೇ ಮನೆಯಲ್ಲಿ ವಾಸವಿದ್ದ ಎಡಿಸಿ ವೀರಮಲ್ಲಪ್ಪ ಹಾಗು ಅವರ ಕುಟುಂಬವನ್ನು ಗಮನಿಸಿರುವ ಕಳ್ಳರು, ಹೊಸ ಮನೆಯ ಹಿಂಬಾಗಿಲು ಮುರಿದು ಈ ಕೃತ್ಯ ಎಸಗಿದ್ದಾರೆ. ಘಟನಾ ಸ್ಥಳಕ್ಕೆ ವಿದ್ಯಾನಗರ ಪಿಎಸ್ಐ ರೂಪಾ ತೆಂಬದ್ ಭೇಟಿ ನೀಡಿ ಪರಿಶೀಲ‌ನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.