ETV Bharat / state

ದಾವಣಗೆರೆಯಲ್ಲಿ ನಿರಂತರ ಮಳೆಗೆ ಮನೆ ಕುಸಿತ.. ಆಸ್ಪತ್ರೆ ಸೇರಿದ ದಂಪತಿ, ಶಿವಮೊಗ್ಗದಲ್ಲಿ ವೃದ್ಧೆ ಸಾವು

author img

By

Published : Sep 6, 2022, 3:48 PM IST

ಮನೆ ಕುಸಿತ
ಮನೆ ಕುಸಿತ

ಶಿವಮೊಗ್ಗದ ಹೊರ ವಲಯದ ಮಲವಗೊಪ್ಪದ ಇಂದಿರಾ ಕಾಲೋನಿಯಲ್ಲಿ ಭಾರಿ ಮಳೆಯಿಂದ ಮನೆ ಗೋಡೆ ಕುಸಿದು ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.

ದಾವಣಗೆರೆ/ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ನಿರಂತರ ಮಳೆ ಬೀಳುತ್ತಿರುವ ಬೆನ್ನಲ್ಲೇ ಮನೆ ಕುಸಿದ ಪರಿಣಾಮ ವೃದ್ಧ ದಂಪತಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಮುಸ್ಟೂರ್ ಗ್ರಾಮದಲ್ಲಿ ತಡ ರಾತ್ರಿ ಜರುಗಿದೆ. ನಿಂಗಪ್ಪ (60) ಮತ್ತು ಕೆಂಚಮ್ಮ (55) ಗಾಯಗೊಂಡಿರುವ ದಂಪತಿ. ಮನೆಯಲ್ಲಿ ಗಾಢ ನಿದ್ರೆಯಲ್ಲಿ ಮಲಗಿದ್ದ ವೇಳೆ ಮನೆ ಗೋಡೆ ಕುಸಿದಿದ್ದು, ಬಡಪಾಯಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆಯ‌ ‌ಮಾಳಿಗೆ ಕುಸಿದಿದ್ದರಿಂದ ಭಾರಿ ಅನಾಹುತ ತಪ್ಪಿದ್ದು, ಸ್ಥಳೀಯರ ಸಹಕಾರದಿಂದ ಗಾಯಾಳು ದಂಪತಿಯನ್ನು ತುರ್ತಾಗಿ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು, ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಜಗಳೂರು ತಹಶೀಲ್ದಾರ್ ಸಂತೋಷ್ ಪರಿಶೀಲನೆ ನಡೆಸಿದರು. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ.

ಬೀಳುವ‌ ಹಂತಕ್ಕೆ‌ ತಲುಪಿರುವ ಮನೆಗಳಲ್ಲಿ ಯಾರೂ ವಾಸ ಮಾಡಬಾರದು ಎಂದು ತಹಶೀಲ್ದಾರ್ ಸಂತೋಷ್ ಅವರು ಜನರಿಗೆ ಸಂದೇಶ ರವಾನಿಸಿದ್ದಾರೆ.

ಮಲವಗೊಪ್ಪದಲ್ಲಿ ಮಳೆಗೆ ಮನೆಗೋಡೆ ಕುಸಿದು ವೃದ್ದೆ ಸಾವು.. ಮತ್ತೊಂದೆಡೆ ಶಿವಮೊಗ್ಗದಲ್ಲಿ ಮನೆ ಗೋಡೆ ಕುಸಿದು ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಹೊರ ವಲಯದ ಮಲವಗೊಪ್ಪದ ಇಂದಿರಾ ಕಾಲೋನಿಯಲ್ಲಿ ನಡೆದಿದೆ. ಗೌರಮ್ಮ(75) ಮೃತ ವೃದ್ಧೆ ಎಂದು ತಿಳಿದುಬಂದಿದೆ.

ಶಿವಮೊಗ್ಗದಲ್ಲಿ ಭಾರಿ ಮಳೆಯ ಬಗ್ಗೆ ಸ್ಥಳೀಯರಾದ ಷಣ್ಮುಗ ಅವರು ಮಾತನಾಡಿದರು

ಕಳೆದ ಹಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ಇದರಿಂದ ಮನೆ ಶಿಥಿಲವಾಗಿತ್ತು. ಸೋಮವಾರ ಸಂಜೆ ಏಕಾಏಕಿ ಮನೆಯ ಗೋಡೆ ಕುಸಿತವಾಗಿದೆ. ಈ ವೇಳೆ ವೃದ್ಧೆ ಗೌರಮ್ಮ ಮಲಗಿದ್ದು, ಅವರ ಮೇಲೆಯೇ ಗೋಡೆ ಬಿದ್ದಿದೆ.

ಮೃತ ವೃದ್ದೆ ಗೌರಮ್ಮ
ಮೃತ ವೃದ್ದೆ ಗೌರಮ್ಮ

ತಕ್ಷಣ ಸ್ಥಳೀಯರು ವೃದ್ದೆಯನ್ನು ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ, ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವೃದ್ಧೆಗೆ ನಾಲ್ವರು ಮಕ್ಕಳಿದ್ದು, ಯಾರೂ ಸಹ ಆಕೆಯ ಜೊತೆಗೆ ಇರಲಿಲ್ಲ ಎನ್ನಲಾಗ್ತಿದೆ. ಸ್ಥಳಕ್ಕೆ ತಹಶೀಲ್ದಾರ್ ನಾಗರಾಜ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಓದಿ: ಭಾರಿ ಮಳೆಯಿಂದಾಗಿ 25 ವರ್ಷದ ಬಳಿಕ ಉಕ್ಕಿ ಹರಿದ ಭೀಮಾ ನದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.