ETV Bharat / state

ಬಲವಂತದ ಮತಾಂತರ ಆರೋಪ: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ತರಾಟೆ

author img

By

Published : Apr 5, 2021, 1:28 PM IST

ಬಲವಂತವಾಗಿ ಮತಾಂತರ ‌ಮಾಡುತ್ತಿದ್ದ ಆರೋಪ
Forcible conversion Allegation in Davanagere

ದಾವಣಗೆರೆ ನಗರದ ಸಿದ್ದವೀರಪ್ಪ ಬಡಾವಣೆಯಲ್ಲಿರುವ ಅನಧಿಕೃತ ನ್ಯೂ ಲೈಫ್ ಫೆಲ್ಲೋಶಿಫ್ ಚರ್ಚಿನಲ್ಲಿ ಅಶಕ್ತ ಜನರಿಗೆ ಹಣದ ಅಮಿಷ ತೋರಿಸಿ ಕ್ರೈಸ್ತ ಧರ್ಮಕ್ಕೆ ಬಲವಂತವಾಗಿ ಮತಾಂತರ ‌ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ದಾವಣಗೆರೆ: ಅಶಕ್ತ ಜನರಿಗೆ ಹಣದ ಅಮಿಷ ತೋರಿಸಿ ಕ್ರೈಸ್ತ ಧರ್ಮಕ್ಕೆ ಬಲವಂತವಾಗಿ ಮತಾಂತರ ‌ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬಲವಂತದ ಮತಾಂತರ ಆರೋಪ

ನಗರದ ಶಾಮನೂರು ರಸ್ತೆಯಲ್ಲಿರುವ ರಸ್ತೆಯ ಸಿದ್ದವೀರಪ್ಪ ಬಡಾವಣೆಯಲ್ಲಿರುವ ಅನಧಿಕೃತ ನ್ಯೂ ಲೈಫ್ ಫೆಲ್ಲೋಶಿಫ್ ಚರ್ಚಿನಲ್ಲಿ ಈ ಘಟನೆ ನಡೆದಿದೆ. ಚರ್ಚಿನ ಅಧಿಕಾರಿಗಳು ಜನರಿಗೆ ಹಣದ ಆಸೆ ತೋರಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದರು ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಆರೋಪಿಸಿದರು. ಈ ವೇಳೆ ಅಲ್ಲಿದ್ದ ಕೆಲವರನ್ನು ತರಾಟೆಗೆ ತೆಗೆದುಕೊಂಡಾಗ ಚರ್ಚ್‌ ಸಿಬ್ಬಂದಿ ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ ನಡೆದಿದೆ.

ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ವಿದ್ಯಾ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.