ETV Bharat / state

ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ತಾಯ್ನಾಡು ಸೇರಿದ ದಾವಣಗೆರೆ ಯುವಕ

author img

By

Published : Aug 25, 2021, 12:09 PM IST

Updated : Aug 25, 2021, 2:16 PM IST

davangere
ತಾಯ್ನಾಡಿಗೆ ಬಂದ ವಿನಯ್​

ಅಫ್ಘಾನಿಸ್ತಾನದ ಉದ್ವಿಗ್ನ ಪರಿಸ್ಥಿತಿಯಲ್ಲಿ ಸಿಲುಕಿದ್ದ ದಾವಣಗೆರೆಯ ವಿನಯ್​​ ಎಂಬ ಯುವಕ ಸುರಕ್ಷಿತವಾಗಿ ಭಾರತಕ್ಕೆ ಆಗಮಿಸಿದ್ದು ಇದೀಗ ತಮ್ಮೂರು ಸೇರಿದ್ದಾರೆ.

ದಾವಣಗೆರೆ: ಸದ್ಯ ಅಫ್ಘಾನಿಸ್ತಾನದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ತಾಲಿಬಾನ್ ಭಯೋತ್ಪಾದಕರು ಇಡೀ ದೇಶವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲಿ‌ನ ಜನರು ಹಾಗೂ ಇತರ ದೇಶದ ಪ್ರಜೆಗಳು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಿಲುಕಿದ್ದ ದಾವಣಗೆರೆಯ ವಿನಯ್​​ ಎಂಬವರು ಇದೀಗ ಸುರಕ್ಷಿತವಾಗಿ ತಾಯ್ನಾಡು ತಲುಪಿ ನಿಟ್ಟುಸಿರು ಬಿಟ್ಟಿದ್ದಾರೆ.

ವಿನಯ್ ಕುಟುಂಬದ ಜೊತೆ ಈಟಿವಿ ಭಾರತ ಪ್ರತಿನಿಧಿ ನಡೆಸಿದ ಚಿಟ್​ಚಾಟ್​

ಅನಗೋಡು ಬಳಿ ಇರುವ ಸುಲ್ತಾನಿಪುರದ ನಿವಾಸಿ ವಿನಯ್​ ಅಫ್ಘಾನಿಸ್ತಾನದಿಂದ ಪಾರಾಗಿ ದಾವಣಗೆರೆಗೆ ಬಂದವರು. ಬೆಂಗಳೂರಿನ ಸಿಆರ್​ಸಿ ಎಂಬ ಹೆಸರಿನ ಕಂಪನಿಯಲ್ಲಿ ಕೆಲಸ‌ ಮಾಡುತ್ತಿದ್ದ ಇವರು​, 2010-11ರಲ್ಲಿ ಅಫ್ಘಾನಿಸ್ಥಾನಕ್ಕೆ ತೆರಳಿದ್ದ ಅಲ್ಲಿ ಅಟೋಮಿಷನ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಂದಹಾರ್​ನಲ್ಲಿ ಕೆಲಸ ಆರಂಭಿಸಿದ‌ ಇವರು 2017ರವರೆಗೆ ಅಲ್ಲಿಯೇ ಕಾರ್ಯ ನಿರ್ವಹಿಸಿದ್ದಾರೆ. ಆ ನಂತರ 2018ರ ಕೊನೆಗೆ ಮಜಾರೆ ಶರೀಫ್ ವಾಟರ್ ಡಿಪಾರ್ಟ್‌ಮೆಂಟ್​ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿ, ಕಾಬೂಲ್ ಹಮೀದ್ ಕರ್ಜಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವರ್ಗಾವಣೆಯಾಗಿ ಅಲ್ಲಿ ಉದ್ಯೋಗ ಮುಂದುವರೆಸಿದ್ದರು.

ನವೀನ್ ತಾಯ್ನಾಡು ತಲುಪಿದ್ದು ಹೀಗೆ...

ಆಗಸ್ಟ್ 14ರ ರಾತ್ರಿ ತಾಲಿಬಾನಿಗಳು ಕಾಬೂಲ್‌ ಬಳಿ ಬಂದಿದ್ದಾರೆ ಎಂಬ ಮಾಹಿತಿ‌ ತಿಳಿದ ವಿನಯ್​ ಹಾಗೂ ಇತರ ದೇಶದ ಪ್ರಜೆಗಳು, ತಾವು ಕೆಲಸ ಮಾಡುವ ಕಂಪನಿಯ ಮುಖ್ಯಸ್ಥರ ಬಳಿ ತೆರಳಿ ನಮಗೆ ಭದ್ರತೆ ನೀಡಿದರೆ ಕೆಲಸ‌ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಈ ವೇಳೆ ಕಂಪನಿಯವರು ಭದ್ರತೆ ನೀಡುವ ಆಶ್ವಾಸನೆ ನೀಡಿದ್ದರಿಂದ ಕೆಲಸಕ್ಕೆ ಹಾಜರಾಗಿದ್ದರು. ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸಿದಂತೆ, ಅಪಾರ್ಟ್​ಮೆಂಟ್​ನ ಸೆಕ್ಯೂರಿಟಿಗಳನ್ನು ತಾಲಿಬಾನಿಗಳು ಗುಂಡಿಟ್ಟು ಕೊಂದಿದ್ದನ್ನು ವಿನಯ್​​ ಕಣ್ಣಾರೆ ಕಂಡಿದ್ದಾರಂತೆ. ಈ ವೇಳೆ ತೀವ್ರವಾಗಿ ಆತಂಕಗೊಂಡ ಅವರು ತಕ್ಷಣ ವಿಮಾನ ನಿಲ್ಧಾಣಕ್ಕೆ ಆಗಮಿಸಿ ಟರ್ಕಿಶ್ ಮಿಲಿಟರಿ ಸಹಾಯದಿಂದ ಭಾರತ ತಲುಪಿದರು.

Last Updated :Aug 25, 2021, 2:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.