ETV Bharat / state

ಪಂಚಮಸಾಲಿ ಮುಖಂಡರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ: ಬಜೆಪಿ ಬಂಡಾಯ ಅಭ್ಯರ್ಥಿ ಬಳ್ಳಾರಿ

author img

By

Published : Oct 12, 2021, 12:00 PM IST

crbellary
ಸಿ.ಆರ್.ಬಳ್ಳಾರಿ

ನಮ್ಮ ಸಮುದಾಯದ ಮುಖಂಡರ ಜತೆ ಚರ್ಚಿಸಿ ನಾಮಪತ್ರ ಹಿಂಪಡೆಯುವಿಕೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಅಂತಾ ಹಾನಗಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಸಿ.ಆರ್. ಬಳ್ಳಾರಿ ಹೇಳಿದ್ದಾರೆ.

ದಾವಣಗೆರೆ: ನಾಮಪತ್ರ ಹಿಂಪಡೆಯುವ ಬಗ್ಗೆ ಸಿಎಂ ನನ್ನೊಂದಿಗೆ ಚರ್ಚಿಸಿದ್ದಾರೆ. ನಾನು ಕೂಡ ಬಿಜೆಪಿ ಟಿಕೆಟ್​​ನ ಪ್ರಬಲ ಆಕಾಂಕ್ಷಿಯಾಗಿದ್ದೆ. ಕೊನೆ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿತು ಎಂದು ಹಾನಗಲ್ ಬಿಜೆಪಿ ಬಂಡಾಯ ಅಭ್ಯರ್ಥಿ ಸಿ.ಆರ್. ಬಳ್ಳಾರಿ ಹೇಳಿದ್ದಾರೆ.

ನಾಮಪತ್ರ ಹಿಂಪಡೆಯುವಿಕೆ ಕುರಿತು ಬಿಜೆಪಿ ಬಂಡಾಯ ಅಭ್ಯರ್ಥಿ ಸಿ.ಆರ್.ಬಳ್ಳಾರಿ ಪ್ರತಿಕ್ರಿಯೆ

ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ನಾಮಪತ್ರ ಹಿಂಪಡೆಯುವ ಬಗ್ಗೆ ಸಿಎಂ ಕರೆದು‌ ನನ್ನೊಂದಿಗೆ ಚರ್ಚಿಸಿದ್ದಾರೆ. ಎರಡೂ ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿರುವುದರಿಂದ ನಾಮಪತ್ರ ಹಿಂಪಡೆಯಲು ಕೇಳಿದ್ದಾರೆ. ನಾನು ಒಂದು ದಿನದ ಕಾಲವಕಾಶ ಕೇಳಿದ್ದೇನೆ. ನಾಳೆ ಹಾನಗಲ್​ನಲ್ಲಿ ಪಂಚಮಸಾಲಿ ಮುಖಂಡರ ಜತೆ ಚರ್ಚಿಸಿ ಬಳಿಕ ನಾಮಪತ್ರ ವಾಪಸ್ ಪಡೆಯುವ ನಿರ್ಣಯ ಕೈಗೊಳ್ಳುತ್ತೇನೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಸಿಎಂ ಬೊಮ್ಮಾಯಿ, ನಾಮಪತ್ರ ವಾಪಸ್​​ ಪಡೆಯುವ ನಿರ್ಧಾರವನ್ನು ಸಿ ಆರ್​ ಬಳ್ಳಾರಿ ಅವರಿಗೇ ಬಿಟ್ಟಿದ್ದೇನೆ ಎಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.