ETV Bharat / state

ಮಾನಸಿಕ ಖಿನ್ನತೆ: ಅಳದಂಗಡಿಯ ಯುವಕ ಆತ್ಮಹತ್ಯೆಗೆ ಶರಣು

author img

By

Published : Dec 17, 2020, 11:54 AM IST

belthangadi
ಯುವಕ ಆತ್ಮಹತ್ಯೆ

ಕಳೆದ 6 ತಿಂಗಳಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿಯ ಅಳದಂಗಡಿ ಸಮೀಪದ ಪಿಲ್ಯ ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಅಳದಂಗಡಿ ಸಮೀಪದ ಪಿಲ್ಯ ಎಂಬಲ್ಲಿ ನಡೆದಿದೆ.

ಪಿಲ್ಯ ಸಮೀಪದ ಉಲ್ಪೆಕೆರೆ ಎಂಬಲ್ಲಿಯ ನಿವಾಸಿ ಜಯಂತ್​ (31) ಎಂಬವನು ಕಳೆದ 6 ತಿಂಗಳಿನಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದನಂತೆ. ಈತ ಮನೆಯಲ್ಲಿ ಯಾರ ಜೊತೆಗೂ ಮಾತನಾಡದೆ ಮೌನವಾಗಿರುತ್ತಿದ್ದ. ಅಲ್ಲದೆ ರಾತ್ರಿ ನಿದ್ದೆ ಮಾಡದೆ ದೈವಗಳು ಕನಸಿನಲ್ಲಿ ಬರುತ್ತಿವೆ. ಹೀಗಾಗಿ ನಾನು ಸಾಯುತ್ತೇನೆ ಎಂದು ಕೂಡ ಆಗಾಗ ಹೇಳುತ್ತಿದ್ದನಂತೆ.

ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ: ನಾನಂತವನಲ್ಲ ಎನ್ನುತ್ತಿದ್ದಾನೆ ಆರೋಪಿ ಯುವಕ!!

ಡಿ.15 ರಂದು ಈತ ಮನೆಯವರೊಂದಿಗೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದು, ಅಲ್ಲಿಂದ ಯಾರಲ್ಲೂ ಹೇಳದೆ ಬೇಗ ಮನೆಗೆ ಬಂದಿದ್ದಾನೆ. ಬಳಿಕ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮನೆಯವರು ವೇಣೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.