ಚಿತ್ರದುರ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ತಮ್ಮ ನಿವಾಸಕ್ಕೆ ಸ್ವಯಂ ಸೀಲ್ಡೌನ್ ಮಾಡಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕೆಲ ಜನರಿಗೆ ಸಾಮಾಜಿಕ ಅಂತರದ ಬಗ್ಗೆ ಅರ್ಥವೇ ಆಗುತ್ತಿಲ್ಲ. ಪಟ್ಟಣಕ್ಕೆ ಬಂದ ಹಳ್ಳಿ ಜನ, ಆಸ್ಪತ್ರೆಗೆ ಬಂದವರು ಭೇಟಿ ಆಗಲು ಬರುತ್ತಾರೆ. ಸಾಮಾಜಿಕ ಅಂತರ ಕಾಪಾಡಿ ಅಂದರೆ ಬೈದುಕೊಳ್ಳುತ್ತಾರೆ. ಜನ ಬೈದುಕೊಂಡರೂ ಸರಿ ಅಂತರ ಕಾಪಾಡುವುದು ಅನಿವಾರ್ಯ. ಅಂತರ ಕಾಪಾಡುವ ದೃಷ್ಟಿಯಿಂದ ಮನೆಗೆ ಸೀಲ್ಡೌನ್ ಮಾದರಿ ಮಾಡಲಾಗಿದೆ ಎಂದು ಗೂಳಿಹಟ್ಟಿ ಶೇಖರ್ ತಿಳಿಸಿದರು.