ETV Bharat / state

ಬಿಜೆಪಿ ನಾಯಕರು ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಿಸಲ್ಲ.. ಡಿಸಿಎಂ ಅಶ್ವತ್ಥ್​ ನಾರಾಯಣ

author img

By

Published : Oct 28, 2019, 4:36 PM IST

Ashwath Narayana

ಟಿಪ್ಪು ಜಯಂತಿ ಆಚರಣೆ ಬಗ್ಗೆ ಸಾಕಷ್ಟು ಪರ-ವಿರೋಧ ಕೇಳಿ ಬರುತ್ತಿದೆ. ಆದರೂ ಭಾರತೀಯ ಜನತಾ ಪಕ್ಷ ಮಾತ್ರ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಯಾವುದೇ ಕಾರಣಕ್ಕೂ ನಾವು ಆಚರಣೆ ಮಾಡುವುದಿಲ್ಲವೆಂದು ಡಿಸಿಎಂ ಅಶ್ವತ್ಥ್‌ ನಾರಾಯಣ ಹೇಳಿದ್ದಾರೆ.

ಚಿಕ್ಕಬಳ್ಳಾಪುರ: ಟಿಪ್ಪು ಜಯಂತಿ ಆಚರಣೆ ಬಗ್ಗೆ ಸಾಕಷ್ಟು ಪರ-ವಿರೋಧ ಕೇಳಿ ಬರುತ್ತಿದೆ. ಆದರೂ ಭಾರತೀಯ ಜನತಾ ಪಕ್ಷ ಮಾತ್ರ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಯಾವುದೇ ಕಾರಣಕ್ಕೂ ನಾವು ಟಿಪ್ಪು ಜಯಂತಿ ಆಚರಣೆ ಮಾಡುವುದಿಲ್ಲವೆಂದು ಡಿಸಿಎಂ ಅಶ್ವತ್ಥ್​ ನಾರಾಯಣ ಹೇಳಿದ್ದಾರೆ.

ಡಿಸಿಎಂ ಅಶ್ವತ್ಥ್‌ ನಾರಾಯಣ ಸುದ್ದಿಗೋಷ್ಠಿ..

ಬಿಜೆಪಿ ಪಕ್ಷದಲ್ಲಿ ಯಾವುದೇ ನಾಯಕರು ಟಿಪ್ಪು ಜಯಂತಿಯನ್ನು ಆಚರಣೆ ಮಾಡುವುದಿಲ್ಲ. ಸರ್ಕಾರದಿಂದಲೂ ಸಹ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಮಾಡುವುದಿಲ್ಲ. ಮಾಡುವವರೆಲ್ಲ ಬಿಜೆಪಿ ನಾಯಕರಲ್ಲಾ ಎಂದು ಇಂದು ನೇರ ಉತ್ತರ ನೀಡಿದ್ದಾರೆ.

ಇನ್ನು, ಕಳೆದ ನಾಲ್ಕು ದಿನಗಳ ಹಿಂದೆ ಬಿಜೆಪಿ ಮುಖಂಡ ಶರತ್ ಬಚ್ಚೇಗೌಡ ಅವರು ಟಿಪ್ಪು ಜಯಂತಿಯ ಬಗ್ಗೆ ಹೇಳಿಕೆ ನೀಡಿರೋದು ಸಾಕಷ್ಟು ವೈರಲ್ ಆಗಿತ್ತು. ನನಗೆ ಕೆಲವರು ಟಿಪ್ಪು ಜಯಂತಿ ಆಚರಣೆ ಮಾಡದಂತೆ ಹೇಳಿದ್ರು. ನಾನು ಟಿಪ್ಪು ಜಯಂತಿಯನ್ನು ಅದ್ಧೂರಿಯಾಗಿ ಮಾಡುತ್ತೇನೆಂದು ಹೇಳಿಕೆ ನೀಡಿದ್ದರು. ಇದಕ್ಕೆ ಡಿಸಿಎಂ ಅಶ್ವತ್ಥ್ ನಾರಾಯಣ ಖಡಕ್ ಉತ್ತರ ನೀಡಿ, ಬಿಜೆಪಿ ಪಕ್ಷದ ಯಾವ ನಾಯಕರು ಆಚರಣೆ ಮಾಡುವುದಿಲ್ಲ. ಆಚರಣೆ ಮಾಡುವವರು ನಮ್ಮವರಲ್ಲಾ ಎಂಬ ಹೇಳಿಕೆ ನೀಡಿದ್ದಾರೆ. ಹಾಗಾಗಿ ಒಂದೇ ಪಕ್ಷದ ನಾಯಕರಲ್ಲಿ ಟಿಪ್ಪು ಜಯಂತಿ ಬಗ್ಗೆ ಪರ-ವಿರೋಧಗಳು ವ್ಯಕ್ತವಾಗುತ್ತಿದೆ.

Intro:ಟಿಪ್ಪು ಜಯಂತಿಯ ಆಚರಣೆಯ ಬಗ್ಗೆ ಸಾಕಷ್ಟು ಪರ-ವಿರೋಧ ಕೇಳಿಬರುತ್ತಿದ್ದರು,ಭಾರತೀಯ ಜನತ ಪಕ್ಷ ಮಾತ್ರ ತೀವ್ರ ವಿರೋಧವನ್ನು ವ್ಯಪ್ತಪಡಿಸುತ್ತಿದೆ.ಸದ್ಯ ಡಿಸಿಎಂ ಅಶ್ವಥ್ ನಾರಾಯಣ ಟಿಪ್ಪು ಜಯಂತಿಯನ್ನು ಬಿಜೆಪಿ ಪಾರ್ಟಿ ವಿರೋಧ ವ್ಯಕ್ತಪಡಿಸುತ್ತಿದ್ದು ಯಾವುದೇ ಕಾರಣಕ್ಕೂ ಆಚರಣೆ ಮಾಡುವುದಿಲ್ಲವೆಂದು ಹೇಳಿಕೆ ನೀಡಿದ್ದಾರೆ.




Body:ಬಿಜೆಪಿ ಪಕ್ಷದಲ್ಲಿ ಯಾವುದೇ ನಾಯಕರು ಟಿಪ್ಪು ಜಯಂತಿಯನ್ನು ಆಚರಣೆ ಮಾಡುವುದಿಲ್ಲಾ.ಆಚರಣೆ ಮಾಡುವರೆಲ್ಲರು ಬಿಜೆಪಿ ನಾಯಕರಲ್ಲಾ ಎಂದು ಇಂದು ನೇರ ಉತ್ತರವನ್ನು ನೀಡಿದ್ದಾರೆ.

ಇನ್ನೂ ಕಳೆದ ನಾಲ್ಕು ದಿನಗಳಿಂದೆ ಶರತ್ ಬಚ್ಚೇಗೌಡ ಟಿಪ್ಪು ಜಯಂತಿಯ ಬಗ್ಗೆ ಹೇಳಿಕೆ ನೀಡಿದ್ದು ಸಾಕಷ್ಟು ವೈರಲ್ ಆಗಿತ್ತು.ನನಗೆ ಕೆಲವರು ಟಿಪ್ಪು ಜಯಂತಿ ಆಚರಣೆ ಮಾಡದಂತೆ ಹೇಳಿದ್ರು ಆದರೆ ನಾನು ಟಿಪ್ಪು ಜಯಂತಿಯನ್ನು ಅದ್ದೂರಿಯಾಗಿ ಮಾಡುತ್ತೇನೆಂದು ಹೇಳಿಕೆ ನೀಡಿದರು.ಆದರೆ ಇದೇ ಉತ್ತರಕ್ಕೆ ಡಿಸಿಎಂ ಅಶ್ವಥ್ ನಾರಾಯಣ ಖಡಕ್ ಉತ್ತರ ನೀಡಿದ್ದಾರೆ.ಬಿಜೆಪಿ ಪಕ್ಷದ ಯಾವ ನಾಯಕರು ಆಚರಣೆ ಮಾಡಲ್ಲಾ ಆಚರಣೆ ಮಾಡುವವರು ನಮ್ಮವರಲ್ಲಾ ಎಂದು ಪ್ರತ್ಯೂತ್ತರ ನೀಡಿದ್ದಾರೆ.

ಸದ್ಯ ಒಂದೇ ಪಕ್ಷದ ನಾಯಕರು ಟಿಪ್ಪು ಜಯಂತಿಯ ಬಗ್ಗೆ ಪರವಿರೋಧಗಳು ವ್ಯಕ್ತಪಡಿಸುತ್ತಿರುವುದು ಬಿಜೆಪಿ ಪಕ್ಷದಲ್ಲಿ ಒಳಜಗಳ ಶುರುವಾದಂತೆ ಎದ್ದು ಕಾಣುತ್ತಿದೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.