ETV Bharat / state

ನನ್ನ ಹಿಂದೆ ದೊಡ್ಡ ಶಕ್ತಿ ಇದೆ, ಪಕ್ಷದಿಂದ ಉಚ್ಛಾಟನೆ ಸುಲಭವಲ್ಲ: ಮುಂದುವರೆದ 'ಯತ್ನಾಳ್‌ಗಿರಿ'

author img

By

Published : Jul 6, 2021, 4:04 PM IST

Updated : Jul 6, 2021, 4:25 PM IST

basavana gowda patil yatnal
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್

ನನಗೆ ನೋಟಿಸ್ ಕೊಟ್ಟು ಒಂದೂವರೆ ವರ್ಷ ಆಯ್ತು. ಈಗಲೂ ನಾನು ಬಿಜೆಪಿ ಶಾಸಕನಿದ್ದೇನೆ. ಆರಾಮವಾಗಿಯೇ ಇದ್ದೇನೆ. ನನ್ನ ಹಿಂದೆ ಹಿಂದೂ ಹಾಗೂ ಸಮುದಾಯದ ದೊಡ್ಡ ಶಕ್ತಿ ಇದೆ. ಉಚ್ಚಾಟನೆ ಅಷ್ಟು ಹಗುರವಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಚಾಮರಾಜನಗರ: ಬಿಎಸ್​ವೈ ಅಭಿಮಾನಿಗಳ ಘೇರಾವ್, ಪ್ರತಿಭಟನೆಯ ಬಳಿಕವೂ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದು, ಜೊತೆಗೆ ತನ್ನ ಉಚ್ಛಾಟನೆ ಅಷ್ಟು ಸುಲಭವಲ್ಲ ಎಂದು ಹೇಳಿದರು.

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್

ನಗರದ ವರ್ತಕರ ಭವನದಲ್ಲಿ ಆಯೋಜಿಸಿದ್ದ ಪಂಚಮಸಾಲಿ ಹೋರಾಟ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನನಗೆ ನೋಟಿಸ್ ಕೊಟ್ಟು ಒಂದೂವರೆ ವರ್ಷ ಆಯ್ತು. ಈಗಲೂ ನಾನು ಬಿಜೆಪಿ ಶಾಸಕನಿದ್ದೇನೆ. ಆರಾಮವಾಗಿಯೇ ಇದ್ದೇನೆ. ನನ್ನ ಹಿಂದೆ ಹಿಂದೂ ಹಾಗೂ ಸಮುದಾಯದ ದೊಡ್ಡ ಶಕ್ತಿ ಇದೆ, ನನ್ನ ಉಚ್ಛಾಟನೆ ಅಷ್ಟು ಹಗುರವಲ್ಲ ಎಂದರು.

ನಾನು ಸಿಎಂ ನಿವಾಸಕ್ಕೆ ಹೋಗಿ ಒಂದೂವರೆ ವರ್ಷ ಆಯ್ತು. ಅದರ ಪಾಡಿಗೆ ಅನುದಾನ ಬರುತ್ತಿದೆ. ಅಭಿವೃದ್ಧಿ ಆಗುತ್ತಿದೆ. ಲಸಿಕೆ ಅಭಿಯಾನದಲ್ಲಿ ವಿಜಯಪುರವನ್ನು ನಂ.1 ಮಾಡಿದ್ದೇನೆ. ನನಗೆ ಅಕ್ರಮ ಆಸ್ತಿ ಇದೆಯೇ ಎಂದು ತನಿಖೆ ನಡೆಸಿದರು. ಸಾವಿರಾರು ಕೋಟಿ ಲೂಟಿ ಹೊಡೆಯುವ ರಾಜಕಾರಣಿ ನಾನಲ್ಲ, ಪ್ರಾಮಾಣಿಕವಾಗಿರುವುದಿಂದಲೇ ಇಷ್ಟು ಧೈರ್ಯದಿಂದ ಮಾತನಾಡುತ್ತಿದ್ದೇನೆ ಎಂದು ತಿಳಿಸಿದರು.

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್

ನನ್ನನ್ನು ಮುಗಿಸಲು ಬಹಳ ಮಂದಿ ಪ್ರಯತ್ನ ಮಾಡುತ್ತಿದ್ದಾರೆ, ಶ್ರೀರಾಮುಲು ಪಿಎ ರೀತಿ ಬಲಿಪಶು ಮಾಡಲು ಕಾಯುತ್ತಿದ್ದಾರೆ, ಅದೆಲ್ಲಾ ಸಫಲವಾಗುವುದಿಲ್ಲ. ಬೆಂಗಳೂರಿನಲ್ಲಿ 10 ಲಕ್ಷ ಮಂದಿ ಸೇರಿದ ಪಂಚಮಸಾಲಿಯ ಸಮಾವೇಶ ಕಂಡು ಹೈಕಮಾಂಡ್ ತಮ್ಮ ಶಕ್ತಿ ಅರಿತಿದೆ. ಕೊರೊನಾ ಕಾರಣದಿಂದ ನಿಂತಿದ್ದ ನಮ್ಮ ಹೋರಾಟ ಮುಂದುವರೆಯಲಿದ್ದು, ದೆಹಲಿಗೂ ನಿಯೋಗ ಹೋಗುತ್ತೇವೆ ಎಂದರು.

ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಒಕ್ಕೂಟ ಒಡೆಯಲು, ಬಲ ಕುಗ್ಗಿಸಲು ಯತ್ನ ನಡೆಯುತ್ತಿದೆ. ಇದಕ್ಕೆಲ್ಲಾ ಎದೆಗುಂದದೇ ಹೋರಾಟ ಮುಂದುವರಿಸೋಣ, ವಿರೋಧಿಗಳು ಕೂಡ ಮುಂದೆ ಪರಿವರ್ತನೆ ಆಗುತ್ತಾರೆ, ರಾಜಕೀಯ ಶಕ್ತಿ ತೋರಿಸಿ ಮೀಸಲಾತಿ ಪಡೆಯೋಣ ಎಂದು ಕರೆಕೊಟ್ಟರು.

ಕರ್ನಾಟಕ ಹುಲಿ ಘೋಷಣೆ:

ಸಭೆಯಲ್ಲಿ ಆಗಾಗ ಕರ್ನಾಟಕದ ಹುಲಿ ಯತ್ನಾಳ್ ಎಂಬ ಘೋಷಣೆಗಳನ್ನು ಕೂಗಲಾಗುತ್ತಿತ್ತು. ಯತ್ನಾಳ್ ಕೇವಲ ಉತ್ತರ ಕರ್ನಾಟಕದ ಹುಲಿಯಲ್ಲ, ಇಡೀ ರಾಜ್ಯದ ಹುಲಿ ಎಂದು ಅಭಿಮಾನಿಗಳು ಜೈಕಾರ ಹಾಕಿದರು.

ಬಿಎಸ್​ವೈ ಅಭಿಮಾನಿಗಳು ವಶಕ್ಕೆ:

ಯತ್ನಾಳ್ ಸಭೆಯಲ್ಲಿ ಇಬ್ಬರು ಬಿಎಸ್​ವೈ ಅಭಿಮಾನಿಗಳು ಬಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದರು. ಬೆಳಗ್ಗೆಯೇ ಯತ್ನಾಳ್‌ಗೆ ಸಿಎಂ ಅಭಿಮಾನಿಗಳು ಮುತ್ತಿಗೆ ಹಾಕಿದ್ದರಿಂದ ಪೊಲೀಸರು ಭಾರೀ ಭದ್ರತೆಯನ್ನು ಕೈಗೊಂಡಿದ್ದರು.

ಇದನ್ನೂ ಓದಿ: ಕೃಷ್ಣರಾಜಸಾಗರ ಅಣೆಕಟ್ಟು ಬಿರುಕು ಬಿಟ್ಟಿಲ್ಲ: ಕಾವೇರಿ ನೀರಾವರಿ ಅಧೀಕ್ಷಕ ಅಭಿಯಂತರ ಸ್ಪಷ್ಟನೆ

Last Updated :Jul 6, 2021, 4:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.