ETV Bharat / state

ಆಕ್ಸಿಜನ್​​ ದುರಂತ ಸಂತ್ರಸ್ತರ ಮನೆಗಳಿಗೆ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಭೇಟಿ: ಶಾಶ್ವತ ನೆರವಿನ‌ ಭರವಸೆ

author img

By

Published : Jul 22, 2021, 8:38 AM IST

Updated : Jul 22, 2021, 9:12 AM IST

Sudeep Charitable Trust visited the homes of victims of the chamarajangara oxygen disaster
ಆಕ್ಸಿಜನ್​​ ದುರಂತ ಸಂತ್ರಸ್ತರ ಮನೆಗಳಿಗೆ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಭೇಟಿ

ಆಮ್ಲಜನಕ ದುರಂತದಲ್ಲಿ ಮೃತಪಟ್ಟ 24 ಕುಟುಂಬಗಳ ಮನೆಗೆ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್‌ ಭೇಟಿ ನೀಡಿ, ಶಾಶ್ವತ ನೆರವಿನ‌ ಭರವಸೆ ನೀಡಿದೆ.

ಚಾಮರಾಜನಗರ: ಆಮ್ಲಜನಕ ದುರಂತದಲ್ಲಿ ಮೃತಪಟ್ಟ 24 ಕುಟುಂಬಗಳ ಮನೆಗೆ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್‌ ಸದಸ್ಯರು ಭೇಟಿ ನೀಡಿದರು. ಒಂದು ತಿಂಗಳಿಗಾಗುವಷ್ಟು ದಿನಸಿ ಕಿಟ್ ವಿತರಿಸಿ ಕುಟುಂಬಗಳಿಗೆ ಆಗಬೇಕಿರುವ ಸಹಾಯದ ಸರ್ವೇ ಕಾರ್ಯ ನಡೆಸಿದರು.

ಆಕ್ಸಿಜನ್​​ ದುರಂತ ಸಂತ್ರಸ್ತರ ಮನೆಗಳಿಗೆ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಭೇಟಿ

ಟ್ರಸ್ಟ್​​ನ ರಾಜ್ಯಾಧ್ಯಕ್ಷ ರಮೇಶ್ ಕಿಟ್ಟಿ ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಮುಖಂಡ ಚಾ.ಸಿ. ಸೋಮನಾಯಕ ನೇತೃತ್ವದಲ್ಲಿ ಪ್ರತಿ ಮನೆಗಳಿಗೂ ಭೇಟಿ ನೀಡಿದ ಟ್ರಸ್ಟ್​​ನ ಕಾರ್ಯಕರ್ತರು ಒಂದು ತಿಂಗಳಿಗಾಗುವಷ್ಟು ದಿನಸಿ ವಿತರಿಸಿದರು. ಜೊತೆಗೆ ಸಂತ್ರಸ್ತರ ಕುಟುಂಬಗಳ ಸ್ಥಿತಿ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಟ್ಟಿ ಮಾಡಿಕೊಂಡರು.

ಸಂತ್ರಸ್ತರ ಮಕ್ಕಳ ಜಬಾಬ್ದಾರಿ:

ಸಂತ್ರಸ್ತರ ಮಕ್ಕಳು ಅವರ ಇಚ್ಛೆಗನುಸಾರವಾಗಿ ಅವರು ಓದುವ ತನಕ ಶಿಕ್ಷಣ ಕೊಡಿಸುವ ಜವಾಬ್ದಾರಿಯನ್ನು ಟ್ರಸ್ಟ್ ತೆಗೆದುಕೊಳ್ಳಲಿದೆ. ಮಕ್ಕಳನ್ನು ಬೆಂಗಳೂರಿಗೆ ಬೇಕಾದರೂ ಕಳುಹಿಸಬಹುದು. ಇಲ್ಲವೇ ಸ್ಥಳೀಯವಾಗಿ ವಿದ್ಯಾಭ್ಯಾಸ ನಡೆಸಿದರೂ ನೆರವು ನೀಡಲಾಗುವುದು. ಸಂತ್ರಸ್ತರ ಕುಟುಂಬಗಳಿಗೆ ಶಾಶ್ವತ ಪರಿಹಾರ ನೀಡಲಿದ್ದು, ನೌಕರಿ,‌ ಸ್ವಾವಲಂಬಿ ಜೀವನ‌ ನಡೆಸಲು ‌ಸಹಾಯ ಮಾಡಲಾಗುವುದು, ದುರಂತದಲ್ಲಿ ಮೃತಪಟ್ಟ ಎಲ್ಲ ಕುಟುಂಬಕ್ಕೂ ನೆರವು ನೀಡಲಿದ್ದು, ಅಗತ್ಯವಿರುವವರು ಟ್ರಸ್ಟ್ ಸಂಪರ್ಕಿಸುವಂತೆ ರಮೇಶ್ ಕಿಟ್ಟಿ ಕೋರಿದ್ದಾರೆ.

ಶಾಶ್ವತ ಪರಿಹಾರ:

ಈಗಾಗಲೇ ಮೊದಲ ಹಂತದ ಸರ್ವೇ ಕಾರ್ಯ ಮುಗಿದಿದೆ. ನಮ್ಮ ಸೇವೆ ಕೇವಲ ದಿನಸಿ ಕಿಟ್, ಶಿಕ್ಷಣಕ್ಕೆ ಸಹಾಯಕಷ್ಟೇ ನಿಲ್ಲಲ್ಲ.‌ ಶೀಘ್ರವೇ ಇವರೆಲ್ಲರಿಗೂ ಶಾಶ್ವತ ಪರಿಹಾರ ಒದಗಿಸುತ್ತೇವೆ. ಇಂದು ಕೂಡ ದಿನಸಿ ಕಿಟ್ ವಿತರಿಸಿ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದ್ದು,‌ ಇವರ ಜೀವನಕ್ಕೆ ಕಿಚ್ಚ ಸುದೀಪ್ ಟ್ರಸ್ಟ್ ಶಾಶ್ವತ ನೆರವು ನೀಡಲಿದೆ. ಕೆಲವೇ ದಿನಗಳಲ್ಲಿ ಅದರ ರೂಪುರೇಷೆ ತಿಳಿಸುವುದಾಗಿ ರಮೇಶ್ ಕಿಟ್ಟಿ ಹೇಳಿದರು.

ಸರ್ಕಾರ ಬರಲಿಲ್ಲ- ಟ್ರಸ್ಟ್ ಬಂತು:

ದಿನಸಿ ಕಿಟ್ ಪಡೆದುಕೊಂಡು ಚಾಮರಾಜನಗರ ತಾಲೂಕಿನ ಬಿಸಿಲವಾಡಿ ಗ್ರಾಮದ ಜ್ಯೋತಿ ಮಾತನಾಡಿ, ತನ್ನ ಪತಿ ಹೆಸರನ್ನು ಪರಿಹಾರ ಪಟ್ಟಿಯಿಂದ ಕೈ ಬಿಟ್ಟು ಸರ್ಕಾರ ಅನ್ಯಾಯವೆಸಗುತ್ತಿದೆ.‌ ಇದುವರೆಗೂ ಸರ್ಕಾರ ತಮ್ಮ ನೆರವಿಗೆ ಬರಲಿಲ್ಲ. ಸುದೀಪ್ ಟ್ರಸ್ಟ್ ಸಹಾಯಹಸ್ತ ಚಾಚಿದೆ. ಮಕ್ಕಳ ಶಿಕ್ಷಣಕ್ಕೂ ನೆರವಿನ ಭರವಸೆ ಕೊಟ್ಟಿದ್ದು, ನಟ ಸುದೀಪ್ ಅವರಿಗೆ ಕೃತಜ್ಞರಾಗಿದ್ದೇವೆ ಎಂದರು..

ಇದನ್ನೂ ಓದಿ: 30 ವರ್ಷಗಳಿಂದ ದುರಸ್ತಿಯಾಗದ ರಸ್ತೆ : ಮತದಾನ ಬಹಿಷ್ಕಾರಕ್ಕೆ ಮುಂದಾದ ಕೊಯಿಲ ಗ್ರಾಮಸ್ಥರು

Last Updated :Jul 22, 2021, 9:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.