ETV Bharat / state

ಶಾಲಾ ಬಾಲಕಿ ಚುಡಾಯಿಸಿದ ಪ್ರಕರಣ: ಮಗನಿಗೆ ಬುದ್ಧಿವಾದ ಹೇಳದಿದ್ದಕ್ಕೆ ತಂದೆಯೂ ಜೈಲುಪಾಲು!

author img

By

Published : Feb 11, 2021, 4:58 PM IST

Updated : Feb 11, 2021, 8:39 PM IST

Punishment to 3 people  Who Ragging Girl
ಶಾಲಾ ಬಾಲಕಿ ಚುಡಾಯಿಸಿದ ಪ್ರಕರಣ: ಮಗನಿಗೆ ಬುದ್ಧಿವಾದ ಹೇಳದಿದ್ದಕ್ಕೆ ತಂದೆಯೂ ಜೈಲುಪಾಲು!

ಶಾಲಾ ಬಾಲಕಿಯನ್ನು ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ - ಮಗ ಹಾಗೂ ಮತ್ತೋರ್ವನಿಗೆ ಚಾಮರಾಜನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಚಾಮರಾಜನಗರ: ಶಾಲಾ ಬಾಲಕಿಯನ್ನು ಚುಡಾಯಿಸಿದ ಪ್ರಕರಣ ಸಂಬಂಧ ತಂದೆ - ಮಗ ಹಾಗೂ ಮತ್ತೋರ್ವನಿಗೆ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

ಹನೂರು ತಾಲೂಕಿನ ಕೌದಳ್ಳಿ ಗ್ರಾಮದ ಮಾದಪ್ಪ(45), ಈತನ ಮಗ ಆನಂದ (20) ಹಾಗೂ ಆನಂದನ ಸ್ನೇಹಿತ ನಾಗೇಂದ್ರ ಶಿಕ್ಷೆಗೊಳಗಾದ ಅಪರಾಧಿಗಳು. ಶಾಲಾ ಬಾಲಕಿಗೆ ಚುಡಾಯಿಸಿದ ಆನಂದ ಹಾಗೂ ನಾಗೇಂದ್ರನಿಗೆ 6 ತಿಂಗಳು ಜೈಲು, 5 ಸಾವಿರ ರೂ‌. ದಂಡ ಹಾಗೂ ಅಪ್ಪ ಮಾದಪ್ಪನಿಗೆ 1 ವರ್ಷ ಜೈಲು, 10 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಸದಾಶಿವ ಎಸ್.ಸುಲ್ತಾನ್ ಪುರಿ ಆದೇಶಿಸಿದ್ದಾರೆ.

ಘಟನೆ ಹಿನ್ನೆಲೆ: ಆರೋಪಿಗಳಾದ ಆನಂದ್ ಹಾಗೂ ನಾಗೇಂದ್ರ ಅದೇ ಗ್ರಾಮದ ಬಾಲಕಿ ಶಾಲೆಗೆ ಹೋಗುವಾಗ ನಿತ್ಯ ಚುಡಾಯಿಸಿ, ರೇಗಿಸುತ್ತಿದ್ದರು. ಜೊತೆಗೆ ಶಾಲಾ ಬಳಿಯ ಹೋಗಿ ಕೂಡ ಚುಡಾಯಿಸುವುದನ್ನು ಮುಂದುವರೆಸಿದ್ದರು. 2018ರ ಡಿ.30ರಂದು ಮೊದಲ ಆರೋಪಿ ಆನಂದ್ ಹಾಗೂ ಆತನ ತಂದೆ ಮಾದಪ್ಪ ಬೈಕ್​ನಲ್ಲಿ ಬಾಲಕಿಯ ಮನೆ ಬಳಿ ಹೋಗಿ ಗಲಾಟೆ ನಡೆಸಿದ್ದರು. ಈ ವೇಳೆ ಅಕ್ಕಪಕ್ಕದ ಜನ ಸುತ್ತುವರೆದಾಗ ಬೈಕ್ ಬಿಟ್ಟು ಪರಾರಿಯಾಗಿದ್ದರು.

ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬುದ್ಧಿವಾದ ಹೇಳಬೇಕಾದ ಅಪ್ಪನೇ ಹೋಗಿ ಗಲಾಟೆ ಮಾಡಿದ್ದರಿಂದ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ‌. ವಿಶೇಷ ಸರ್ಕಾರಿ ಅಭಿಯೋಜಕರಾಗಿ ಯೋಗೇಶ್ ವಾದ ಮಂಡಿಸಿದ್ದರು.

Last Updated :Feb 11, 2021, 8:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.