ETV Bharat / state

ಬಿ ವೈ ವಿಜಯೇಂದ್ರಗೆ ಮೈಸೂರು ಭಾಗದ ಪಕ್ಷದ ಸಂಘಟನೆಗೆ ಸಚಿವ ಸೋಮಶೇಖರ್​ ಬಹಿರಂಗ ಆಹ್ವಾನ

author img

By

Published : Dec 1, 2021, 3:35 PM IST

minister s t somashekar
ಸಚಿವ ಸೋಮಶೇಖರ್​

ಕಾಂಗ್ರೆಸ್​ನಲ್ಲೇ ಇದ್ದಿದ್ದರೆ ನಾನು ಸಹಕಾರ ಸಚಿವನಾಗುತ್ತಿರಲಿಲ್ಲ. ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿ, ಸಚಿವನನ್ನಾಗಿ ಮಾಡಿದ ಬಿಜೆಪಿಯ ಋಣ ನನ್ನ ಮೇಲಿದೆ. ಆ ಋಣ ತೀರಿಸಲು ರಘು ಕೌಟಿಲ್ಯ ಅವರ ಗೆಲುವಿಗೆ ದುಡಿಯುತ್ತಿದ್ದೇನೆ. ಅವರು ಗೆದ್ದೇ ಗೆಲ್ಲುತ್ತಾರೆ ಎಂದರು..

ಚಾಮರಾಜನಗರ : ಮರಿ ರಾಜಾಹುಲಿ ಮೈಸೂರು-ಚಾಮರಾಜನಗರದ ಕಡೆ ವಿಶೇಷ ಗಮನ ಕೊಟ್ಟರೆ ಈ ಭಾಗದ 15 ಕ್ಷೇತ್ರದಲ್ಲಿ ಕಮಲ ಅರಳಲಿದೆ ಎನ್ನುವ ಮೂಲಕ ಮುಂದಿನ ಚುನಾವಣೆಗೆ ಮೈಸೂರಿನತ್ತ ಬರುವಂತೆ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರಗೆ ಸಚಿವ ಎಸ್​.ಟಿ. ಸೋಮಶೇಖರ್​ ಬಹಿರಂಗ ಆಹ್ವಾನ ನೀಡಿದರು.

ವಿಧಾನಪರಿಷತ್​ ಚುನಾವಣೆ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಪರ ನಗರದಲ್ಲಿ ನಡೆದ ಪ್ರಚಾರದ ವೇಳೆ ಸಚಿವ ಸೋಮಶೇಖರ್​ ಮಾತನಾಡಿ, ನಾನು ಈ ಹಿಂದೆಯೂ ಹೇಳಿದ್ದೇನೆ. ಬಿ.ವೈ. ವಿಜಯೇಂದ್ರ ಅವರು ಮೈಸೂರು ಭಾಗದತ್ತ ಪಕ್ಷ ಸಂಘಟನೆಯ ಕಡೆಗೆ ಗಮನ ನೀಡಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್​ಸ್ವೀಪ್ ಮಾಡಲಿದೆ. ಈ ಭಾಗದಲ್ಲಿ ಬಿಜೆಪಿ ಶಕ್ತಿ ಇನ್ನಷ್ಟು ಹೆಚ್ಚಲಿದೆ ಎಂದರು.

ತ್ರಿಶಂಕು ಸ್ಥಿತಿಯಲ್ಲಿ ಜೆಡಿಎಸ್​ ಅಭ್ಯರ್ಥಿ ಮಂಜೇಗೌಡ : ಜೆಡಿಎಸ್​ ಅಭ್ಯರ್ಥಿ ಮಂಜೇಗೌಡರ ಬಗ್ಗೆ ವ್ಯಂಗ್ಯವಾಡಿದ ಸಚಿವ ಸೋಮಶೇಖರ್​, ಮಂಜೇಗೌಡರು ಸಾ.ರಾ‌. ಮಹೇಶ್​ ಜೊತೆ ಹೋದರೆ ಜಿ.ಟಿ. ದೇವೇಗೌಡ ಕಾಲೆಳೆಯುತ್ತಾರೆ. ಜಿಟಿಡಿಯನ್ನ ತಪ್ಪಿಸಿಕೊಂಡು ಪಿರಿಯಾಪಟ್ಟಣದತ್ತ ಹೋದರೆ ಅಲ್ಲಿ ಶಾಸಕ ಮಹಾದೇವ ಅವರ ಕಾಟ. ಇದು ಮಂಜೇಗೌಡರ ತೊಳಲಾಟ ಎಂದರು.

ಇದನ್ನೂ ಓದಿ: ಬೆಂಗಳೂರು : 5 ಕೆಜಿ ಚಿನ್ನ ಎಗರಿಸಿದ್ದ 7 ಖದೀಮರ ಗ್ಯಾಂಗ್​​ ಅಂದರ್​!

ಇನ್ನು ಕಾಂಗ್ರೆಸ್​ ಅಭ್ಯರ್ಥಿ ಗೆಲ್ಲಬೇಕಾದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಪ್ರಚಾರಕ್ಕೆ ಬರಬೇಕು. ಅವರು ಬಾರದಿದ್ದರೆ ಕಾಂಗ್ರೆಸ್​ ಗೆಲ್ಲುವುದು ಕಷ್ಟ. ಇನ್ನು ಸಿದ್ದರಾಮಯ್ಯ ಬರುತ್ತಾರೋ ಇಲ್ಲವೋ ಅನುಮಾನ. ಹೀಗಿರಬೇಕಾದರೆ ಕಾಂಗ್ರೆಸ್​ ಹೇಗೆ ತಾನೇ ಗೆಲ್ಲುತ್ತದೆ ಎಂದರು.

ಬಿಜೆಪಿಯ ಋಣ ನನ್ನ ಮೇಲಿದೆ : ಕಾಂಗ್ರೆಸ್​ನಲ್ಲೇ ಇದ್ದಿದ್ದರೆ ನಾನು ಸಹಕಾರ ಸಚಿವನಾಗುತ್ತಿರಲಿಲ್ಲ. ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿ, ಸಚಿವನನ್ನಾಗಿ ಮಾಡಿದ ಬಿಜೆಪಿಯ ಋಣ ನನ್ನ ಮೇಲಿದೆ. ಆ ಋಣ ತೀರಿಸಲು ರಘು ಕೌಟಿಲ್ಯ ಅವರ ಗೆಲುವಿಗೆ ದುಡಿಯುತ್ತಿದ್ದೇನೆ. ಅವರು ಗೆದ್ದೇ ಗೆಲ್ಲುತ್ತಾರೆ ಎಂದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.