ETV Bharat / state

ಭಕ್ತರಿಂದ ಗಿಜಿಗಿಡುತ್ತಿದ್ದ ಮಾದಪ್ಪನ ಬೆಟ್ಟ ಈಗ ಖಾಲಿ ಖಾಲಿ

author img

By

Published : Mar 20, 2020, 12:48 PM IST

kn_cnr_01_mmhills_av_7202614
ಭಕ್ತರಿಂದ ಗಿಜಿಗುಡುತ್ತಿದ್ದ ಮಾದಪ್ಪನ ಬೆಟ್ಟ ಈಗ ಖಾಲಿ-ಖಾಲಿ..!

ರಾಜ್ಯದ ಪ್ರಸಿದ್ಧ ದೇಗುಲಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕೊರೊನಾ ಬಿಸಿ ತಟ್ಟಿದೆ. ಪರಿಣಾಮ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಸಾಕಷ್ಟು ಇಳಿಮುಖವಾಗಿದೆ.

ಚಾಮರಾಜನಗರ: ರಾಜ್ಯದ ಪ್ರಸಿದ್ಧ ದೇಗುಲಗಳಲ್ಲೊಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕೊರೊನಾ ಪರಿಣಾಮ ಬೀರಿದೆ. ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಸಾಕಷ್ಟು ಇಳಿಮುಖವಾಗಿದೆ.

ಬೆಂಗಳೂರು, ಮಂಡ್ಯ ಸೇರಿದಂತೆ ತಮಿಳುನಾಡಿನಿಂದಲೂ ಕ್ಷೇತ್ರಕ್ಕೆ ಪ್ರತಿದಿನ 8-10 ಸಾವಿರ ಮಂದಿ ಆಗಮಿಸುತ್ತಿದ್ದರು. ವಾರಾಂತ್ಯದಲ್ಲಿ ಈ ಸಂಖ್ಯೆ ದುಪ್ಪಟ್ಟಾಗುತ್ತಿತ್ತು. ಆದರೀಗ ಆ ಸಂಖ್ಯೆ 1,500-2,000ಕ್ಕೆ ಇಳಿದಿದ್ದು ಕ್ಷೇತ್ರದ ಆವರಣ, ವಸತಿ ಗೃಹಗಳು ಜನರ ಓಡಾಟವಿಲ್ಲದೆ ಖಾಲಿ ಖಾಲಿಯಾಗಿವೆ. ಇದೇ 21 ರಿಂದ 26 ರವರೆಗೆ ನಡೆಯಬೇಕಿದ್ದ ಯುಗಾದಿ ಜಾತ್ರೆ ಮತ್ತು ರಥೋತ್ಸವ ರದ್ದುಗೊಂಡಿದ್ದು, ಭಕ್ತರು ತಂಗಲು ನಿರ್ಬಂಧ ಹೇರಲಾಗಿದೆ. ತಮಿಳುನಾಡಿನ ಜಿಲ್ಲಾಧಿಕಾರಿಗಳಿಗೆ ಈ ಮಾಹಿತಿ ರವಾನಿಸಲಾಗಿದ್ದು, ಅಲ್ಲಿನ‌ ಭಕ್ತರಿಗೆ ತಿಳಿಸುವಂತೆ ಚಾಮರಾಜನಗರ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.