ETV Bharat / state

ಸಿಎಂಗೆ ಕುರ್ಚಿ ಭಯದ ಜತೆಗೆ ಚಾಮರಾಜನಗರಕ್ಕೆ ಬಂದ್ರೆ ಜನ್ರಿಂದ ಹೊಡೆಸಿಕೊಳ್ಳುವ ಭಯವಿದೆ: ಡಿಕೆಶಿ

author img

By

Published : Jun 27, 2021, 2:23 PM IST

ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್
dk shivakumar

ಆಮ್ಲಜನಕ ದುರಂತದಿಂದ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ ಹೇಳಲು ಸರ್ಕಾರದ ಕಡೆಯಿಂದ ಯಾರೂ ಬರಲಿಲ್ಲ. ಹಾಗಾಗಿ ನಾವು ಬಂದಿದ್ದೇವೆ. ರಾಜ್ಯದ ಸಿಎಂ ಅವರಿಗೆ ಕುರ್ಚಿ ಭಯದ ಜತೆ ಇಲ್ಲಿಗೆ ಬಂದಾಗ ಜನರ ಕೈಯಿಂದ ಬೈಸಿಕೊಳ್ಳುವ, ಹೊಡೆಸಿಕೊಳ್ಳುವ ಭಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.

ಚಾಮರಾಜನಗರ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಕುರ್ಚಿ ಭಯದ ಜತೆ ಇಲ್ಲಿಗೆ ಬಂದಾಗ ಜನರ ಕೈಯಿಂದ ಬೈಸಿಕೊಳ್ಳುವ, ಹೊಡೆಸಿಕೊಳ್ಳುವ ಭಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಅಧಿಕಾರದಲ್ಲಿದ್ದಾಗ ಜನರಿಂದ ಬೈಸಿಕೊಳ್ಳಬೇಕೆಂಬ ಕಾರಣಕ್ಕೆ ಚಾಮರಾಜನಗರಕ್ಕೆ ಮುಖ್ಯಮಂತ್ರಿ ಬರುತ್ತಿಲ್ಲ. ಇದರೊಟ್ಟಿಗೆ, ಅವರಿಗೆ ಕುರ್ಚಿ ಭಯವೂ ಕಾಡುತ್ತಿದೆಯೆಂದು ಲೇವಡಿ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್

36 ಜನರು ಮೃತಪಟ್ಟರೂ ಯಾವೊಬ್ಬ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದೇ ಯಾರನ್ನೂ ಜವಾಬ್ದಾರಿಯನ್ನಾಗಿಸದ ಸರ್ಕಾರ ಸತ್ತಿದೆಯಾ, ಬದುಕಿದೆಯಾ? ಎಂಬುದನ್ನು ಜನರೇ ತೀರ್ಮಾನಿಸುತ್ತಾರೆ. ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದಿಂದ ಯಾರಾದರೂ ಭೇಟಿ ಮಾಡುತ್ತಾರೆ, ಸಾಂತ್ವನ ಹೇಳುತ್ತಾರೆಂದು ಕಾಯುತ್ತಿದ್ದೆ. ಯಾರೂ ಮಾಡಲಿಲ್ಲ, ಕರುಳು ನೊಂದಿದ್ದರಿಂದ ನಾನೇ ಭೇಟಿ ಮಾಡಿ ಪಕ್ಷದ ವತಿಯಿಂದ 1 ಲಕ್ಷ ರೂ‌. ಕೊಡಲಾಗುತ್ತಿದೆ ಎಂದು ತಿಳಿಸಿದರು.

ಆಮ್ಲಜನಕ ದುರಂತ ಸರ್ಕಾರ ಮಾಡಿದ ಕೊಲೆ:

ಆಮ್ಲಜನಕ ದುರಂತ ಸರ್ಕಾರ ಮಾಡಿದ ಕೊಲೆಯಾಗಿದೆ‌. ಹೈಕೋರ್ಟ್ ಮೊದಲಿಗೆ ತನಿಖಾ ಸಮಿತಿ ರಚಿಸಿತ್ತು‌. ಇದಾದ ಬಳಿಕ ಸರ್ಕಾರ ತಾನು ನೇಮಿಸಿದ್ದ ತನಿಖಾ ತಂಡವನ್ನು ಹಿಂಪಡೆಯಬೇಕಿತ್ತು, ಅದು ಮಾಡಲಿಲ್ಲ, ಹೈ ಕೋರ್ಟ್ ನಿಂದಾಗಿ ಮೃತಪಟ್ಟವರಿಗೆ 2 ಲಕ್ಷ ರೂ. ಸಿಕ್ಕಿದ್ದು ಜನರ ಪರವಾಗಿ ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಇದೇ ವೇಳೆ ರಾಜ್ಯದಲ್ಲಿ ಕೊರೊನಾಗೆ ಮೂರು ಲಕ್ಷ ಮಂದಿ ಮೃತಪಟ್ಟಿದ್ದು, ಸರ್ಕಾರ ಸಾವಿನ ಸಂಖ್ಯೆಗಳನ್ನು ಮುಚ್ಚಿಡುತ್ತಿದೆ. ನಮ್ಮ ಕಾರ್ಯಕರ್ತರು ಸಮೀಕ್ಷೆ ನಡೆಸುವರು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.