ETV Bharat / state

ಚಾಮರಾಜನಗರದ ಬಾಣಳ್ಳಿ ಬಳಿ ಕಾರು-ಬೈಕ್ ಅಪಘಾತ.. ಇಬ್ಬರು ಗಾರೆ ಕೆಲಸಗಾರರು ಸಾವು

author img

By

Published : Mar 13, 2022, 3:58 PM IST

ಕಾರು-ಬೈಕ್ ಅಪಘಾತ
ಕಾರು-ಬೈಕ್ ಅಪಘಾತ

ಚಾಮರಾಜನಗರ ತಾಲೂಕಿನ‌ ಬಾಣಳ್ಳಿ ಗೇಟ್ ಸಮೀಪ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

ಚಾಮರಾಜನಗರ: ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಬೈಕ್​​​ ಸವಾರರು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ‌ ಬಾಣಳ್ಳಿ ಗೇಟ್ ಸಮೀಪ ಸಂಭವಿಸಿದೆ.

ಮೃತರನ್ನು ಮೈಸೂರಿನ ರಾಜು(28) ಹಾಗೂ ಮಂಡ್ಯ ಜಿಲ್ಲೆಯ ಜಯರಾಮು(65) ಎಂದು ಗುರುತಿಸಲಾಗಿದೆ. ಮೃತರಿಬ್ಬರೂ ಗಾರೆ ಕೆಲಸಗಾರರಾಗಿದ್ದು, ಹಣ ಪಡೆಯುವ ಸಂಬಂಧ ಚಾಮರಾಜನಗರದತ್ತ ಬಂದಿದ್ದರು ಎನ್ನಲಾಗ್ತಿದೆ.

ಮೈಸೂರಿನಿಂದ ಗುಂಬಳ್ಳಿಯತ್ತ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಬೈಕ್​​ಗೆ ಡಿಕ್ಕಿ ಹೊಡೆದಿದ್ದರಿಂದ ಸವಾರ ರಾಜು ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆ ಸಾಗಿಸುವಾಗ ಜಯರಾಮು ಅಸುನೀಗಿದ್ದಾರೆ. ಕಾರು, ಬೈಕ್ ಹಾಗೂ ಚಾಲಕನನ್ನು ವಶಕ್ಕೆ ಪಡೆದು ಸಂತೇಮರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.