ETV Bharat / state

ಮೈಗೆ ಮೆತ್ತಿದ್ದ ಕೆಸರು ತೊಳೆಯಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದು ಮೂವರು ಸಹೋದರರು ಸಾವು

author img

By

Published : Aug 4, 2020, 10:52 PM IST

Bidar
ಮೂವರು ಸಹೋದರರು ನೀರು ಪಾಲು

ಮೈ ಕೆಸರು ತೊಳೆದುಕೊಳ್ಳಲು ಕೃಷಿ ಹೊಂಡಕ್ಕಿಳಿದ ಮೂವರು ಯುವಕರು ಕಾಲು ಜಾರಿ ನೀರು ಪಾಲಾದ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ನಾಮದಾಬಾದ್ ವಾಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಬೀದರ್: ಗದ್ದೆಯಲ್ಲಿ ಕೆಲಸ ಮಾಡುವಾಗ ಮಧ್ಯಾಹ್ನ ಸುರಿದ ಮಳೆಯಿಂದ ಮೈ ಕೆಸರು ತೊಳೆದುಕೊಳ್ಳಲು ಕೃಷಿ ಹೊಂಡಕ್ಕಿಳಿದ ಮೂವರು ಯುವಕರು ಕಾಲು ಜಾರಿ ನೀರು ಪಾಲಾದ ಘಟನೆ ನಡೆದಿದೆ.

ಮೈ ಕೆಸರು ತೊಳೆದುಕೊಳ್ಳಲು ಕೃಷಿ ಹೊಂಡಕ್ಕಿಳಿದ ಮೂವರು ಸಹೋದರರು ನೀರು ಪಾಲು

ಜಿಲ್ಲೆಯ ಹುಮನಾಬಾದ್ ತಾಲೂಕಿನ ನಾಮದಾಬಾದ್ ವಾಡಿ ಗ್ರಾಮದ ಹೊರವಲಯದಲ್ಲಿ ಈ ಅವಘಡ ನಡೆದಿದ್ದು, ಮೃತ ಯುವಕರು ಚಳಕಾಪೂರ್ ವಾಡಿ ಗ್ರಾಮದವರಾಗಿದ್ದಾರೆ ಎನ್ನಲಾಗಿದೆ. ವಿರೇಂದ್ರ ರೆಡ್ಡಿ(23) ಕರಿಬಸಪ್ಪ ರೆಡ್ಡಿ(20) ಹಾಗೂ ಹನುಮಂತ(18) ವರ್ಷದ ಯುವಕರು ಬಸಪ್ಪ ಎಂಬಾತರ ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡಿ ಮನೆಗೆ ವಾಪಸ್ಸಾಗುವಾಗ ಕೃಷಿ ಹೊಂಡದಲ್ಲಿ ಬಿದ್ದ ಒಬ್ಬ ಸಹೋದರನನ್ನು ಉಳಿಸಲು ಹೋಗಿ ಮೂವರು ನೀರು ಪಾಲಾಗಿದ್ದಾರೆ.

ಸ್ಥಳಕ್ಕೆ ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಪಿಎಸ್ ಐ ಮಹಾಂತೇಶ್ ಭೇಟಿ ನೀಡಿದ್ದು, ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಧೂಳಪ್ಪ ಅವರಿಗೆ ನಾಲ್ಕು ಮಕ್ಕಳಿದ್ದು, ಈ ಪೈಕಿ ಮೂವರು ಗಂಡು ಒಬ್ಬ ಹೆಣ್ಣು ಮಗು ಇದೆ. ವಿಧಿಯಾಟಕ್ಕೆ ಮೂವರು ಸಹೋದರರು ಇಂದು ನೀರು ಪಾಲಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.