ಹೊಸಪೇಟೆ : ತುಂಗಭದ್ರಾ ಜಲಾಶಯದಿಂದ ನದಿಗೆ ಒಂದು ಲಕ್ಷಕ್ಕಿಂತ ಹೆಚ್ಚು ಕ್ಯೂಸೆಕ್ ನೀರು ಹರಿ ಬಿಟ್ಟದ್ದರಿಂದ ಹಂಪಿ ನದಿ ಪಾತ್ರದ ಸ್ಮಾರಕಗಳಾದ ಕರ್ಮಾಧಿ ಮಂಟಪ, ಜನಿವಾರ ಮಂಟಪ ಮುಳಗಡೆ ಹಂತಕ್ಕೆ ತಲುಪಿವೆ.
ಪುರಂದರದಾಸರ ಮಂಟಪ ಸಂಪೂರ್ಣ ಮುಳಗಡೆಯಾಗಿದೆ. ಯೋಗ ಅಚ್ಯುತ್ ಆಶ್ರಮದ ಬಳಿ ಜನರು ಸುರಕ್ಷಿತವಾಗಿ ಸ್ಥಳಾಂತರಗೊಂಡಿದ್ದಾರೆ. ಚಕ್ರತೀರ್ಥ ಕೋದಂಡರಾಮ ದೇವಸ್ಥಾನದ ಮುಂಭಾಗ ನೀರು ನುಗ್ಗಿದೆ. ಕೋದಂಡರಾಮ ಹಾಗೂ ಯಂತ್ರೋದ್ಧಾರಕ ದೇವಸ್ಥಾನಕ್ಕೆ ಒನಕೆ ಕಿಂಡಿ ಮೂಲಕ ಹೋಗುವ ಕಾಲುದಾರಿ ಜಲಾವೃತಗೊಂಡಿದೆ.