ETV Bharat / state

ಅಣ್ಣಾಮಲೈ ಕರ್ನಾಟಕದವರಲ್ಲ, ಹೀಗಾಗಿ ಅವರ ರಾಜ್ಯದ ಪರ ಮಾತಾಡಿದ್ದಾರೆ: ಸಚಿವ ಕಾರಜೋಳ

author img

By

Published : Aug 17, 2021, 11:20 AM IST

Minister Govinda Karajola
ಗೋವಿಂದ ಕಾರಜೋಳ

ಮೇಕೆದಾಟು ಯೋಜನೆ ಕುರಿತಂತೆ ಮಾತನಾಡಿರುವ ಸಚಿವ ಕಾರಜೋಳ, ನಮ್ಮ ರಾಜ್ಯಕ್ಕೆ ಹಂಚಿಕೆಯಾದ ನೀರನ್ನು ಬಳಕೆ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ನೀರು ಹಂಚಿಕೆ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಲು ಯಾರ ಅಪ್ಪಣೆಯನ್ನೂ ಕೇಳುವುದಿಲ್ಲ ಎಂದಿದ್ದಾರೆ.

ಹೊಸಪೇಟೆ(ವಿಜಯನಗರ): ಅಣ್ಣಾಮಲೈ ಕರ್ನಾಟಕದವರಲ್ಲ, ತಮಿಳುನಾಡಿನವರು. ಹಾಗಾಗಿ, ಅವರ ರಾಜ್ಯದ‌ ಪರವಾಗಿ ಮಾತನಾಡಿದ್ದಾರೆ. ರಾಜ್ಯಕ್ಕೆ ಹಂಚಿಕೆಯಾಗಿರುವ ನೀರನ್ನು ಬಳಕೆ ಮಾಡಿಕೊಳ್ಳುವ ಜವಾಬ್ದಾರಿ ನಮ್ಮದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ನಗರದ ಟಿಬಿ ಡ್ಯಾಂ ವೈಕುಂಠ ಅತಿಥಿ ಗೃಹದಲ್ಲಿ ಮಾತನಾಡುತ್ತಾ, ನೀರು ಹಂಚಿಕೆ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಲಾಗುವುದು ಎಂದರು.

ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಿಸುವ ಕುರಿತು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ನಡುವೆ ಸಭೆ ನಡೆಯಬೇಕಾಗಿದೆ. ಬಳಿಕ ಯೋಜನೆ ರೂಪುರೇಷೆ ನಿರ್ಧರಿಸಲಾಗುವುದು ಎಂದು ಹೇಳಿದರು.

ಮೇಕೆದಾಟು ಯೋಜನೆ ಕುರಿತು ಜಲಸಂಪನ್ಮೂಲ ಸಚಿವ ಕಾರಜೋಳ ಪ್ರತಿಕ್ರಿಯೆ

ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್, ಸಂಸದರಾದ ಸಂಗಣ್ಣ ಕರಡಿ, ವೈ.ದೇವೇಂದ್ರಪ್ಪ, ಶಾಸಕ ಪರಣ್ಣ ಮುನವಳ್ಳಿ ಇತರರು ಹಾಜರಿದ್ದರು.

ಇದನ್ನೂ ಓದಿ: ಎಸ್ಕಾರ್ಟ್ ಇಲ್ಲದೇ ಸಚಿವರ ಓಡಾಟ: ಕುತೂಹಲ ಕೆರಳಿಸಿದ ಆನಂದ್​ ಸಿಂಗ್​ ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.