ETV Bharat / state

ಗಾಂಧೀಜಿ ಕನಸು ಈಡೇರಿಸಲು ಹೊಸಪೇಟೆಯಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ

author img

By

Published : Oct 12, 2019, 4:54 AM IST

ಹೊಸಪೇಟೆ ತಾಲೂಕು ಬಿಜೆಪಿ ಘಟಕದಿಂದ ಇಂದು ನಗದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿದೆ.

ಹೊಸಪೇಟೆಯಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ

ಬಳ್ಳಾರಿ: ಗಾಂಧೀಜಿ ಕನಸನ್ನು ಸಕಾರಗೊಳಿಸಲು ಬಿಜೆಪಿ ಸಂಕಲ್ಪ ಯಾತ್ರೆ ನಡೆಸಲಿದೆ ಎಂದು ಹೊಸಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಅನಂತ ಪದ್ಮನಾಭ ಹೇಳಿದ್ದಾರೆ.

ನಗರ ಬಿ.ಜೆ.ಪಿ ಪಕ್ಷದ ತಾಲೂಕು ಭವನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇನ್ನೂ ದಲಿತರು ದಲಿತರಾಗಿದ್ದಾರೆ. ಕಾಂಗ್ರೆಸ್​ನವರು ಸ್ವಾತಂತ್ರ್ಯ ಹೋರಾಟಗಾರರ ನೆಪದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ದೇಶದ ಹಿತಕ್ಕಾಗಿ ಕಾಂಗ್ರೆಸ್ ಪಕ್ಷದ ಕೊಡುಗೆ ಶೂನ್ಯ, ಸಂಕಲ್ಪ ಯಾತ್ರೆಯಲ್ಲಿ ದಲಿತರ ಕೇರಿಗಳಿಗೆ ಭೇಟಿ ನೀಡಿ, ಉಪಹಾರ ಸೇವಿಸಲಾಗುತ್ತದೆ ಎಂದರು.




Intro: ಗಾಂಧೀಜಿ ಕನಸಿಗಾಗಿ ಬಿ.ಜೆ.ಪಿ.ಸಂಕಲ್ಪ ಯಾತ್ರೆ: ವಿಜಯ ನಗರ
ಹೊಸಪೇಟೆ: ದೇಶದಲ್ಲಿ ಇನ್ನೂ ದಲಿತರು ದಲಿತರಾಗಿದ್ದಾರೆ. ಅವರ ಮನೆಗಳಿಗೆ ಬೇಟಿ ನೀಡಲಾಗುತ್ತದೆ. ಕಾಂಗ್ರೇಸ್ ಪಕ್ಷದವರು ಸ್ವಾತಂತ್ರ್ಯ ಹೋರಾಟಗಾರ ನೆಪದಲ್ಲಿ ರಾಜಕೀವನ್ನು ಮಾಡಿದ್ದಾರೆ. ಇನ್ನೂ ದೇಶವು ಯಾವುದೇ ರೀತಿಯಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಬಿ.ಜೆ.ಪಿ. ಪಕ್ಷದ ತಾಲ್ಲೂಕ ಮಂಡಳಿಯ ಅಧ್ಯಕ್ಷ ಅನಂತ ಪದ್ಮನಾಭ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.



Body: ನಗರದ ಬಿ.ಜೆ.ಪಿ ಪಕ್ಷದ ತಾಲೂಕ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅನಂತ ಪದ್ಮನಾಭ ಅವರು ಮಾತನಾಡಿದರು. ಕಾಂಗ್ರೇಸ್ ಪಕ್ಷವನ್ನು ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯಕ್ಕಾಗಿ ಪಕ್ಷವನ್ನು ಕಟ್ಟಿದ್ದರು. ಆದರೆ ಅವರ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ದೇಶದ ಹಿತಕ್ಕಾಗಿ ಕಾಂಗ್ರೆಸ್ ಪಕ್ಷವು ಶೂನ್ಯ ಕೊಡುಗೆಯನ್ನು ನೀಡಿದೆ ಎಂದರು.
ಬಿ.ಜೆ.ಪಿ. ತಾಲೂಕ ಮಂಡಳಿಯು ಶನಿವಾರ ಸಂಕಲ್ಪ ಯಾತ್ರೆಯನ್ನು ಮಾಡುತ್ತಿದೆ. ವಿಜಯ ನಗರ ಕಾಲೇಜನಿಂದ ಪ್ರಾರಂಭಿಸಿ ನಗರ ಸಭೆ, ವಾಲ್ಮೀಕಿ ವೃತ್ತ ಹಾಗೂ ಎ.ಸಿ ಕಛೇರಿಗೆ ಯಾತ್ರೆ ಕೊನೆಗೊಳ್ಳುತ್ತದೆ. ನಗರದ ದಲಿತರ ಕೇರಿಗಳಿಗೆ ಬೇಟಿ ನೀಡಿ, ಉಪಹಾರವನ್ನು ಮಾಡಲಾಗುತ್ತದೆ ಎಂದು ಹೇಳಿದರು.
ಶಿಸ್ತಿನ ಪಕ್ಷದ ಮುಖಂಡರು ಗಾಂಧಿಯವರ ಕನಸನ್ನು ನನಸು ಮಾಡುತ್ತಿದ್ದಾರೆ. ಆ ಸಮಯ ಏಳು ದಶಕದ ನಂತರ ಸಿಕ್ಕಿದೆ ಎಂದು ಹೇಳಿದರು. ಶನಿವಾರ ನಗದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಪಕ್ಷದ ಸದಸ್ಯರು ಈ ಕಾರ್ಯಕ್ರಮ ನಡೆಸಲಿದ್ದಾರೆ ಎಂದು ಮಾತನಾಡಿದರು.



Conclusion: KN_ HPT_2_ WALK IN B.J.P PRESS MEAT IN PHOTOS_ KA10028
ETV Bharat Logo

Copyright © 2024 Ushodaya Enterprises Pvt. Ltd., All Rights Reserved.