ETV Bharat / state

ಹೊಸಪೇಟೆ : ಆಟ ಆಡುವಾಗ ಹಾವು ಕಚ್ಚಿ ಬಾಲಕ ಸಾವು

author img

By

Published : Jul 12, 2021, 6:37 PM IST

ಆಟ ಆಡುವಾಗ ಹಾವು ಕಚ್ಚಿ ಬಾಲಕ ಸಾವು
ಆಟ ಆಡುವಾಗ ಹಾವು ಕಚ್ಚಿ ಬಾಲಕ ಸಾವು

ತಕ್ಷಣವೇ ಬಾಲಕನನ್ನ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ‌. ಈ ಕುರಿತು ಹಂಪಿ ಪ್ರವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಹೊಸಪೇಟೆ (ವಿಜಯನಗರ) : ಆಟವಾಡುತ್ತಿದ್ದ ವೇಳೆ 11 ವರ್ಷದ ಬಾಲಕನಿಗೆ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿರುವ ಘಟನೆ ತಾಲೂಕಿನ ಗಾಳೆಮ್ಮಗುಡಿಯಲ್ಲಿ ನಡೆದಿದೆ.

ಕೃಷ್ಣ(11) ಎಂಬಾತ ಮೃತಪಟ್ಟ ಬಾಲಕ. ಸ್ನೇಹಿತ ಮನೆ ಅಂಗಳದಲ್ಲಿ ಬಾಲಕ ಆಟ ಆಡುವಾಗ ಈ ದುರ್ಘಟನೆ ನಡೆದಿದೆ. ಮೊಣಕಾಲಿಗೆ ವಿಷ ಸರ್ಪವೊಂದು ಕಚ್ಚಿದ್ದು, ಈ ವಿಷಯವನ್ನು ಬಾಲಕ ತನ್ನ ತಂದೆ ಹತ್ತಿರ ಹೇಳಿದ್ದಾನೆ.

ತಕ್ಷಣವೇ ಬಾಲಕನನ್ನ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ‌. ಈ ಕುರಿತು ಹಂಪಿ ಪ್ರವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬಾಲಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕ್ರೂರಿ; ಪ್ರೇಮ ವೈಫಲ್ಯ ಕಾರಣವಾಯ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.