ETV Bharat / state

ಬಳ್ಳಾರಿಯಲ್ಲಿ ಕೊರೊನಾಗೆ ಬಲಿಯಾದ ವ್ಯಕ್ತಿ: ಮೃತನ ಮಗನಿಂದ ಮೆಡಿಕಲ್​ ವಿದ್ಯಾರ್ಥಿನಿ ಮೇಲೆ ಹಲ್ಲೆ!

author img

By

Published : May 23, 2021, 7:51 PM IST

assault-on-medical-student-in-ballary
ಕೊರೊನಾಗೆ ತಂದೆ ಸಾವನ್ನಪ್ಪಿದ್ದಾರೆಂದು ಮನನೊಂದ ಯುವಕ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಾನೆ

ಬಳ್ಳಾರಿ ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟ ಹಿನ್ನೆಲೆ ಅವರ ಮಗ ಮನನೊಂದು ಕರ್ತವ್ಯನಿರತ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ್ದಾನೆ.

ಬಳ್ಳಾರಿ: ಮಹಾಮಾರಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ತಂದೆ ಸಾವಿಗೀಡಾದ ಸುದ್ದಿ ಕೇಳಿದ ಮಗ ಕರ್ತವ್ಯನಿರತ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ.

ತಾಲೂಕಿನ ಸಂಗನಕಲ್ಲು ಗ್ರಾಮದ ಮಲ್ಲಿಕಾರ್ಜುನಗೌಡ ಎಂಬುವವರು ಕೊರೊನಾ ಸೋಂಕಿಗೆ ಒಳಗಾಗಿ ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡರಾತ್ರಿಯೇ ಅವರು ಸಾವೀಗಿಡಾಗಿದ್ದರು. ಇದರಿಂದ ಮನನೊಂದ ಮಗ ತಿಪ್ಪೇಸ್ವಾಮಿ ಕೋವಿಡ್ ಕೇರ್ ಸೆಂಟರ್ ಒಳಗಡೆ ಪ್ರವೇಶಿಸಿ ಕರ್ತವ್ಯನಿರತ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ್ದಾನೆ.

ಕೊರೊನಾಗೆ ತಂದೆ ಸಾವನ್ನಪ್ಪಿದ್ದಾರೆಂದು ಮನನೊಂದ ಯುವಕ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಾನೆ

ಆ ವಿದ್ಯಾರ್ಥಿನಿಗೆ ಕಪಾಳ ಮೋಕ್ಷ ಮಾಡುತ್ತಿದ್ದಂತೆಯೇ ಆಕೆ ದಾದಿಯರತ್ತ ಓಡಿ ಹೋಗುತ್ತಾಳೆ. ವಿದ್ಯಾರ್ಥಿನಿಯ ಹಿಂದೆಯೇ ತೆರಳಿದ ತಿಪ್ಪೇಸ್ವಾಮಿ ಬಾಗಿಲನ್ನ ಮುಚ್ಚಿ ಆಕೆ ಮೇಲೆ ತಳ್ಳಿರುವುದು ಸಿಸಿಟಿವಿ ಸೆರೆಯಾಗಿದೆ. ಈ‌ ಕುರಿತು ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ಹಾಸನದಲ್ಲಿ ಬರ್ಬರ ಕೊಲೆ: ರೌಡಿಶೀಟರ್​ ತಲೆ ಎರಡು ಹೋಳು ಮಾಡಿ ದುಷ್ಕರ್ಮಿಗಳು ಪರಾರಿ!

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.