ಬೆಳಗಾವಿ: ನಗರದ ಹುಕ್ಕೇರಿ ಮಠಕ್ಕೆ ಶ್ರೀಶೈಲ ಜಗದ್ಗುರುಗಳ ಭೇಟಿ ನೀಡಿದರು. ಶ್ರೀಗಳಿಗೆ ಹೂಗುಚ್ಚ ನೀಡಿ ಹುಕ್ಕೇರಿ ಮಠದ ಶಿವಾಚಾರ್ಯ ಸ್ವಾಮೀಜಿ ಸ್ವಾಗತ ಮಾಡಿಕೊಂಡರು. ಇದೆ ವೇಳೆ ಮಠಕ್ಕೆ ಆಗಮಿಸಿದ ಸಂಸದ ಸುರೇಶ ಅಂಗಡಿ ಅವರು ಶ್ರೀಶೈಲ ಜಗದ್ಗುರುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ನಂತರ ಮಾತನಾಡಿದ ಸುರೇಶ ಅಂಗಡಿ, ಶ್ರೀಶೈಲ ಜಗದ್ಗುರುಗಳು ಇಂದು ಸಿಕ್ಕಿದ್ದು ನನ್ನ ಸುದೈವ. ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ನಾಲ್ಕನೇ ಸಲ ನಾನೂ ಗೆಲ್ತಿನಿ, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ. ನಾಮಪತ್ರ ಸಲ್ಲಿಕೆ ಸಮಯದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ನಾಯಕರು ಆಗಮಿಸಲಿದ್ದಾರೆ ಎಂದರು.