ETV Bharat / state

ಯಾರೇ ಅರ್ಜಿ ಸಲ್ಲಿಸಲಿ, ಗೋಕಾಕ್​ ಟಿಕೆಟ್​ ಲಖನ್​ಗೆ ಫಿಕ್ಸ್​: ಸತೀಶ್​ ಜಾರಕಿಹೊಳಿ

author img

By

Published : Nov 8, 2019, 4:19 PM IST

ಸತೀಶ್​ ಜಾರಕಿಹೊಳಿ

ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಲಖನ್​ಗೆ ಟಿಕೆಟ್ ನೀಡಿದ್ರೆ ಪಕ್ಷಕ್ಕೆ ಆಗುವ ಲಾಭದ ಕುರಿತು ಹೈಕಮಾಂಡ್​ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಶಾಸಕ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಕಾಂಗ್ರೆಸ್ ‌ಅಭ್ಯರ್ಥಿ ಅಗಿ ಕಣಕ್ಕಿಳಿಯಲಿದ್ದಾರೆ. ಅವರಿಗೇನೇ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂದು ಮಾಜಿ ಸಚಿವ ಸತೀಶ್​ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‌ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ್​ ಕ್ಷೇತ್ರದಲ್ಲಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲವಿಲ್ಲ. ಲಖನ್​ಗೆ ಟಿಕೆಟ್ ನೀಡಿದ್ರೆ ಪಕ್ಷಕ್ಕೆ ಆಗುವ ಲಾಭದ ಕುರಿತು ಹೈಕಮಾಂಡ್​ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಮೊದಲ ಪಟ್ಟಿಯಲ್ಲಿ ಗೋಕಾಕ್​ ಅಭ್ಯರ್ಥಿ ಘೋಷಿಸದೇ ಇರಬಹುದು. ಆದರೆ, ಲಖನ್​ಗೆ ಗೋಕಾಕ್​ ಟಿಕೆಟ್ ಪಕ್ಕಾ ಸಿಗಲಿದೆ. ಬೇರೆಯವರು ಅರ್ಜಿ ಸಲ್ಲಿಸಿದ್ದಾರೆ ಎಂದ ಮಾತ್ರಕ್ಕೆ ಟಿಕೆಟ್ ನೀಡಬೇಕೆಂದೇನಿಲ್ಲ ಎಂದರು.

ಚುನಾವಣೆ ನಡೆಸುವುದು ಪ್ರಸ್ತುತ ದಿನದಲ್ಲಿ ಸುಲಭದ ಮಾತಲ್ಲ. ಕಳೆದ ಮೂರು ತಿಂಗಳಿನಿಂದ ಕ್ಷೇತ್ರದಲ್ಲಿ ಸಂಚರಿಸಿ ಪಕ್ಷ ಸಂಘಟಿಸಲಾಗುತ್ತಿದೆ ಎಂದ ಅವರು, ಜಿಲ್ಲಾ ಪಂಚಾಯತ್​ನಲ್ಲಿ ಆಡಳಿತಾತ್ಮಕವಾಗಿ ದೊಡ್ಡಮಟ್ಟದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ನಮ್ಮ ಸಂಖ್ಯೆ ಹೆಚ್ಚಿದೆ ಎಂದು ಜನರ ಗಮನ ಸೆಳೆಯಲು ರಮೇಶ್​ ಈ ತಂತ್ರ ಪ್ರಯೋಗಿಸುತ್ತಿದ್ದಾರೆ. ಇದರಿಂದ ಜಿಲ್ಲೆಯ ಮೂರು ಕ್ಷೇತ್ರಗಳ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ರಮೇಶ್ ​ಜಾರಕಿಹೊಳಿ ನಡೆಯನ್ನು ಸತೀಶ್​ ಖಂಡಿಸಿದರು.

ಗೋಕಾಕ್​ ಕ್ಷೇತ್ರದ ಮತ್ತೊಂದು ಭ್ರಷ್ಟಾಚಾರದ ಕುರಿತಾದ ಹಾಡನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಅಂಕಲಗಿ ಗ್ರಾಮದ ಶೌಚಗೃಹ ನಿರ್ಮಾಣದಲ್ಲಿ ಆದ ಭ್ರಷ್ಟಾಚಾರ ಕುರಿತ ಹಾಡು ಇದಾಗಿದೆ ಎಂದು ಸತೀಶ್​ ಮಾಹಿತಿ ನೀಡಿದ್ರು.

Intro:ಯಾರೇ ಅರ್ಜಿ ಸಲ್ಲಿಸಲಿ, ಆದ್ರೆ ಗೋಕಾಕ ಟಿಕೆಕ್ ನನ್ತಮ್ಮನಿಗೆ ಗೋಕಾಕ; ಸತೀಶ ಜಾರಕಿಹೊಳಿ

ಬೆಳಗಾವಿ:
ಗೋಕಾಕ ಕ್ಷೇತ್ರದ ಉಪಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಕಾಂಗ್ರೆಸ್ ‌ಅಭ್ಯರ್ಥಿ ಅಗಲಿದ್ದಾರೆ. ಅವರಿಗೆನೇ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ಲಖನ್ ಗೆ ಟಿಕೆಟ್ ನೀಡಿದ್ರೆ ಪಕ್ಷಕ್ಕೆ ಆಗುವ ಲಾಭದ ಕುರಿತು ಹೈಕಮಾಂಡ್ ಗೆ ಮನವರಿಕೆ ಮಾಡಿದ್ದೇನೆ. ಮೊದಲ ಪಟ್ಟಿಯಲ್ಲಿ ಗೋಕಾಕ ಅಭ್ಯರ್ಥಿ ಘೋಷಿಸದೇ ಇರಬಹುದು. ಆದರೆ ಲಖನ್ ಗೆ ಗೋಕಾಕ ಟಿಕೆಟ್ ಸಿಗಲಿದೆ. ಬೇರೆಯವರು ಅರ್ಜಿ ಸಲ್ಲಿಸಿದ್ದಾರೆ ಎಂದ ಮಾತ್ರಕ್ಕೆ ಟಿಕೆಟ್ ನೀಡಬೇಕೆಂದೆನಿಲ್ಲ. ಚುನಾವಣೆ ಮಾಡುವುದು ಇವತ್ತಿನ ದಿನದಲ್ಲಿ ಸುಲಭ ಇಲ್ಲ. ಕಳೆದ ಮೂರು ತಿಂಗಳಿನಿಂದ ಕ್ಷೇತ್ರದಲ್ಲಿ ಓಡಾದಿ ಪಕ್ಷ ಸಂಘಟಿಸಲಾಗುತ್ತಿದೆ ಎಂದರು.
ರಮೇಶ ಬೆಂಬಲಿತ ಜಿಪಂ‌ ಸದಸ್ಯರ ರಾಜೀನಾಮೆ ವಿಚಾರವಾಗಿ ಸತೀಶ ಅನರ್ಹ ಶಾಸಕ ರಮೇಶಗೆ ತಿರುಗೇಟು ನೀಡಿದರು.
ಜಿಲ್ಲಾ ಪಂಚಾಯಿತಿಗಳು ಆಡಳಿತಾತ್ಮಕವಾಗಿ ದೊಡ್ಡಮಟ್ಟದ ನಿರ್ಧಾರ ತೆಗೆದುಕೊಳ್ಳುವ ಬಾಡಿ ಏನಲ್ಲ. ನಮ್ಮ ಸಂಖ್ಯೆ ಹೆಚ್ಚಿದೆ ಎಂದು ಜನರ ಗಮನ ಸೆಳೆಯಲು ರಮೇಶ ಈ ತಂತ್ರ ಪ್ರಯೋಗಿಸುತ್ತಿದ್ದಾರೆ. ಇದರಿಂದ ಜಿಲ್ಲೆಯ ಮೂರು ಕ್ಷೇತ್ರಗಳ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಗೋಕಾಕ ಕ್ಷೇತ್ರದಲ್ಲಿ ನಡೆದ ಅವ್ಯವಹಾರ ಕುರಿತಾದ ವರದಿಯನ್ನು ಬೆಳಗಾವಿ ಜಿಪಂ ಸಿಇಒಗೆ ರವಾನಿಸಲಾಗಿದೆ. ಈ ಕುರಿತು ಜಿಪಂ ಸಿಇಒ ನೇತೃತ್ವದಲ್ಲಿ ತನಿಖೆ ಆಗಲಿದೆ..
ಗೋಕಾಕ ಕ್ಷೇತ್ರದ ಮತ್ತೊಂದು ಭ್ರಷ್ಟಾಚಾರದ ಕುರಿತಾದ ಹಾಡು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಅಂಕಲಗಿ ಗ್ರಾಮದ ಶೌಚಗೃಹ ನಿರ್ಮಾಣದಲ್ಲಿ ಆದ ಭ್ರಷ್ಟಾಚಾರ ಕುರಿತು ವಿಡಿಯೋ ಇದಾಗಿದೆ.
ಗ್ರಾಮದಿಂದ ೧ ಕಿಮೀ ದೂರದಲ್ಲಿ ಶೌಚಗೃಹ ನಿರ್ಮಿಸಲಾಗಿದೆ. ಸಾರ್ವಜನಿಕರಿಗೆ ಹಸ್ತಾಂತರ ಮಾಡುವ ಮೊದಲೇ ಕೆಲವು ಹಾಳಾಗಿವೆ. ಈ ಅವ್ಯವಹಾರ ಕುರಿತು ವಿಡಿಯೋ ರಿಲೀಸ್ ಆಗಲಿದೆ ಎಂದರು.
--
KN_BGM_03_8_Gokak_Bypoll_Satish_reaction_7201786Body:ಯಾರೇ ಅರ್ಜಿ ಸಲ್ಲಿಸಲಿ, ಆದ್ರೆ ಗೋಕಾಕ ಟಿಕೆಕ್ ನನ್ತಮ್ಮನಿಗೆ ಗೋಕಾಕ; ಸತೀಶ ಜಾರಕಿಹೊಳಿ

ಬೆಳಗಾವಿ:
ಗೋಕಾಕ ಕ್ಷೇತ್ರದ ಉಪಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಕಾಂಗ್ರೆಸ್ ‌ಅಭ್ಯರ್ಥಿ ಅಗಲಿದ್ದಾರೆ. ಅವರಿಗೆನೇ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ಲಖನ್ ಗೆ ಟಿಕೆಟ್ ನೀಡಿದ್ರೆ ಪಕ್ಷಕ್ಕೆ ಆಗುವ ಲಾಭದ ಕುರಿತು ಹೈಕಮಾಂಡ್ ಗೆ ಮನವರಿಕೆ ಮಾಡಿದ್ದೇನೆ. ಮೊದಲ ಪಟ್ಟಿಯಲ್ಲಿ ಗೋಕಾಕ ಅಭ್ಯರ್ಥಿ ಘೋಷಿಸದೇ ಇರಬಹುದು. ಆದರೆ ಲಖನ್ ಗೆ ಗೋಕಾಕ ಟಿಕೆಟ್ ಸಿಗಲಿದೆ. ಬೇರೆಯವರು ಅರ್ಜಿ ಸಲ್ಲಿಸಿದ್ದಾರೆ ಎಂದ ಮಾತ್ರಕ್ಕೆ ಟಿಕೆಟ್ ನೀಡಬೇಕೆಂದೆನಿಲ್ಲ. ಚುನಾವಣೆ ಮಾಡುವುದು ಇವತ್ತಿನ ದಿನದಲ್ಲಿ ಸುಲಭ ಇಲ್ಲ. ಕಳೆದ ಮೂರು ತಿಂಗಳಿನಿಂದ ಕ್ಷೇತ್ರದಲ್ಲಿ ಓಡಾದಿ ಪಕ್ಷ ಸಂಘಟಿಸಲಾಗುತ್ತಿದೆ ಎಂದರು.
ರಮೇಶ ಬೆಂಬಲಿತ ಜಿಪಂ‌ ಸದಸ್ಯರ ರಾಜೀನಾಮೆ ವಿಚಾರವಾಗಿ ಸತೀಶ ಅನರ್ಹ ಶಾಸಕ ರಮೇಶಗೆ ತಿರುಗೇಟು ನೀಡಿದರು.
ಜಿಲ್ಲಾ ಪಂಚಾಯಿತಿಗಳು ಆಡಳಿತಾತ್ಮಕವಾಗಿ ದೊಡ್ಡಮಟ್ಟದ ನಿರ್ಧಾರ ತೆಗೆದುಕೊಳ್ಳುವ ಬಾಡಿ ಏನಲ್ಲ. ನಮ್ಮ ಸಂಖ್ಯೆ ಹೆಚ್ಚಿದೆ ಎಂದು ಜನರ ಗಮನ ಸೆಳೆಯಲು ರಮೇಶ ಈ ತಂತ್ರ ಪ್ರಯೋಗಿಸುತ್ತಿದ್ದಾರೆ. ಇದರಿಂದ ಜಿಲ್ಲೆಯ ಮೂರು ಕ್ಷೇತ್ರಗಳ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಗೋಕಾಕ ಕ್ಷೇತ್ರದಲ್ಲಿ ನಡೆದ ಅವ್ಯವಹಾರ ಕುರಿತಾದ ವರದಿಯನ್ನು ಬೆಳಗಾವಿ ಜಿಪಂ ಸಿಇಒಗೆ ರವಾನಿಸಲಾಗಿದೆ. ಈ ಕುರಿತು ಜಿಪಂ ಸಿಇಒ ನೇತೃತ್ವದಲ್ಲಿ ತನಿಖೆ ಆಗಲಿದೆ..
ಗೋಕಾಕ ಕ್ಷೇತ್ರದ ಮತ್ತೊಂದು ಭ್ರಷ್ಟಾಚಾರದ ಕುರಿತಾದ ಹಾಡು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಅಂಕಲಗಿ ಗ್ರಾಮದ ಶೌಚಗೃಹ ನಿರ್ಮಾಣದಲ್ಲಿ ಆದ ಭ್ರಷ್ಟಾಚಾರ ಕುರಿತು ವಿಡಿಯೋ ಇದಾಗಿದೆ.
ಗ್ರಾಮದಿಂದ ೧ ಕಿಮೀ ದೂರದಲ್ಲಿ ಶೌಚಗೃಹ ನಿರ್ಮಿಸಲಾಗಿದೆ. ಸಾರ್ವಜನಿಕರಿಗೆ ಹಸ್ತಾಂತರ ಮಾಡುವ ಮೊದಲೇ ಕೆಲವು ಹಾಳಾಗಿವೆ. ಈ ಅವ್ಯವಹಾರ ಕುರಿತು ವಿಡಿಯೋ ರಿಲೀಸ್ ಆಗಲಿದೆ ಎಂದರು.
--
KN_BGM_03_8_Gokak_Bypoll_Satish_reaction_7201786Conclusion:ಯಾರೇ ಅರ್ಜಿ ಸಲ್ಲಿಸಲಿ, ಆದ್ರೆ ಗೋಕಾಕ ಟಿಕೆಕ್ ನನ್ತಮ್ಮನಿಗೆ ಗೋಕಾಕ; ಸತೀಶ ಜಾರಕಿಹೊಳಿ

ಬೆಳಗಾವಿ:
ಗೋಕಾಕ ಕ್ಷೇತ್ರದ ಉಪಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಕಾಂಗ್ರೆಸ್ ‌ಅಭ್ಯರ್ಥಿ ಅಗಲಿದ್ದಾರೆ. ಅವರಿಗೆನೇ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ಲಖನ್ ಗೆ ಟಿಕೆಟ್ ನೀಡಿದ್ರೆ ಪಕ್ಷಕ್ಕೆ ಆಗುವ ಲಾಭದ ಕುರಿತು ಹೈಕಮಾಂಡ್ ಗೆ ಮನವರಿಕೆ ಮಾಡಿದ್ದೇನೆ. ಮೊದಲ ಪಟ್ಟಿಯಲ್ಲಿ ಗೋಕಾಕ ಅಭ್ಯರ್ಥಿ ಘೋಷಿಸದೇ ಇರಬಹುದು. ಆದರೆ ಲಖನ್ ಗೆ ಗೋಕಾಕ ಟಿಕೆಟ್ ಸಿಗಲಿದೆ. ಬೇರೆಯವರು ಅರ್ಜಿ ಸಲ್ಲಿಸಿದ್ದಾರೆ ಎಂದ ಮಾತ್ರಕ್ಕೆ ಟಿಕೆಟ್ ನೀಡಬೇಕೆಂದೆನಿಲ್ಲ. ಚುನಾವಣೆ ಮಾಡುವುದು ಇವತ್ತಿನ ದಿನದಲ್ಲಿ ಸುಲಭ ಇಲ್ಲ. ಕಳೆದ ಮೂರು ತಿಂಗಳಿನಿಂದ ಕ್ಷೇತ್ರದಲ್ಲಿ ಓಡಾದಿ ಪಕ್ಷ ಸಂಘಟಿಸಲಾಗುತ್ತಿದೆ ಎಂದರು.
ರಮೇಶ ಬೆಂಬಲಿತ ಜಿಪಂ‌ ಸದಸ್ಯರ ರಾಜೀನಾಮೆ ವಿಚಾರವಾಗಿ ಸತೀಶ ಅನರ್ಹ ಶಾಸಕ ರಮೇಶಗೆ ತಿರುಗೇಟು ನೀಡಿದರು.
ಜಿಲ್ಲಾ ಪಂಚಾಯಿತಿಗಳು ಆಡಳಿತಾತ್ಮಕವಾಗಿ ದೊಡ್ಡಮಟ್ಟದ ನಿರ್ಧಾರ ತೆಗೆದುಕೊಳ್ಳುವ ಬಾಡಿ ಏನಲ್ಲ. ನಮ್ಮ ಸಂಖ್ಯೆ ಹೆಚ್ಚಿದೆ ಎಂದು ಜನರ ಗಮನ ಸೆಳೆಯಲು ರಮೇಶ ಈ ತಂತ್ರ ಪ್ರಯೋಗಿಸುತ್ತಿದ್ದಾರೆ. ಇದರಿಂದ ಜಿಲ್ಲೆಯ ಮೂರು ಕ್ಷೇತ್ರಗಳ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಗೋಕಾಕ ಕ್ಷೇತ್ರದಲ್ಲಿ ನಡೆದ ಅವ್ಯವಹಾರ ಕುರಿತಾದ ವರದಿಯನ್ನು ಬೆಳಗಾವಿ ಜಿಪಂ ಸಿಇಒಗೆ ರವಾನಿಸಲಾಗಿದೆ. ಈ ಕುರಿತು ಜಿಪಂ ಸಿಇಒ ನೇತೃತ್ವದಲ್ಲಿ ತನಿಖೆ ಆಗಲಿದೆ..
ಗೋಕಾಕ ಕ್ಷೇತ್ರದ ಮತ್ತೊಂದು ಭ್ರಷ್ಟಾಚಾರದ ಕುರಿತಾದ ಹಾಡು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಅಂಕಲಗಿ ಗ್ರಾಮದ ಶೌಚಗೃಹ ನಿರ್ಮಾಣದಲ್ಲಿ ಆದ ಭ್ರಷ್ಟಾಚಾರ ಕುರಿತು ವಿಡಿಯೋ ಇದಾಗಿದೆ.
ಗ್ರಾಮದಿಂದ ೧ ಕಿಮೀ ದೂರದಲ್ಲಿ ಶೌಚಗೃಹ ನಿರ್ಮಿಸಲಾಗಿದೆ. ಸಾರ್ವಜನಿಕರಿಗೆ ಹಸ್ತಾಂತರ ಮಾಡುವ ಮೊದಲೇ ಕೆಲವು ಹಾಳಾಗಿವೆ. ಈ ಅವ್ಯವಹಾರ ಕುರಿತು ವಿಡಿಯೋ ರಿಲೀಸ್ ಆಗಲಿದೆ ಎಂದರು.
--
KN_BGM_03_8_Gokak_Bypoll_Satish_reaction_7201786
ETV Bharat Logo

Copyright © 2024 Ushodaya Enterprises Pvt. Ltd., All Rights Reserved.