ETV Bharat / state

ಮಳೆ ಬಾರದಿದ್ದರೂ ಉಕ್ಕಿ ಹರಿದ ಹಳ್ಳ: ಸೇತುವೆ ಜಲಾವೃತಕ್ಕೆ ಸಂಪರ್ಕ ಕಡಿತ

author img

By

Published : May 15, 2020, 9:34 PM IST

Rain water over flowed to agricultural land in Belagavi
ಮಳೆ ಬಾರದಿದ್ದರೂ ಉಕ್ಕಿ ಹರಿದ ಹಳ್ಳ: ನೂರಾರು ಕೃಷಿ ಭೂಮಿ ಜಲಾವೃತ

ಕರಡಿಗುದ್ದಿ, ಹಣ್ಣಿಕೇರಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಭಾರಿ ಮಳೆ ಆಗಿದೆ. ಗುಡ್ಡದ ಪ್ರದೇಶದಲ್ಲಿ ಮಳೆ ಸುರಿದಿದ್ದರಿಂದ ಕೆಳ ಭಾಗದಲ್ಲಿನ ಹಳ್ಳಗಳು ತುಂಬಿ ಹರಿಯುತ್ತಿವೆ.

ಬೆಳಗಾವಿ: ಏಕಾಏಕಿ ಸುರಿದ ಮಳೆ‌ಗೆ ಸುಳೇಭಾವಿಗೆ ಸಂಪರ್ಕ ಒದಗಿಸುವ ಮೋದಗಾ ಗ್ರಾಮ ಸೇತುವೆ ಜಲಾವೃತಗೊಂಡಿದ್ದು, ಎರಡೂ ಗ್ರಾಮಗಳ ಸಂಪರ್ಕ ಸ್ಥಗಿತಗೊಂಡಿದೆ.

ತಾಲೂಕಿನ ಕರಡಿಗುದ್ದಿ, ಮಾರೀಹಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಿದ ಧಾರಾಕಾರ ಮಳೆಗೆ ಮೋದಗಾ ಸೇತುವೆ ಜಲಾವೃತಗೊಂಡಿದೆ. ಸುಳೇಭಾವಿ ಹಾಗೂ ಮೋದಗಾ ಗ್ರಾಮಗಳನ್ನು ಸಂಪರ್ಕಿಸುವ ಮಾರ್ಗದಲ್ಲಿ ಮಳೆ ಆಗದಿದ್ದರೂ ಸೇತುವೆಗಳು ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.

ಕರಡಿಗುದ್ದಿ, ಹಣ್ಣಿಕೇರಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಭಾರಿ ಮಳೆ ಆಗಿದೆ. ಗುಡ್ಡದ ಪ್ರದೇಶದಲ್ಲಿ ಮಳೆ ಸುರಿದಿದ್ದರಿಂದ ಕೆಳ ಭಾಗದಲ್ಲಿನ ಹಳ್ಳಗಳು ತುಂಬಿ ಹರಿಯುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.