ETV Bharat / state

ಡಿಸಿಎಂ ಸವದಿ ಭಾಷಣ ವೇಳೆ ಕಣ್ಣಾಮುಚ್ಚಾಲೆಯಾಡಿದ ಕರೆಂಟ್​​

author img

By

Published : Oct 20, 2019, 3:36 AM IST

ಉದ್ಘಾಟನಾ ಕಾರ್ಯಕ್ರಮದಲ್ಲಿ ಕೈ ಕೊಟ್ಟ ಕರೆಂಟ್​​

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ಅಥಣಿ ನೂತನ ಬಸ್ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಭಾಷಣದ ವೇಳೆ ವಿದ್ಯುತ್​ ಸ್ಥಗಿತಗೊಂಡಿದ್ದು, ಸಭಿಕರು ಕೆಲ ಕಾಲ ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿತ್ತು.

ಅಥಣಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ಅಥಣಿ ನೂತನ ಬಸ್ ನಿಲ್ದಾಣ ಉದ್ಘಾಟನ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಭಾಷಣ ಮಾಡುತ್ತಿರುವ ವೇಳೆ ವಿದ್ಯುತ್​​​ ಸಂಪರ್ಕ ಕಡಿತಗೊಂಡಿದ್ದು, ಆಯೋಜಕರು ಮುಜುಗರಕ್ಕೊಳಗಾಗುವ ಪ್ರಸಂಗ ಎದುರಾಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಕೈ ಕೊಟ್ಟ ಕರೆಂಟ್​​

ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಡಿಸಿಎಂ, ಸಭೆಯನ್ನುದ್ದೇಶಿಸಿ ಮಾತನಾಡುವ ಸಂದರ್ಭ ವಿದ್ಯುತ್ ಸಂಪರ್ಕ ಕಟ್ಟಾದ್ದರಿಂದ ಕೆಲಹೊತ್ತು ಸಭೆಯಲ್ಲಿ ಕತ್ತಲೆ ವಾತಾವರಣ ಸೃಷ್ಟಿಯಾಗಿತ್ತು. ಕಾರ್ಯಕ್ರಮದ ಆಯೋಜಕರು ಇದರಿಂದ ಮುಜುಗರಕ್ಕೊಳಗಾಗಿದ್ದು, ಏನು ಮಾಡಬೇಕೆಂದು ತೋಚದೆ ಕೊನೆಗೂ ಜನರೇಟರ್ ಮೊರೆ ಹೋಗಿದ್ದು, ಕೃತಕ ಬೆಳಕಿನ ಸಹಾಯದಿಂದ ಡಿಸಿಎಂ ಸವದಿ ತಮ್ಮ ಭಾಷಣ ಮುಂದುವರೆಸಿದರು.

Intro:ಡಿಸಿಎಂ ಲಕ್ಷ್ಮಣ್ ಸವದಿ ಕಾರ್ಯಕ್ರಮದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆBody:ಅಥಣಿ:

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗ ಅಥಣಿ ನೂತನ ಬಸ್ ನಿಲ್ದಾಣ ಉದ್ಘಾಟನೆ ಹಾಗೂ ಚಾಲಕರಿಗೆ ಬೆಳ್ಳಿ ಪದಕ ವಿತರಣಾ ಸಮಾರಂಭಕ್ಕೆ ಉದ್ಘಾಟನೆ ಮಾಡಿರುವ ಲಕ್ಷ್ಮಣ್ ಸವದಿ.

ಉದ್ಘಾಟನೆ ಮಾಡಿದ ನಂತರ ಸಮಾರಂಭ ಸಭೆಯಲ್ಲಿ ಜ್ಯೋತಿ ಬೆಳಗಿಸುವ ಮುಖಾಂತರ ಸಭೆಗೆ ಚಾಲನೆ ನೀಡಿದರು ತದನಂತರ ಉಪಮುಖ್ಯಮಂತ್ರಿಗಳಿಗೆ ಮಾತನಾಡುವ ಸಮಯದಲ್ಲಿ ವಿದ್ಯುತ್ ಸಂಪರ್ಕ ಕಟ್ಟಾದ ಪ್ರಸಂಗ ನಡೆಯಿತು ಕೆಲವೊತ್ತು ಸಭೆಯಲ್ಲಿ ಕತ್ತಲೆ ವಾತಾವರಣ ಸೃಷ್ಟಿಯಾಗಿತ್ತು ಕಾರ್ಯಕ್ರಮ ಆಯೋಜಿಸಿದ ಆಯೋಜಕರು ಏನು ಮಾಡಬೇಕು ಎಂಬುದು ತೋಚದೆ ಉತ್ಪಾದನಾ ವಿದ್ಯುತ್ ಯಂತ್ರದ (ಜನರೇಟರ್) ಮೋರೆ ಹೋದರು....
ನಂತರ ಡಿಸಿಎಂ ಭಾಷಣ ಮಾಡಿದರು...Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.