ETV Bharat / state

ಲಾಕ್​ಡೌನ್​ ಮೀರಿಯೂ ಈಜಲು ಹೋದ ಯುವಕ ಬಾವಿಯಲ್ಲಿನ ಕಲ್ಲು ತಾಗಿ ಸಾವು

author img

By

Published : Mar 29, 2020, 7:51 PM IST

Updated : Mar 29, 2020, 8:26 PM IST

ಬಾವಿಗೆ ಬಿದ್ದು ಯುವಕ ಸಾವು,boy dies while swimming
ಲಾಕ್​ಡಾನ್​ ನಡುವೆಯೇ ಈಜಲು ಹೋದ ಯುವಕ ಆಯತಪ್ಪಿ ನೀರಲ್ಲಿ ಬಿದ್ದು ಸಾವು

ಲಾಕ್​ಡೌನ್​ ಆದೇಶವನ್ನೂ ಉಲ್ಲಂಘಿಸಿ ಈಜಲು ಹೋದ ಯುವಕನೊಬ್ಬ ಸಾವಿಗೀಡಾಗಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬಾಬಾಪೂರ ಗ್ರಾಮದಲ್ಲಿ ನಡೆದಿದೆ.

ಚಿಕ್ಕೋಡಿ: ಲಾಕ್​ಡೌನ್​ ನಡುವೆಯೂ ಬಾವಿಗೆ ಈಜಲು ಹೋದ ಬಾಲಕ ನೀರುಪಾಲದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಜಾಬಾಪೂರ ಗ್ರಾಮದಲ್ಲಿ ನಡೆದಿದೆ.

ಲಾಕ್​ಡಾನ್​ ನಡುವೆಯೇ ಈಜಲು ಹೋದ ಯುವಕ ಆಯತಪ್ಪಿ ನೀರಲ್ಲಿ ಬಿದ್ದು ಸಾವು

ತಾಲೂಕಿನ ಜಾಬಾಪೂರ ಗ್ರಾಮದ ಕಾರ್ತಿಕ ಆನಂದ ಘಸ್ತಿ(15) ಎಂಬ ಬಾಲಕ ಲಾಕ್​ಡೌನ್​ ಇದ್ದರೂ ಸಹ ಸಮೀಪದ ಬಾವಿಗೆ ಈಜಲು ಹೋಗಿ ಮೇಲಿನಿಂದ ಜಿಗಿಯುವಾಗ ಆಯತಪ್ಪಿ ಬಿದ್ದು ಕಲ್ಲು ತಾಗಿ ಸಾವನ್ನಪ್ಪಿದ್ದಾನೆ.

ಇನ್ನೂ ಸ್ಥಳಕ್ಕೆ ಹುಕ್ಕೇರಿ ಪಿಎಸ್ಐ ಶಿವಾನಂದ ಗುಡಗನಟ್ಟಿ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated :Mar 29, 2020, 8:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.