ETV Bharat / state

ಗುಡಿಸಲಿಗೆ ಬೆಂಕಿ ಬಿದ್ದು ಅಪಾರ ನಷ್ಟ: ರೈತ ಕುಟುಂಬ ಕಂಗಾಲು

author img

By

Published : Apr 7, 2021, 9:03 AM IST

athani
ಗುಡಿಸಲಿಗೆ ಬೆಂಕಿ ಬಿದ್ದು ಗುಡಿಸಲಿಗೆ ಬೆಂಕಿ ಬಿದ್ದು

ಅಥಣಿಯ ಭಾವನದಡ್ಡಿ ಗ್ರಾಮದಲ್ಲಿ ಗುಡಿಸಲಿಗೆ ಬೆಂಕಿ ತಗುಲಿದ್ದು ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಗೃಹ ಬಳಕೆ ವಸ್ತುಗಳು ಹಾಗೂ ಹತ್ತು ಗ್ರಾಂ ಚಿನ್ನ, ದವಸ ಧಾನ್ಯಗಳು ಹಾಗು ಬಟ್ಟೆ ಪಾತ್ರೆಗಳು ಬೆಂಕಿಗೆ ಆಹುತಿಯಾಗಿದೆ.

ಅಥಣಿ: ತಾಲೂಕಿನ ಭಾವನದಡ್ಡಿ ಗ್ರಾಮದಲ್ಲಿ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ತಗುಲಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ.

ಪಾಂಡುರಂಗ ವಿಟೂಬಾ ವಾಲಿಕಾರ್ ಎಂಬವರ ಗುಡಿಸಿಲಿಗೆ ಬೆಂಕಿ ತಗುಲಿ, ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಗೃಹ ಬಳಕೆ ವಸ್ತುಗಳು ಹಾಗೂ ಹತ್ತು ಗ್ರಾಂ ಚಿನ್ನ, ದವಸ ಧಾನ್ಯಗಳು, ಬಟ್ಟೆ ಪಾತ್ರೆಗಳು ಬೆಂಕಿಗೆ ಆಹುತಿಯಾಗಿದೆ. ಘಟನೆಯಿಂದ ಕುಟುಂಬ ಸಂಕಷ್ಟದಲ್ಲಿದೆ.

ಗುಡಿಸಲಿಗೆ ಬೆಂಕಿ ಬಿದ್ದು ಗುಡಿಸಲಿಗೆ ಬೆಂಕಿ ಬಿದ್ದು

ಮಕ್ಕಳ ಪುಸ್ತಕ ಹಾಗೂ ಶಾಲಾ ದಾಖಲಾತಿ, ಇತ್ತೀಚೆಗೆಯಷ್ಟೇ ಕುರಿಗಳನ್ನು ಮಾರಾಟ ಮಾಡಿ ತಂದ 60 ಸಾವಿರ ರೂಪಾಯಿಯನ್ನು ಮನೆಯಲ್ಲಿ ಇಟ್ಟಿದ್ದರು. ಅದೂ ಕೂಡ ಸುಟ್ಟು ಹೋಗಿದೆಯೆಂದು ಸಂತ್ರಸ್ತ ಕುಟುಂಬ ಸದಸ್ಯರು ದುಃಖ ವ್ಯಕ್ತಪಡಿಸಿದರು. ಇದೇ ವೇಳೆ, ನಮಗೆ ಸರ್ಕಾರ ಸಹಾಯ ಮಾಡಬೇಕು ಎಂದು ಮಾಧ್ಯಮದ ಮುಖಾಂತರ ಮನವಿ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.