ETV Bharat / state

ಅಥಣಿಯಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ:ಲಕ್ಷ್ಮಣ ಸವದಿ

author img

By

Published : Mar 18, 2023, 7:19 AM IST

MLC  Laxman Savadi
ಎಂಎಲ್‌ಸಿ ಲಕ್ಷ್ಮಣ ಸವದಿ

ನೂರಕ್ಕೆ ನೂರರಷ್ಟು ಪಕ್ಷ ನನ್ನ ಕೈ ಬಿಡುವುದಿಲ್ಲ - ನಾನು ಅಥಣಿಯಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಎಂಎಲ್‌ಸಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಎಂಎಲ್‌ಸಿ ಲಕ್ಷ್ಮಣ ಸವದಿ

ಚಿಕ್ಕೋಡಿ(ಬೆಳಗಾವಿ): ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದೆ. ಇದರಿಂದ ನಾನು ಮಾ.27ರಂದು ಒಂದು ತೀರ್ಮಾನಕ್ಕೆ ಬರುತ್ತಿದ್ದೇನೆ. ನೀವು ಯಾವತ್ತೂ ನನ್ನ ಬೆಂಬಲವಾಗಿ ನಿಲ್ಲಿ ಎಂದು ಮುಸ್ಲಿಂ ಸಮುದಾಯಕ್ಕೆ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮನವಿ ಮಾಡಿದರು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನೂರಾಲ್ ಸಮುದಾಯದ ಭವನದಲ್ಲಿ ಮುಸ್ಲಿಂ ಮುಖಂಡರ ಸಭೆ ಕರೆದು ಅವರು ಮಾತನಾಡಿದರು.

"ನಾನು ಮನೆಯಲ್ಲಿ ಸುಮನ್ನೆ ಕುಳಿತಿದ್ದೆ. ಆದರೆ, ಕೆಲವರು ನನ್ನನ್ನು ಕೂರಲು ಬಿಡುತ್ತಿಲ್ಲ. ಹಾಗಾಗಿ ನಾನು ನಿಮ್ಮ ಮುಂದೆ ಬಂದಿದ್ದೇನೆ. ನಿಮ್ಮ ಅಭಿಪ್ರಾಯ ನನಗೆ ಮುಖ್ಯ. ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಬರುವ 27ರ ಒಳಗಾಗಿ ತಾಲೂಕಿನ ಎಲ್ಲ ಸಮುದಾಯದ ಮುಖಂಡರ ಸಭೆ ಕರೆಯುತ್ತೇನೆ. ಅವರು ಅಥಣಿಯಿಂದ ಚುಣಾವಣೆ ಸ್ಪರ್ಧೆ ಮಾಡು ಎಂದರೆ ನಾನು ಪಕ್ಷದಲ್ಲಿ ಟಿಕೆಟ್ ಕೇಳುತ್ತೇನೆ ಎಂದರು.

ಇನ್ನು ನಾಲ್ಕು ದಿನದಲ್ಲಿ ಎಲ್ಲಾ ಸಮುದಾಯದ ಮುಖಂಡರ ಸಭೆ ಕರೆಯುತ್ತೇನೆ. ಅವರು ಟಿಕೆಟ್ ಕೇಳು ಎಂದರೆ ನಾನು ಬಿ ಫಾರಂ ಕೇಳುತ್ತೇನೆ. ಪಕ್ಷದ ವರಿಷ್ಠರು ಬೇಡ ಎಂದರೆ ನಾನು ಅವರ ಮಾರ್ಗದಲ್ಲಿ ನಡೆಯುತ್ತೇನೆ. ಅಥಣಿ ತಾಲೂಕಿನ ಮುಸ್ಲಿಂ ಸಮುದಾಯ ನನ್ನ ಹೃದಯದಲ್ಲಿ ಅಚ್ಚೊತ್ತಿದೆ. ಎಲ್ಲಾ ಸಮುದಾಯದ ಒಪ್ಪಿಗೆ ಪಡೆದುಕೊಂಡು ಪಕ್ಷಕ್ಕೆ ತಿಳಿಸುತ್ತೇನೆ. ನೂರಕ್ಕೆ ನೂರರಷ್ಟು ಪಕ್ಷ ನನ್ನ ಕೈ ಬಿಡುವುದಿಲ್ಲ ಎಂಬ ವಿಶ್ವಾಸವಿದೆ" ಎಂದು ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು.

ಧರ್ಮಸಿಂಗ್ ಅವರಿಂದ ಅಥಣಿ ಅಭಿವೃದ್ಧಿ: ನಿಮ್ಮ ಹಲವು ವಿಚಾರಗಳು ಇಟ್ಟುಕೊಂಡು ಸಭೆ ಸೇರಿದ್ದೀರಿ. ನಾನು ಒಬ್ಬನೇ ಇದ್ದಾಗ ಕೆಲವು ವಿಚಾರಗಳನ್ನು ನಾನೇ ಪ್ರಶ್ನೆ ಮಾಡಿಕೊಳ್ಳುತ್ತೇನೆ. ನಾನು ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದ ನಂತರ ಈ ಭಾಗದಲ್ಲಿ ನೀರಾವರಿ ವಂಚಿತವಾಗಿತ್ತು. ನಾನು ಅವತ್ತಿನ ಸಿಎಂ ಧರ್ಮಸಿಂಗ್ ಅವರಿಗೆ ನೀರಾವರಿ ಯೋಜನೆ ರೂಪಿಸುವಂತೆ ಮನವಿ ಮಾಡಿದ್ದೆ. ಆದರೆ, ಅವರು ಮೊದಲ ಬಾರಿಗೆ ಶಾಸಕರಾದ ಸವದಿ ಕೇಳಿದ್ದಾನೆ ಎಂದು 45 ಕೊಟಿ ರೂ. ಬಿಡುಗಡೆ ಮಾಡಿದ್ದರು.

ಯಾವುದೇ ಪಕ್ಷ ಇರಲಿ. ಪಾಪ ಅವರನ್ನು ನಾನು ನೆನೆಸುತ್ತೇನೆ. ಮಾಡಿದವರಿಗೆ ಮಾಡಿದ್ದಾರೆ ಎನ್ನಬೇಕು ಎಂದು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರನ್ನು ಕೊಂಡಾಡಿದರು. ಅವರ ಹಾಗೂ ಹಲವು ರಾಜಕೀಯ ಮುಖಂಡರಿಂದ ಅಥಣಿ ಅಭಿವೃದ್ಧಿ ಹೊಂದಿದೆ. ದೂರ ದೃಷ್ಟಿ ಇಟ್ಟುಕೊಂಡು ರಾಜಕಾರಣ ಮಾಡಬೇಕು. ಸ್ವಂತಕ್ಕೆ ರಾಜಕಾರಣ ಮಾಡಿದರೆ ಯಾವುದೇ ಉಪಯೋಗವಿಲ್ಲ ಎಂದರು.

ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆ ನಂತರ ಹಲವು ಸಹಕಾರಿ ಕ್ಷೇತ್ರದಲ್ಲಿ ಬದಲಾವಣೆ ತಂದಿದ್ದೇನೆ. ಇಂದು ಶೂನ್ಯ ಬಡ್ಡಿ ದರದಲ್ಲಿ ನಿಮಗೆ ಸಾಲ ಸಿಗುತ್ತದೆ. ರೈತರಿಗೆ ಇದರಿಂದ ಸಹಕಾರಿಯಾಗಿದೆ. ನಿಮ್ಮ ಆಶೀರ್ವಾದಿಂದ ಕಳೆದ 20 ವರ್ಷದಿಂದ ರಾಜಕಾರಣದಲ್ಲಿ ಇದ್ದೇನೆ. ನಾನು ಒಂದು ಹಂತಕ್ಕೆ ಬಂದಿದ್ದೇನೆ. ಈ ಚುನಾವಣೆಯಲ್ಲಿ ನೀವು ನಿಲ್ಲುತ್ತಿರಾ? ಎಂದು ಹಲವರು ಕೇಳುತ್ತಿದ್ದಾರೆ. ಆದರೆ, ಈ ವರೆಗೆ ಯಾವುದೇ ತೀರ್ಮಾನ ಮಾಡಿಲ್ಲ. ನನಗೆ ಟಿಕೆಟ್ ಬೇಕು ಎಂದು ಅರ್ಜಿ ಹಾಕಿಲ್ಲ.

ನಾನು ಹಲವು ಸಮುದಾಯಗಳ ಸಭೆ ಕರಿಯುತ್ತೇನೆ. ನಾಲ್ಕೈದು ಸಮುದಾಯದ ಜನರು ಅಭಿಪ್ರಾಯ ಪಡೆದುಕೊಳ್ಳುತ್ತೇನೆ. ಅವರು ಯಾವ ತಿರ್ಮಾನ ಮಾಡುತ್ತಾರೆ. ಅದಕ್ಕೆ ನಾನು ಬದ್ಧನಾಗಿದ್ದೇನೆ. ಅವರು ಚುಣಾವಣೆಗೆ ನಿಲ್ಲು ಎಂದರೆ ನಾನು ಪಕ್ಷಕ್ಕೆ ಟಿಕೆಟ್ ನೀಡುವಂತೆ ಅರ್ಜಿ ಹಾಕುತ್ತೇನೆ. ಮಾ.27 ರಂದು ನಾನು ಚುನಾವಣೆಗೆ ನಿಲ್ಲುವ ಬಗ್ಗೆ ನಿರ್ಣಯ ಮಾಡುತ್ತೇನೆ ಎಂದರು.

ಇದನ್ನೂ ಓದಿ: ಸವದಿ-ಕುಮಠಳ್ಳಿ ಬೆಂಬಲಿಗರಿಂದ ಸಾಮಾಜಿಕ ಜಾಲತಾಣದಲ್ಲಿ ವಾಗ್ಯುದ್ಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.