ETV Bharat / state

ಶೂನ್ಯ ನೆರಳು ದಿನ: ಖಗೋಳ ಕೌತುಕಕ್ಕೆ ಸಾಕ್ಷಿಯಾದ ಉದ್ಯಾನ ನಗರಿ..

author img

By

Published : Apr 25, 2023, 11:05 PM IST

ZERO SHADOW DAY
ಶೂನ್ಯ ನೆರಳು ದಿನ

ಆಗಸದಲ್ಲಿ ಇವತ್ತು ಖಗೋಳದ ವಿಸ್ಮಯವಾದ ಶೂನ್ಯ ನೆರಳಿನ ದಿನದ ಕೌತುಕ ವೀಕ್ಷಿಸಲು ಸಿಲಿಕಾನ್ ಸಿಟಿ ಮಂದಿ ಮಧ್ಯಾಹ್ನ 12.17ಕ್ಕೆ ತಾರಾಲಯದ ಆವರಣದಲ್ಲಿ ನೆರೆದಿದ್ದರು.

ಬೆಂಗಳೂರು: ಮನುಷ್ಯನ ನೆರಳು ಆತನಿಗೆ ಕಾಣುವುದು ಸಾಮಾನ್ಯ ಸಂಗತಿ. ಆದರೆ, ಇಂದು ಒಂದು ದಿನ ಮಾತ್ರ ಆ ನೆರಳು ಕಾಣಸಿಗಲಿಲ್ಲ. ಇಂತಹ ಅಚ್ಚರಿಯ ಸಂಗತಿಯನ್ನು ನೋಡಲು ಸಾಕಷ್ಟು ಜನರು ಜವಾಹರಲಾಲ್ ತಾರಾಲಯದಲ್ಲಿ ನೆರೆದು ಕೌತುಕಕ್ಕೆ ಸಾಕ್ಷಿಯಾದರು.

ಆಗಸದಲ್ಲಿ ಇವತ್ತು ಖಗೋಳದ ವಿಸ್ಮಯವಾದ ಶೂನ್ಯ ನೆರಳಿನ ದಿನದ ಕೌತುಕ ಆಸ್ವಾದಿಸಲು ಸಿಲಿಕಾನ್ ಸಿಟಿ ಮಂದಿ ಮಧ್ಯಾಹ್ನ 12.17ಕ್ಕೆ ತಾರಾಲಯದ ಆವರಣದಲ್ಲಿ ನೆರೆದಿದ್ದರು. ಸೂರ್ಯನು ನೇರವಾಗಿ ತಲೆಯ ಮೇಲೆ ಬಂದಿರುವ ಹಿನ್ನೆಲೆ ಯಾವುದೇ ಲಂಬವಾದ ವಸ್ತುವಿನ ನೆರಳು ಕಾಣಸಿಗಲಿಲ್ಲ. ಶೂನ್ಯ ನೆರಳಿನ ದಿನವನ್ನು ಕಣ್ತುಂಬಿಕೊಳ್ಳಲು ಯಾವುದೇ ಉಪಕರಣಗಳ ಬಳಕೆಯ ಮಾಡಲಾಗಲಿಲ್ಲ. ಈ ಸಮಯದಲ್ಲಿ ಯಾವುದೇ ವಸ್ತುವಿನ ನೆರಳು ಅಕ್ಕಪಕ್ಕ ಎಲ್ಲೂ ಬೀಳದಿರುವುದನ್ನು ಕಾಣಸಿಕ್ಕಿತು. ಈ ಅಪರೂಪದ ಕ್ಷಣಗಳು ಸಾರ್ವಜನಿಕರು ಕಣ್ತುಂಬಿಕೊಂಡರು.

ಇದನ್ನೂ ಓದಿ: ಮಾಯಕೊಂಡ, ಜಗಳೂರು ಕ್ಷೇತ್ರಗಳಲ್ಲಿ ಬಿಎಸ್​​ವೈ ಭರ್ಜರಿ ಪ್ರಚಾರ

ಶೂನ್ಯ ನೆರಳಿನ ದಿನ ಎಂಬುದು ಒಂದು ಅಪರೂಪದ ಖಗೋಳ ವಿದ್ಯಮಾನವಾಗಿದ್ದು, ಈ ಬಗ್ಗೆ ಜನರಿಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸಲು ರಾಜಭವನ ರಸ್ತೆಯ ಜವಾಹರ್ ನೆಹರು ತಾರಾಲಯದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಂಸ್ಥೆಯ ಆವರಣದಲ್ಲಿ ಶೂನ್ಯ ನೆರಳಿನ ದಿನದ ಅನುಭವವನ್ನು ಕಣ್ತುಂಬಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ತಾರಾಲಯದ ನಿರ್ದೇಶಕ ಪ್ರಮೋದ್ ಜಿ. ಗಲ್ಗಲಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

ಇದನ್ನೂ ಓದಿ: ಮೋದಿ, ಅಮಿತ್ ಶಾ ಗಿಂತ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ದೊಡ್ಡ ನಾಯಕರು: ಬಿ ಕೆ ಹರಿಪ್ರಸಾದ್

ಪ್ರಾಯೋಗಿಕ ಚಟುವಟಿಕೆಗಳ ಆಯೋಜನೆ: ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿ ವೃತ್ತಗಳ ನಡುವಿನ ದಿನಗಳಲ್ಲಿ ಈ ಕೌತುಕ ಸಂಭವಿಸುತ್ತದೆ. ನಗರದಲ್ಲಿ ಏಪ್ರಿಲ್ 25 ಮತ್ತು ಆಗಸ್ಟ್ 18ರಂದು ಸಂಭವಿಸುತ್ತದೆ. ತಾರಾಲಯದಲ್ಲಿ ಇಂದು ಪ್ರಾಯೋಗಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಆ ನಂತರ ಸಂವಾದವನ್ನು ಆಯೋಜಿಸಲಾಗಿತ್ತು ಎಂದು ಅವರು ಹೇಳಿದರು.

ಇದನ್ನೂ ಓದಿ: ಹಾವೇರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 60 ಅಭ್ಯರ್ಥಿಗಳು ಸ್ಪರ್ಧೆ

ವರ್ಷಕ್ಕೆರಡು ಬಾರಿ ನಡೆಯುವ ಶೂನ್ಯ ನೆರಳಿನ ದಿನ: ವರ್ಷಕ್ಕೆ 2 ಬಾರಿ ಬರುವ ಅಚ್ಚರಿ ಇದು. ದಕ್ಷಿಣಾಯನ ಹಾಗೂ ಉತ್ತರಾಯಣದಲ್ಲಿ ತಲಾ 1 ಬಾರಿ ಶೂನ್ಯ ನೆರಳಿನ ದಿನ ಬರುತ್ತದೆ. ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಜನರು ಈ ಶೂನ್ಯ ನೆರಳಿನ ದಿನಕ್ಕೆ ವರ್ಷಕ್ಕೆರಡು ಬಾರಿ ಸಾಕ್ಷಿಯಾಗುತ್ತಾರೆ ಎಂದರು.

ಇದನ್ನೂ ಓದಿ: ರಾಜ್ಯಕ್ಕೆ ಮುಂದಿನ ಮುಖ್ಯಮಂತ್ರಿ ಸಿ.ಟಿ. ರವಿ: ಸಮಾವೇಶದಲ್ಲಿ ಕೆ.ಎಸ್. ಈಶ್ವರಪ್ಪ ಘೋಷಣೆ

ಇದನ್ನೂ ಓದಿ: ಜನರ ಮನದಲ್ಲಿ ಅರವಿಂದ ಬೆಲ್ಲದ್​ ಹೆಸರೇ ಕಾಂಕ್ರೀಟ್ ಆಗಿಬಿಟ್ಟಿದೆ: ಕೇಂದ್ರ ಸಚಿವೆ ಸ್ಮೃತಿ ಇರಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.