ETV Bharat / state

ಕಬ್ಬು ಬೆಳೆಗಾರಿಗೆ ಸಿಹಿಸುದ್ದಿ: ಪ್ರತಿ ಕ್ವಿಂಟಾಲ್​​ಗೆ​ ಎಫ್​ಆರ್​ಪಿ 290 ರೂಗೆ ಹೆಚ್ಚಳ

author img

By

Published : Aug 26, 2021, 4:22 PM IST

Shobha karandlaje
ಶೋಭಾ ಕರಂದ್ಲಾಜೆ

ಸುಮಾರು 5 ಕೋಟಿಯಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರು ಕಬ್ಬನ್ನು ಬೆಳೆಯುತ್ತಾರೆ. ಸುಮಾರು 5 ಲಕ್ಷದಷ್ಟು ಜನ ಕಬ್ಬಿನ ಕಾರ್ಖಾನೆ ಹಾಗೂ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಇವರೆಲ್ಲರನ್ನೂ ಗಮನದಲ್ಲಿಟ್ಟುಕೊಂಡು ಎಫ್​ಆರ್​ಪಿ ಬೆಲೆಯನ್ನು 290 ರೂಗೆ ಹೆಚ್ಚಳ ಮಾಡಲಾಗಿದೆ.

ನವದೆಹಲಿ: ಕಬ್ಬು ಬೆಳೆಗಾರರಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬುಧವಾರ ಸಿಹಿ ಕೊಡುಗೆಯೊಂದನ್ನು ನೀಡಿದೆ. ನ್ಯಾಯಸಮ್ಮತ ಹಾಗೂ ಲಾಭದಾಯಕ ಬೆಲೆಯನ್ನು (ಎಫ್​ಆರ್​ಪಿ) ಕ್ವಿಂಟಾಲ್​ಗೆ 290 ರೂ.ಗೆ ಏರಿಸಲಾಗಿದೆ. ಕಬ್ಬಿಗೆ ಇದುವರೆಗೆ ನೀಡಲಾಗಿರುವ ಅತಿ ಹೆಚ್ಚು ಬೆಲೆ ಆಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಈ ಕುರಿತು ಮಾತನಾಡಿದ ಅವರು, 2020-21ರ ಸಾಲಿನಲ್ಲಿ ಸುಮಾರು 91,000 ಕೋಟಿ ರೂಪಾಯಿ ಮೌಲ್ಯದ 2,976 ಲಕ್ಷ ಟನ್ ಕಬ್ಬನ್ನು ರೈತರು ಬೆಳೆದಿದ್ದರು. ಈ ವರ್ಷ ಅದು 3,088 ಲಕ್ಷ ಟನ್, ಅಂದರೆ ಒಟ್ಟು 1,00,000 ಕೋಟಿ ಮೌಲ್ಯದ ಬೆಳೆಯನ್ನು ಬೆಳೆಯಲಾಗುತ್ತದೆ ಎಂಬುದನ್ನು ಅಂದಾಜಿಸಲಾಗಿದೆ ಎಂದರು.

ಹೀಗಾಗಿ, ಇತ್ತೀಚೆಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಭಾಗಿದಾರರ ಜೊತೆ ಸಭೆ ನಡೆಸಿದೆ. ಕಬ್ಬನ್ನು ಇಥೆನಾಲ್​ಗೂ ಬಳಕೆ ಮಾಡಬೇಕೆಂಬ ನಿರ್ಧಾರ ಮಾಡಿದೆ. ಇದರಿಂದ ಪೆಟ್ರೋಲಿಯಂ ಆಮದನ್ನು ಕಡಿಮೆ ಮಾಡಬಹುದು ಎಂಬ ಉದ್ದೇಶವನ್ನು ಹೊಂದಲಾಗಿದೆ. 2018-19ರಲ್ಲಿ ಸುಮಾರು 3.3 ಮಿಲಿಯನ್​ ಲಕ್ಷ ಮೆಟ್ರಿಕ್​ ಟನ್​ ಕಬ್ಬನ್ನು ಇಥೇನಾಲ್​ಗೆ ಬಳಕೆ ಮಾಡಲಾಗಿತ್ತು. 2019-20ರಲ್ಲಿ 9.26 ಮಿಲಿಯನ್​ ಟನ್​ ಬಳಕೆ ಮಾಡಲಾಗಿತ್ತು ಎಂದು ತಿಳಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ರೈತರಿಗೆ ಸಹಾಯಕವಾಗಲಿದೆ: ಪ್ರತಿ ಕ್ವಿಂಟಾಲ್​ಗೆ ನಮಗೆ ಸುಮಾರು 155 ರೂ ಖರ್ಚು ತಗುಲುತ್ತದೆ ಎಂದು ರೈತರು ಈ ಹಿಂದೆ ಹೇಳಿಕೊಂಡಿದ್ದರು. ಹೀಗಾಗಿ ಅವರಿಗೆ ತಗುಲುವ ಖರ್ಚಿನ ಶೇ. 10 ಭಾಗದಷ್ಟು ಹೆಚ್ಚುವರಿ ಬೆಲೆಯನ್ನು ನಿಗದಿ ಮಾಡಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸುಮಾರು 5 ಕೋಟಿಯಷ್ಟು ಸಣ್ಣ ಮತ್ತು ಅತಿಸಣ್ಣ ರೈತರು ಕಬ್ಬನ್ನು ಬೆಳೆಯುತ್ತಾರೆ. ಸುಮಾರು 5 ಲಕ್ಷದಷ್ಟು ಜನ ಕಬ್ಬಿನ ಕಾರ್ಖಾನೆ ಹಾಗೂ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಇವರೆಲ್ಲರನ್ನೂ ಗಮನದಲ್ಲಿಟ್ಟುಕೊಂಡು ಎಫ್​ಆರ್​ಪಿ ಬೆಲೆಯನ್ನು 290 ರೂಗೆ ಹೆಚ್ಚಳ ಮಾಡಲಾಗಿದೆ. ಇದು ರೈತರಿಗೆ ಸಹಾಯಕವಾಗಲಿದೆ ಎಂಬ ಅಪೇಕ್ಷೆ ನಮ್ಮದು ಎಂದರು.

ಓದಿ: ಕೇಂದ್ರ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕಾಗಿ 2.31 ಲಕ್ಷ ಕೋಟಿ ರೂ. ಮೀಸಲು : ಸಚಿವೆ ಶೋಭಾ ಕರಂದ್ಲಾಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.