ETV Bharat / state

ಎಸಿಬಿಯಿಂದ ಲೋಕಾಯುಕ್ತಕ್ಕೆ ಡಿವೈಎಸ್ಪಿ, ಇನ್​ಸ್ಪೆಕ್ಟರ್​ಗಳ ವರ್ಗಾವಣೆ

author img

By

Published : Oct 17, 2022, 7:13 AM IST

Kn_bng_03_po
ಪೊಲೀಸ್​ ಇಲಾಖೆ

ಎಸಿಬಿ ರದ್ದುಗೊಳಿಸಿದ ಬಳಿಕ ಅದರಿಲ್ಲಿನ ಕೆಲ ಅಧಿಕಾರಿಗಳನ್ನು ಹಾಗೂ ಪೊಲೀಸ್​ ಇನ್ಸ್​​​ಪೆಕ್ಟರ್​ಗಳನ್ನು ಲೋಕಾಯುಕ್ತದ ವಿಭಾಗಗಳಿಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ ರದ್ದುಗೊಳಿಸಿದ ಬಳಿಕ ಅದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲ ಡಿವೈಎಸ್ಪಿ ಹಾಗೂ ಇನ್‌ಸ್ಪೆಕ್ಟರ್‌ಗಳನ್ನು ಕರ್ನಾಟಕ ಲೋಕಾಯುಕ್ತ ಹಾಗೂ ಇತರೆ ವಿಭಾಗಗಳಿಗೆ ವರ್ಗಾವಣೆಗೊಳಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

ಡಿವೈಎಸ್ಪಿಗಳ ವರ್ಗಾವಣೆ: ಪ್ರಮೋದ್ ಕುಮಾರ್(ಲೋಕಾಯುಕ್ತಕ್ಕೆ ವರ್ಗಾವಣೆ), ಎಂ.ಹೆಚ್.ಸತೀಶ್(ಲೋಕಾಯುಕ್ತ), ಬಸವರಾಜ್ ಮುಗದಮ್(ಲೋಕಾಯುಕ್ತ), ವಿಜಯ ಹಡಗಲಿ(ಲೋಕಾಯುಕ್ತ), ಪ್ರಕಾಶ್ ರೆಡ್ಡಿ (ಲೋಕಾಯುಕ್ತ), ಬಿ.ಕೆ.ಮಂಜಯ್ಯ(ಎಎನ್‌ಎಫ್ ಕಾರ್ಕಳ), ಕೆ.ಎಂ.ರಮೇಶ್(ಮೈಸೂರು ಪೊಲೀಸ್ ಅಕಾಡೆಮಿ), ಚಿಕ್ಕಸ್ವಾಮಿ, ಎಂ.ಆರ್.ಗಿರಿಜಾ, ಶಂಕರನಾರಾಯಣ (ಪೊಲೀಸ್ ಪ್ರಧಾನ ಕಚೇರಿ), ವಿಜಯ್ ಬಿರಾದಾರ್(ಹು-ಧಾ,ಸಿಸಿಆರ್‌ಬಿ), ಬಾಬಾ ಸಾಹೇಬ್ ಹುಲ್ಲಣ್ಣನವರ್(ರಾಜ್ಯ ಗುಪ್ತವಾರ್ತೆ) ಅವರನ್ನು ವರ್ಗಾವಣೆ ಮಾಡಲಾಗಿದೆ.

ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ: ಜಿ.ಕುಮಾರಸ್ವಾಮಿ, ಎಂ.ಬಾಲಾಜಿ, ಯೋಗಾನಾಂದ ಸೋನಾರ್, ಮಂಜುನಾಥ್ ಹೂಗಾರ್, ಪಿ. ಗಂಗರುದ್ರಯ್ಯ, ಹೆಚ್.ಎನ್. ಬಾಲಾಜಿ ಬಾಬು, ಪ್ರದೀಪ್ ಕೊಳ್ಳ, ಬಸವರಾಜ ಗೋಪಾಲ್ ಪುಲಾರಿ, ಕೆ.ವೆಂಕಟೇಶ್(ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ), ಚಂದ್ರಪ್ಪ ಬಾರ್ಕಿ, ಎಸ್.ರಾಧಾ, ಭರಮಪ್ಪ ಭೀಮಪ್ಪ ಮಲ್ಲೂರ್​ರನ್ನು ಪೊಲೀಸ್ ಪ್ರಧಾನ ಕಚೇರಿಯಲ್ಲಿ ವರದಿ ಮಾಡಬೇಕೆಂದು ಸೂಚಿಸಲಾಗಿದೆ.

ಇದನ್ನೂ ಓದಿ: ಎಸಿಬಿಯಿಂದ ಲೋಕಾಯುಕ್ತಕ್ಕೆ 352 ಪ್ರಕರಣ ಹಸ್ತಾಂತರ

ಎಸಿಬಿ ರದ್ದುಗೊಳಿಸಿ ಹೈಕೋರ್ಟ್ ತೀರ್ಪು ನೀಡಿತ್ತು. ಬಳಿಕ ರಾಜ್ಯ ಸರ್ಕಾರ ಕೂಡ ಎಸಿಬಿಯನ್ನು ರದ್ದುಗೊಳಿಸಿ ಮಹತ್ವದ ಆದೇಶ ಹೊರಡಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.